ಸುದ್ದಿಗಳು

ಬಾಳುಗೋಡು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನೀರಿನ ಟ್ಯಾಂಕ್ ಕೊಡುಗೆ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸುಳ್ಯ: ರೋಟರಿ ಕ್ಲಬ್ ಸುಳ್ಯ ಹಾಗೂ ರೋಟರಾಕ್ಟ್ ಕ್ಲಬ್ ಸುಳ್ಯ ಜಂಟಿಯಾಗಿ ಬಾಳುಗೋಡು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಿರಿಯಡ್ಕ ಇಲ್ಲಿಗೆ ಅತೀ ಅಗತ್ಯವಿದ್ದ ನೀರಿನ ಟ್ಯಾಂಕ್  ಕೊಡುಗೆಯಾಗಿ ನೀಡಿತು.

Advertisement
Advertisement

ವಿದ್ಯುತ್ ಕಡಿತಗೊಂಡ ಸಂಧರ್ಭದಲ್ಲಿ ಇಲ್ಲಿನ ಶಾಲಾ ವಿಧ್ಯಾರ್ಥಿಗಳು ಬಾವಿಯಿಂದ ನೀರನ್ನು ಸೇದುವ ಕಷ್ಟಕರ ಸನ್ನಿವೇಶಗಳನ್ನು ಮನಗಂಡ ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಹಾಗು ಮುಖ್ಯಶಿಕ್ಷಕರು ಶಾಲೆಗೆ ನೀರಿನ ಟ್ಯಾಂಕ್ ಅಗತ್ಯವಿರುವುದಾಗಿ ರೋಟರಾಕ್ಟ್ ಮಾಜಿ ಅಧ್ಯಕ್ಷ ರೋ. ಚೇತನ್ ಕಜೆಗದ್ದೆಯವರ ಗಮನಕ್ಕೆ ತಂದಿದ್ದರು. ಈ ನಿಟ್ಟಿನಲ್ಲಿ ರೋಟರಾಕ್ಟ್ ಅಧ್ಯಕ್ಷ ರೋ.ಮೋಹಿತ್ ಹರ್ಲಡ್ಕ, ಕಾರ್ಯದರ್ಶಿ ರೋ.ಪ್ರಣೀತ್ ಕಣಕ್ಕೂರು, ರೋಟರಾಕ್ಟ್ ಮಾಜಿ ಅದ್ಯಕ್ಷ ಭವಾನಿಶಂಕರ ಕಲ್ಮಡ್ಕ, ರೋಟರಾಕ್ಟ್ ಮಾಜಿ ಕಾರ್ಯದರ್ಶಿ ವಿಷ್ಣುಪ್ರಸಾದ್ ಕೆದಿಲಾಯ , ರೋ.ಮಧುಸೂದನ್ ಬೂಡು, ರೋಟರಾಕ್ಟ್ ಸಭಾಪತಿ ರೋ.ಪ್ರಭಾಕರ್ ನಾಯರ್, ಮಾತ್ರೃ ಸಂಸ್ಥೆ ರೋಟರಿ ಕ್ಲಬ್ ಸುಳ್ಯ ಇದರ ಅಧ್ಯಕ್ಷ ರೋ.ಪಿ.ಎಚ್.ಎಫ್.ಡಾ.ಪುರುಷೋತ್ತಮ ಕೆ.ಜಿ. , ಇನ್ನರ್ ವ್ಹೀಲ್ ಕ್ಲಬ್ ಸುಳ್ಯ ಇದರ ಅಧ್ಯಕ್ಷೆ ಡಾ.ಹರ್ಷಿತಾ ಪುರುಷೋತ್ತಮ್ ಇವರುಗಳೊಂದಿಗೆ ಇಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಿರಿಯಡ್ಕ ಇಲ್ಲಿಗೆ ಭೇಟಿ ನೀಡಿ ನೀರಿನ ಟ್ಯಾಂಕ್ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳ ಪೋಷಕರು, ಎಸ್.ಡಿ.ಎಂ.ಸಿ ಅಧ್ಯಕ್ಷ ಓಬಯ್ಯ ಕಜೆಗದ್ದೆ, ಶಾಲಾ ಮುಖ್ಯ ಶಿಕ್ಷಕ ಸುಧೀರ್.ಕೆ, ವಿಧ್ಯಾರ್ಥಿಗಳು ಹಾಗು ಶಾಲಾಭಿಮಾನಿಗಳು ಭಾಗವಹಿಸಿದ್ದರು.

ರೋಟರಿ ಕ್ಲಬ್ ಸುಳ್ಯ ಹಾಗು ರೋಟರಾಕ್ಟ್ ಕ್ಲಬ್ ಸುಳ್ಯ ಜಂಟಿಯಾಗಿ ಶಾಲೆಗೆ ನೀರಿನ ಟ್ಯಾಂಕ್ ಕೊಡುಗೆಯಾಗಿ ನೀಡಲು ರೋಟರಿ ಕ್ಲಬ್ ಸುಳ್ಯ ಇದರ ಮಾಜಿ ಅಧ್ಯಕ್ಷರು ರೋ.ಪಿ.ಪಿ.ಪಿ.ಎಚ್.ಎಫ್.ರಾಮಚಂದ್ರ.ಪಿ ಮಾಲಕರು ಭಾರತ್ ಆಗ್ರೋ ಹೌಸ್ ಸುಳ್ಯ ಇವರು ಉತ್ತಮ ದರ್ಜೆಯ 1000ಲೀಟರ್ ಸಾಮರ್ಥ್ಯದ ಸಿಂಟೆಕ್ಸ್ ಕಂಪೆನಿಯ ಟ್ಯಾಂಕ್ ಅನ್ನು ಉಚಿತವಾಗಿ ನೀಡಿರುತ್ತಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಒಂದೇ ರಾಶಿಯಲ್ಲಿ 3 ಗ್ರಹ…..| ತ್ರಿಗ್ರಾಹಿ ಯೋಗವು 50 ವರ್ಷಗಳ ನಂತರ ಸಂಭವಿಸುತ್ತಿದೆ | 5 ರಾಶಿಯವರಿಗೆ ಬಂಪರ್‌ ಲಾಟರಿ..!

ಜೂನ್ 2025ರಲ್ಲಿ ಮಿಥುನ ರಾಶಿಯಲ್ಲಿ ಸೂರ್ಯ, ಬುಧ ಮತ್ತು ಗುರು ಗ್ರಹಗಳ ತ್ರಿಗ್ರಾಹಿ…

4 hours ago

ಕೋಲಾರ ಜಿಲ್ಲೆಯಲ್ಲಿ ನಾಳೆ ಮಾವು ಬೆಳೆಗಾರರಿಂದ ಬಂದ್ ಕರೆ |

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಅಂದಾಜು 800 ರಿಂದ 900…

13 hours ago

ಕೃಷಿ ಜೊತೆಗೆ ತೋಟಗಾರಿಕಾ ಬೆಳೆಗಳಿಗೆ ಆದ್ಯತೆ ನೀಡಿ

ದೇಶದ ಆರ್ಥಿಕತೆಯಲ್ಲಿ ತೋಟಗಾರಿಕೆಯಿಂದ ಹೆಚ್ಚಿನ ಜಿಡಿಪಿ ಬರುತ್ತಿದ್ದು, ಹೂ ಮತ್ತು ಔಷಧಿ ಸಸ್ಯಗಳಿಗೆ…

13 hours ago

ಚಾಮರಾಜನಗರದ ಬೇಡುಗುಳಿ ಬಳಿ ಹುಲಿ ದಾಳಿಗೆ ಮೃತಪಟ್ಟ ಮಹಿಳೆ

ಚಾಮರಾಜನಗರ ತಾಲೂಕು ಬೇಡುಗುಳಿ ಸಮೀಪದ ರಾಮಯ್ಯನ ಪೋಡುವಿನಲ್ಲಿ ಹುಲಿ ದಾಳಿಗೆ ರಂಗಮ್ಮ ಎಂಬ…

13 hours ago

ರಾಜ್ಯದ ವಿವಿದೆಡೆ ಭಾರೀ ಮಳೆ  ಸಾಧ್ಯತೆ | ಹವಾಮಾನ ಇಲಾಖೆ ಮುನ್ಸೂಚನೆ

ಕರಾವಳಿ ಕರ್ನಾಟಕ ಮತ್ತು ಕರ್ನಾಟಕದ ಒಳನಾಡಿನಲ್ಲಿ  ಭಾರಿ ಮಳೆ ಮತ್ತು ಗುಡುಗು ಸಹಿತ…

14 hours ago

14 ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ

ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯಲ್ಲಿ…

14 hours ago