ಬೆಳ್ಳಾರೆ: ಬೆಳ್ಳಾರೆ ಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಸುನ್ನೀ ಸೌಹಾರ್ದ ವೇದಿಕೆಯ ಅಧಿಕೃತ ಚಾಲನೆ ಹಾಗೂ ಘೋಷಣಾ ಸಮಾವೇಶವು ಸೋಮವಾರ ಸಂಜೆ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸೌಹಾರ್ದ ವೇದಿಕೆಯ ಸ್ಥಾಪಕಧ್ಯಕ್ಷ ಹಸೈನಾರ್ ಹಾಜಿ ಸಿ ಎಂ ವಹಿಸಿದ್ದರು. ಸೌಹಾರ್ದ ವೇದಿಕೆಯ ಪದಾಧಿಕಾರಿಗಳ ಹೆಸರನ್ನು ಯೂಸುಫ್ ಮುಸ್ಲಿಯಾರ್ ಘೋಷಣೆ ಮಾಡಿದರು. ಸುನ್ನೀ ಸೌಹಾರ್ದ ಸಮಿತಿ ಸದಸ್ಯರುಗಳಾದ ಶಾಫಿ ಬೆಳ್ಳಾರೆ ಹಾಗೂ ಹಸನ್ ಸಖಾಫಿ ಬೆಳ್ಳಾರೆ ಸೌಹಾರ್ದತೆ ಕುರಿತು ಮುಖ್ಯ ಭಾಷಣ ಮಾಡಿದರು. ಹನೀಫ್ ಬೆಳ್ಳಾರೆ ಪಾಸ್ತಾವಿಕ ಭಾಷಣ ಮಾಡಿದರು.
ಬೆಳ್ಳಾರೆ ಜಮಾಅತಿನ ಅಧ್ಯಕ್ಷ ಕೆ ಎಂ ಮಹಮ್ಮದ್ ಹಾಜಿ ಬೆಳ್ಳಾರೆ , ಜಮಾಅತಿನ ಮಾಜಿ ಅಧ್ಯಕ್ಷ ರುಗಳಾದ ಮೂಸಾ ಹಾಜಿ ಕಲ್ಲಪಣೆ ,ಹಾಜಿ ಮಹಮ್ಮದ್ ಇಂಜಿನಿಯರ್ ಬೆಳ್ಳಾರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸೌಹಾರ್ದ ವೇದಿಕೆ ಯ ಪ್ರಧಾನ ಕಾರ್ಯದರ್ಶಿ ಜಲೀಲ್ ಎ ಆರ್ ಸ್ವಾಗತಿಸಿ , ಸದಸ್ಯ ಕೆ ಎ ಬಶೀರ್ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
ಅ.6 ರಂದು ಸುನ್ನೀ ಸೌಹಾರ್ದ ವೇದಿಕೆ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರವನ್ನ ಬೆಳ್ಳಾರೆ ದೇವಿಹೈಟ್ಸ್ ನಲ್ಲಿ ಮಾಡುವುದೆಂದು ಸಂಘಟಕರು ಇದೇ ವೇಳೆ ಪ್ರಕಟನೆಗೆ ತಿಳಿಸಿರುತ್ತಾರೆ.
ಇಂಡೋನೇಷ್ಯಾದ ಸುಲವೆಸಿಯಲ್ಲಿ ಪತ್ತೆಯಾದ ಸುಮಾರು 25,000 ವರ್ಷಗಳ ಹಿಂದಿನ ಮಾನವ ಹಲ್ಲುಗಳಲ್ಲಿ ಅಡಿಕೆ…
‘ಹನುಮಾನ್ ಅಂಶ್’ ಸಿನಿಮಾ 40ನೇ ದಿನವೂ ₹8.25 ಕೋಟಿ ಗಳಿಸಿ ಬಾಕ್ಸ್ ಆಫೀಸ್ನಲ್ಲಿ…
ನೈಋತ್ಯ ಮುಂಗಾರು ಹಿಂದೆ ಸರಿಯಲು ಪೂರಕ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದ್ದು, ಸೆ.17ರ ವೇಳೆಗೆ ಪಶ್ಚಿಮ…
ಕರ್ನಾಟಕದ ಹಲವು ಭಾಗಗಳಲ್ಲಿ ಸೆ.17ರಂದು ಸಂಜೆ ಹಾಗೂ ರಾತ್ರಿ ಅಲ್ಲಲ್ಲಿ ಸಾಮಾನ್ಯ ಮಳೆಯ…
ಕೋಲಾರದಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ ಸುಮಾರು 10 ಟನ್ ಸಿಂಥೆಟಿಕ್ ಅಡಿಕೆಯನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವುದಾಗಿ…
ಮಂಗಳೂರಿನಲ್ಲಿ ಸೆ.18ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ…