Advertisement
ಅಂಕಣ

ಬಿದಿರಿನ ದೋಟಿ ಬಲು ಗಟ್ಟಿ……

Share

ಬಿದಿರು ಹುಲ್ಲಿನ ಗುಂಪಿಗೆ ಸೇರಿದ ಸಸ್ಯ. ವಂಶ, ವೇಣು, ಯುವಫಲ ಎಂದು ಸಂಸ್ಕೃತ ಭಾಷೆಯಲ್ಲಿ ಕರೆಸಿಕೊಳ್ಳುವ ಬಿದಿರು ರೈತ ಮಿತ್ರಕೂಡಾ ಹೌದು. ಜಗತ್ತಿನಲ್ಲಿ 550 ಕ್ಕೂ ಹೆಚ್ಚು ಪ್ರಭೇದಗಳಿವೆ. ನಮ್ಮ ದೇಶದಲ್ಲಿ ದೊರೆಯುವುದು ಕೇವಲ 130 ಜಾತಿಯ ಬಿದಿರುಗಳು ಅದರಲ್ಲೂ ಹೆಚ್ಚಾಗಿ ಸುಮಾರು 40 ವೆರೈಟಿಯ ಬಿದಿರುಗಳು ಕಾಣಸಿಗುತ್ತವೆ.

Advertisement
Advertisement
Advertisement
Advertisement

ದಶಕದ ಹಿಂದೆ ಕೃಷಿಕಾರ್ಯಗಳಿಗೆ ಸಲಕರಣೆಗಳಿಗಾಗಿ ರೈತರು ಅವಲಂಬಿಸುತ್ತಿದ್ದದ್ದು ಕಡಿಮೆ ವೆಚ್ಚದಲ್ಲಿ ಸುಲಭವಾಗಿ ದೊರೆಯುತ್ತಿದ್ದ ಬಿದಿರುಗಳನ್ನು ಅದರಲ್ಲೂ ಮುಖ್ಯವಾಗಿ ಅಡಿಕೆ, ತೆಂಗು, ಕೊಕ್ಕೋ, ಗೇರು ಮರಗಳಲ್ಲಿ ಬೆಳೆದ ಫಲಗಳನ್ನು ಕೀಳಲು ಅನಿವಾರ್ಯವಾದ ದೋಟಿ ತಯಾರಿಸಲು ಕೃಷಿಕರು ಮಾರು ಹೋಗುತ್ತಿದ್ದದ್ದು ಲೆಂಕಿರಿ ಎನ್ನುವ ಬಿದಿರಿಗೆ. ಆದರೆ ಇತ್ತೀಚಿನ ದಿನಗಳಲ್ಲಿ ಹಣಕೊಟ್ಟರೆ ಸುಲಭವಾಗಿ ದೊರೆಯುವ ಅಲ್ಯುಮೀನಿಯಂ ಪೋಲ್ ಬಂದ ನಂತರ ಬಿದಿರಿನ ದೋಟಿಗಳ(ದೋಟಿಗೆಕೊಕ್ಕೆ ಎಂದೂ ಹೆಸರಿದೆ) ಬಳಕೆ ಕಡಿಮೆಯಾಗುತ್ತಿದೆ. ಅದಲ್ಲದೆ ಬಿದಿರು ಒತ್ತೊತ್ತಾಗಿ ಬೆಳೆಯವ ಸಸ್ಯ. ದೋಟಿ ಮಾಡಲು ಅನುಕೂಲವಾದದ್ದನ್ನು ತುಂಡರಿಸಲು ಅದರ ಸುತ್ತಮುತ್ತಲಿರುವ ಅಡೆತಡೆಗಳನ್ನು ನಿವಾರಿಸಿ ತೆಗೆಯಬೇಕು. ಬಿದಿರನ್ನು ತುಂಡರಿಸಿ ತಂದು ಒಣಗಿಸಿ ದೋಟಿ ಮಾಡಲು ಸಮಯ ಜೊತೆಗೆ ತಾಳ್ಮೆಯೂ ಬೇಕು.

