ಸುಳ್ಯ: ಎಲ್ಲರೂ ಆಗಸ ದಿಟ್ಟಿಸಿ ನೋಡುತ್ತಿದ್ದಾರೆ. ಬಾನು ಕಪ್ಪಾಗಿದೆ. ಮಳೆ ಬರಲಿ… ಮಳೆ ಬರಲಿ… ಮಳೆ ಬಂದರೆ ಸಾಕು ಎನ್ನುವ ನಿರೀಕ್ಷೆ ಹೆಚ್ಚಾಗಿದೆ. ಸುಬ್ರಹ್ಮಣ್ಯ, ಮಡಿಕೇರಿ ಪ್ರದೇಶದಲ್ಲಿ ಮೋಡ ತುಂಬಿದ್ದು ಇಡೀ ಆಗಸ ಕಪ್ಪಾಗಿದೆ. ಮಳೆ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.
ಕುಡಿಯಲೂ ನೀರಿಲ್ಲ. ತೋಟಕ್ಕೂ ನೀರಿಲ್ಲ. ಅಲ್ಲೆಲ್ಲೋ ಮಳೆ ಬಂತು ನಮ್ಮಲ್ಲಿ ಬರಲೇ ಇಲ್ಲ ಎಂಬ ಕೂಗು, ವಿಷಾದ ಹೆಚ್ಚಾಗುತ್ತಿದೆ. ಇಂದಂತೂ ಮಳೆ ಬಂದೇ ಬರುತ್ತದೆ ಎಂಬ ನಿರೀಕ್ಷೆ ಹೆಚ್ಚಾಗಿದೆ. ಸುಬ್ರಹ್ಮಣ್ಯ ಪ್ರದೇಶದಲ್ಲಿ ಮೋಡ ಕವಿದ ವಾತಾವರಣ ಹೆಚ್ಚಾಗಿದೆ. ಉತ್ತಮ ಮಳೆ ಬರುವ ಲಕ್ಷಣಗಳು ಕಾಣಿಸುತ್ತಿದೆ.
ಮಧ್ಯಾಹ್ನ ಪುತ್ತೂರು, ಸಜಿಪ ಸೇರಿದಂತೆ ವಿವಿಧ ಕಡೆ ಮಳೆ ಬಂದರೆ ನಂತರ ಉಜಿರೆ ಪ್ರದೇಶದಲ್ಲಿ ಮಳೆ ಆರಂಭವಾಗಿದೆ.
ಮುಂಗಾರು ದುರ್ಬಲಗೊಂಡಿದ್ದು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ಚಟುವಟಿಕೆಗಳು ಉಂಟಾದರೆ ಮಾತ್ರ ಮುಂಗಾರು ಸ್ವಲ್ಪ…
ರಾಜ್ಯದಲ್ಲಿ ಕೊರೋನ ವಿಚಾರದಲ್ಲಿ ಹೆಚ್ಚಿನ ಬದಲಾವಣೆ ಏನೂ ಇಲ್ಲ ಎಂದು ಆರೋಗ್ಯ ಸಚಿವ…
ದಕ್ಷಿಣ ಕನ್ನಡ, ಕೊಡಗು ಮೊದಲಾದ ಭಾಗದಲ್ಲಿ ಮಳೆಗೆ ಭೂಕುಸಿತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಪಶ್ಚಿಮಘಟ್ಟದ…
ರಾಜ್ಯದ ಹಲವೆಡೆ ಗುಡುಗು ಮಿಂಚು ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ…
2025ರ ಜೂನ್ 7 ರಿಂದ ಮಂಗಳ ಗ್ರಹವು ಸಿಂಹ ರಾಶಿಗೆ ಪ್ರವೇಶ ಮಾಡಲಿರುವುದು…
ಹೆಚ್ಚಿನ ವಿವರಗಳನ್ನು ಪಡೆಯಲು ಜ್ಯೋತಿಷ್ಯರೊಂದಿಗೆ ಸಂಪರ್ಕಿಸಬಹುದು. 9535156490