ಅನುಕ್ರಮ

ಬಿದಿರಿನ ದೋಟಿ ಬಲು ಗಟ್ಟಿ……

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಬಿದಿರು ಹುಲ್ಲಿನ ಗುಂಪಿಗೆ ಸೇರಿದ ಸಸ್ಯ. ವಂಶ, ವೇಣು, ಯುವಫಲ ಎಂದು ಸಂಸ್ಕೃತ ಭಾಷೆಯಲ್ಲಿ ಕರೆಸಿಕೊಳ್ಳುವ ಬಿದಿರು ರೈತ ಮಿತ್ರಕೂಡಾ ಹೌದು. ಜಗತ್ತಿನಲ್ಲಿ 550 ಕ್ಕೂ ಹೆಚ್ಚು ಪ್ರಭೇದಗಳಿವೆ. ನಮ್ಮ ದೇಶದಲ್ಲಿ ದೊರೆಯುವುದು ಕೇವಲ 130 ಜಾತಿಯ ಬಿದಿರುಗಳು ಅದರಲ್ಲೂ ಹೆಚ್ಚಾಗಿ ಸುಮಾರು 40 ವೆರೈಟಿಯ ಬಿದಿರುಗಳು ಕಾಣಸಿಗುತ್ತವೆ.

Advertisement
Advertisement

ದಶಕದ ಹಿಂದೆ ಕೃಷಿಕಾರ್ಯಗಳಿಗೆ ಸಲಕರಣೆಗಳಿಗಾಗಿ ರೈತರು ಅವಲಂಬಿಸುತ್ತಿದ್ದದ್ದು ಕಡಿಮೆ ವೆಚ್ಚದಲ್ಲಿ ಸುಲಭವಾಗಿ ದೊರೆಯುತ್ತಿದ್ದ ಬಿದಿರುಗಳನ್ನು ಅದರಲ್ಲೂ ಮುಖ್ಯವಾಗಿ ಅಡಿಕೆ, ತೆಂಗು, ಕೊಕ್ಕೋ, ಗೇರು ಮರಗಳಲ್ಲಿ ಬೆಳೆದ ಫಲಗಳನ್ನು ಕೀಳಲು ಅನಿವಾರ್ಯವಾದ ದೋಟಿ ತಯಾರಿಸಲು ಕೃಷಿಕರು ಮಾರು ಹೋಗುತ್ತಿದ್ದದ್ದು ಲೆಂಕಿರಿ ಎನ್ನುವ ಬಿದಿರಿಗೆ. ಆದರೆ ಇತ್ತೀಚಿನ ದಿನಗಳಲ್ಲಿ ಹಣಕೊಟ್ಟರೆ ಸುಲಭವಾಗಿ ದೊರೆಯುವ ಅಲ್ಯುಮೀನಿಯಂ ಪೋಲ್ ಬಂದ ನಂತರ ಬಿದಿರಿನ ದೋಟಿಗಳ(ದೋಟಿಗೆಕೊಕ್ಕೆ ಎಂದೂ ಹೆಸರಿದೆ) ಬಳಕೆ ಕಡಿಮೆಯಾಗುತ್ತಿದೆ. ಅದಲ್ಲದೆ ಬಿದಿರು ಒತ್ತೊತ್ತಾಗಿ ಬೆಳೆಯವ ಸಸ್ಯ. ದೋಟಿ ಮಾಡಲು ಅನುಕೂಲವಾದದ್ದನ್ನು ತುಂಡರಿಸಲು ಅದರ ಸುತ್ತಮುತ್ತಲಿರುವ ಅಡೆತಡೆಗಳನ್ನು ನಿವಾರಿಸಿ ತೆಗೆಯಬೇಕು. ಬಿದಿರನ್ನು ತುಂಡರಿಸಿ ತಂದು ಒಣಗಿಸಿ ದೋಟಿ ಮಾಡಲು ಸಮಯ ಜೊತೆಗೆ ತಾಳ್ಮೆಯೂ ಬೇಕು.

ಲೆಂಕಿರಿ ಬಿದಿರಿನ ವಿಶೇಷತೆ:  ಉದ್ದವಾಗಿ ಸಪೂರವಾಗಿ ಬೆಳೆಯುವ ಲೆಂಕಿರಿ ಬಿದಿರು ದೋಟಿ ತಯಾರಿಸಲು ತಕ್ಕದಾದದ್ದು. ಒಳಗಡೆ ಟೊಳ್ಳಾಗಿ ಇರುವುದರಿಂದ ಹಗುರವಾಗಿ ಆದರೆ ಅಷ್ಟೇ ಗಟ್ಟಿಯಾಗಿರುವುದು ಇದರ ಇನ್ನೊಂದು ವಿಶೇಷತೆ. ಫಲಗಳನ್ನು ಕೀಳಲು ಹಗುರವಾದ ದೋಟಿ ಬೇಕಾಗಿರುವುದರಿಂದ ಕೃಷಿಕರು ಹೆಚ್ಚಾಗಿ ಬಳಸುವುದು ಲೆಂಕಿರಿ ಬಿದಿರನ್ನು.ಈ ಜಾತಿಯ ಬಿದಿರುಗಳಲ್ಲಿ ಮುಳ್ಳುಗಳು ಇರುವುದಿಲ್ಲ. ಅಂಕುಡೊಂಕಾಗಿ ಇದ್ದರೂ ಹಸಿಯಾಗಿ ಇರುವಾಗ ನೆಲದ ಮೇಲೆ ಇಟ್ಟು ಭಾರವಾದ ಕಲ್ಲುಗಳನ್ನು ಇದರ ಮೇಲೆ ಇರಿಸುವುದರಿಂದ ಅಥವಾ ಮರಕ್ಕೆ ನೇರವಾಗಿ ಇಳಿಬಿಟ್ಟು ಕೆಳಗಡೆ ಭಾರವಾದಕಲ್ಲುಕಟ್ಟಿ ನೇರವಾಗುವಂತೆ ಮಾಡಬಹುದು.ಬಿದಿರುಒಣಗುವ ಮೊದಲೇಇದರ ಗೆಣ್ಣುಗಳನ್ನು ಸರಿಯಾಗಿ ತುಂಡರಿಸಬೇಕು. ನಂತರ ತೆಳ್ಳಗೆ ಇರುವ ತುದಿಗೆ ಕತ್ತಿಕಟ್ಟಿದರೆ ಮರಗಳಲ್ಲಿ ಬೆಳೆದ ಕಾಯಿಗಳನ್ನು ಕೀಳಲು ದೋಟಿ ತಯಾರಾಗುತ್ತದೆ. ನೀರು ತಾಕದ ಹಾಗೆ ಜತನದಿಂದ ಉಪಯೋಗಿಸಿದರೆ ಎರಡು – ಮೂರು ವರ್ಷಕ್ಕೆ ನಿರಾತಂಕವಾಗಿ ಬಳಸಬಹುದಾದ ಲೆಂಕಿರಿ ಬಿದಿರಿನ ದೋಟಿ ಬಲು ಗಟ್ಟಿ. ಇಲ್ಲವಾದರೆಒಂದೇ ವರ್ಷಕ್ಕೆ ಗೆದ್ದಲುಗಳಿಗೆ ಆಹಾರವಾದೀತು.

# ವಂದನಾರವಿ ಕೆ.ವೈ.ವೇಣೂರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ರಾಜ್ಯದ ಹಲವೆಡೆ ಮುಂದುವರೆದ ಮಳೆ | ಕೊಡಗು ಜಿಲ್ಲೆಯಲ್ಲಿ ಸತತ 7 ದಿನಗಳಿಂದ ಧಾರಾಕಾರ ಮಳೆ | ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ರಾಜ್ಯಾದ್ಯಂತ ಮಳೆ ಮುಂದುವರೆದಿದೆ. ಕೊಡಗು ಜಿಲ್ಲೆಯಲ್ಲಿ ಸತತ 7 ದಿನಗಳಿಂದ ಸುರಿಯುತ್ತಿರುವ  ಧಾರಾಕಾರ…

9 hours ago

ಈ 3 ಗಣೇಶ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಜೀವನದಲ್ಲಿ ಏನಾಗುತ್ತದೆ…?

ಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

10 hours ago

ಹವಾಮಾನ ವರದಿ |29.05.2025 | ಮೇ.31ರಿಂದ ಮಳೆ ಪ್ರಮಾಣ ಕಡಿಮೆ

30.05.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

1 day ago

ರಾಜ್ಯಾದ್ಯಂತ ಭಾರೀ ಮಳೆ  ಹಿನ್ನೆಲೆ | ಜಿಲ್ಲಾ ಸಚಿವರು,ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಆದೇಶ

ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಪ್ರವಾಹ ಬಾಧಿತ ಪ್ರದೇಶಗಳಿಗೆ ತೆರಳಿ ಪರಿಹಾರ…

1 day ago

ಇಂದು ದೇಶಾದ್ಯಂತ ವಿಕಸಿತ ಕೃಷಿ ಸಂಕಲ್ಪ ಅಭಿಯಾನ

ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯದ ವತಿಯಿಂದ ದೇಶಾದ್ಯಂತ ನಾಳೆಯಿಂದ ವಿಕಸಿತ ಕೃಷಿ ಸಂಕಲ್ಪ…

1 day ago