Advertisement

ಲೆಂಕಿರಿ ಬಿದಿರಿನ ವಿಶೇಷತೆ:  ಉದ್ದವಾಗಿ ಸಪೂರವಾಗಿ ಬೆಳೆಯುವ ಲೆಂಕಿರಿ ಬಿದಿರು ದೋಟಿ ತಯಾರಿಸಲು ತಕ್ಕದಾದದ್ದು. ಒಳಗಡೆ ಟೊಳ್ಳಾಗಿ ಇರುವುದರಿಂದ ಹಗುರವಾಗಿ ಆದರೆ ಅಷ್ಟೇ ಗಟ್ಟಿಯಾಗಿರುವುದು ಇದರ ಇನ್ನೊಂದು ವಿಶೇಷತೆ. ಫಲಗಳನ್ನು ಕೀಳಲು ಹಗುರವಾದ ದೋಟಿ ಬೇಕಾಗಿರುವುದರಿಂದ ಕೃಷಿಕರು ಹೆಚ್ಚಾಗಿ ಬಳಸುವುದು ಲೆಂಕಿರಿ ಬಿದಿರನ್ನು.ಈ ಜಾತಿಯ ಬಿದಿರುಗಳಲ್ಲಿ ಮುಳ್ಳುಗಳು ಇರುವುದಿಲ್ಲ. ಅಂಕುಡೊಂಕಾಗಿ ಇದ್ದರೂ ಹಸಿಯಾಗಿ ಇರುವಾಗ ನೆಲದ ಮೇಲೆ ಇಟ್ಟು ಭಾರವಾದ ಕಲ್ಲುಗಳನ್ನು ಇದರ ಮೇಲೆ ಇರಿಸುವುದರಿಂದ ಅಥವಾ ಮರಕ್ಕೆ ನೇರವಾಗಿ ಇಳಿಬಿಟ್ಟು ಕೆಳಗಡೆ ಭಾರವಾದಕಲ್ಲುಕಟ್ಟಿ ನೇರವಾಗುವಂತೆ ಮಾಡಬಹುದು.ಬಿದಿರುಒಣಗುವ ಮೊದಲೇಇದರ ಗೆಣ್ಣುಗಳನ್ನು ಸರಿಯಾಗಿ ತುಂಡರಿಸಬೇಕು. ನಂತರ ತೆಳ್ಳಗೆ ಇರುವ ತುದಿಗೆ ಕತ್ತಿಕಟ್ಟಿದರೆ ಮರಗಳಲ್ಲಿ ಬೆಳೆದ ಕಾಯಿಗಳನ್ನು ಕೀಳಲು ದೋಟಿ ತಯಾರಾಗುತ್ತದೆ. ನೀರು ತಾಕದ ಹಾಗೆ ಜತನದಿಂದ ಉಪಯೋಗಿಸಿದರೆ ಎರಡು – ಮೂರು ವರ್ಷಕ್ಕೆ ನಿರಾತಂಕವಾಗಿ ಬಳಸಬಹುದಾದ ಲೆಂಕಿರಿ ಬಿದಿರಿನ ದೋಟಿ ಬಲು ಗಟ್ಟಿ. ಇಲ್ಲವಾದರೆಒಂದೇ ವರ್ಷಕ್ಕೆ ಗೆದ್ದಲುಗಳಿಗೆ ಆಹಾರವಾದೀತು.

Advertisement

# ವಂದನಾರವಿ ಕೆ.ವೈ.ವೇಣೂರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |

ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…

10 hours ago

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |

ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…

2 days ago

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!

ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.

3 days ago

ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |

ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…

3 days ago

ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು

ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…

4 days ago

ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |

ಅಡಿಕೆಯ ಮೈಟ್‌ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…

4 days ago