ಸುಳ್ಯ: ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲಾ ಕಾರ್ಡ್ದಾರರು ಕಡ್ಡಾಯವಾಗಿ ತಮ್ಮ ಸಮೀಪದ ಪಡಿತರ ಕೇಂದ್ರಗಳಿಗೆ ಹೋಗಿ ಇ- ಕೆವೈಸಿ ಮಾಡಬೇಕೆಂದು ಆಹಾರ ಇಲಾಖೆ ಪ್ರಕಟಣೆ ಹೊರಡಿಸಿದೆ.
ಕಾರ್ಡ್ದಾರರು ತಮ್ಮ ಕುಟುಂಬ ಸಮೇತ ಪಡಿತರ ಅಂಗಡಿಗೆ ತೆರಳಿ ತಮ್ಮ ಬಯೋಮೆಟ್ರಿಕ್ ನೋಂದಣಿ ಮಾಡಿಸಿಕೊಂಡರೆ ಮಾತ್ರ ಪಡಿತರ ದೊರಕುತ್ತದೆ. ಜೂ.1ರಿಂದ ಈ ನಿಯಮ ಜಾರಿಗೆ ಬಂದಿದ್ದು, ಒಮ್ಮೆ ಕುಟುಂಬ ಸದಸ್ಯರೆಲ್ಲಾ ಬಯೋಮೆಟ್ರಿಕ್ ನೀಡಬೇಕು. ಅದಾದ ಬಳಿಕ ಪ್ರತೀ ತಿಂಗಳು ಯಾರಾದರೊಬ್ಬ ಕುಟುಂಬದ ಸದಸ್ಯ ಪಡಿತರ ಕೇಂದ್ರಕ್ಕೆ ತೆರಳಿ ಬಯೋಮೆಟ್ರಿಕ್ ನೀಡಬಹುದು. ಕೆವೈಸಿ ನೀಡದಿದ್ದಲ್ಲಿ ಮುಂದಿನ ತಿಂಗಳಿನಿಂದ ಪಡಿತರ ವಿತರಣೆಯಾಗುವುದಿಲ್ಲ ಎಂದು ಇಲಾಖಾ ಪ್ರಕಟಣೆ ತಿಳಿಸಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement


