ಸುಳ್ಯ: ಬಿಗ್ ಟಿಕೆಟ್ನ ಡ್ರೀಂ ಸೀರೀಸ್ನ 208 ನೇ ಡ್ರಾದ ವಿಜೇತರಾದ ಸುಳ್ಯ ಜಟ್ಟಿಪಳ್ಳದ ಜೆ.ಎ.ಮಹಮ್ಮದ್ ಫಯಾಜ್ ಅವರಿಗೆ ಬಹುಮಾನ ಮೊತ್ತದ ಚೆಕ್ಕನ್ನು ನ.3 ರಂದು ಹಸ್ತಾಂತರಿಸಲಾಯಿತು.
23 ಕೋಟಿಯ ಮೌಲ್ಯದ ಅಬುಧಾಬಿ ಬಿಗ್ ಟಿಕೆಟ್ ಲಾಟರಿಯ ಅಕ್ಟೋಬರ್ ತಿಂಗಳ ಅದೃಷ್ಟ ಸುಳ್ಯದ ಯುವಕನಿಗೆ ಒಲಿದು ಬಂದಿತ್ತು. ನವೆಂಬರ್ 3 ರಂದು ನಡೆದ ಡ್ರಾ ದಿನದಂದು ಅಕ್ಟೋಬರ್ ತಿಂಗಳ ವಿಜೇತರಿಗೆ ಬಹುಮಾನ ಮೊತ್ತ 12 ಮಿಲಿಯನ್ ಚೆಕ್ ಹಸ್ತಾಂತರಿಸಲಾಯಿತು.
ಬಿಗ್ ಟಿಕೆಟ್ನ ಡ್ರೀಂ ಸೀರೀಸ್ನ 208 ನೇ ಡ್ರಾದ 12 ಮಿಲಿಯನ್ ದಿರ್ಹಾಂ (ಅಂದಾಜು23.17 ಕೋಟಿ) ಪ್ರಥಮ ಬಹುಮಾನ ಸುಳ್ಯ ಜಟ್ಟಿಪಳ್ಳದ ಜೆ.ಎ.ಮಹಮ್ಮದ್ ಫಯಾಜ್ ಅವರಿಗೆ ಒಲಿದು ಬಂದಿತ್ತು. ಮುಂಬೈನಲ್ಲಿ ಉದ್ಯೋಗದಲ್ಲಿರುವ ಫಯಾಜ್ ಕಳೆದ ಆರು ತಿಂಗಳಿನಿಂದ ದೊಡ್ಡ ಮೊತ್ತದ ಬಿಗ್ ಟಿಕೆಟ್ ಗಳನ್ನು ಖರೀದಿಸುತ್ತಿದ್ದು ಪ್ರಥಮ ಬಹುಮಾನದ ರೂಪದಲ್ಲಿ ಅದೃಷ್ಠ ಒಲಿದು ಬಂದಿತ್ತು. ಫಯಾಜ್ ಮತ್ತು ಗೆಳೆಯರು ಖರೀದಿಸಿದ ಟಿಕೆಟ್ಗೆ ಅದೃಷ್ಠ ಒಲಿದು ಬಂದಿತ್ತು. ಇದುವರೆಗೆ ದುಬೈ ನೋಡಿರದ ಫಯಾಜ್ ನನ್ನು ಅರಸಿ ವಿದೇಶದ ಅದೃಷ್ಟ ಒಲಿದು ಬಂದಿತ್ತು. ಇದೀಗ ದುಬೈಗೆ ಭೇಟಿ ನೀಡಿದ ಫಯಾಜ್ ಬಹುಮಾನ ಸ್ವೀಕರಿಸಿದರು.
ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ…
ಕೃಷಿಕರಿಗೆ ಹವಾಮಾನದ ಬದಲಾವಣೆಯ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಡಿಸೀಸ್ ಫಾರ್ಕಾಸ್ಟ್ ಅಂದರೆ ಯಾವ…
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯ ಅನ್ವಯ, ಉತ್ತರ ಕನ್ನಡ…
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣದ ಮುನ್ಸೂಚನೆ…
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…