ಬೆಳ್ಳಾರೆ: ಬೆಳ್ಳಾರೆ ಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಸುನ್ನೀ ಸೌಹಾರ್ದ ವೇದಿಕೆಯ ಅಧಿಕೃತ ಚಾಲನೆ ಹಾಗೂ ಘೋಷಣಾ ಸಮಾವೇಶವು ಸೋಮವಾರ ಸಂಜೆ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸೌಹಾರ್ದ ವೇದಿಕೆಯ ಸ್ಥಾಪಕಧ್ಯಕ್ಷ ಹಸೈನಾರ್ ಹಾಜಿ ಸಿ ಎಂ ವಹಿಸಿದ್ದರು. ಸೌಹಾರ್ದ ವೇದಿಕೆಯ ಪದಾಧಿಕಾರಿಗಳ ಹೆಸರನ್ನು ಯೂಸುಫ್ ಮುಸ್ಲಿಯಾರ್ ಘೋಷಣೆ ಮಾಡಿದರು. ಸುನ್ನೀ ಸೌಹಾರ್ದ ಸಮಿತಿ ಸದಸ್ಯರುಗಳಾದ ಶಾಫಿ ಬೆಳ್ಳಾರೆ ಹಾಗೂ ಹಸನ್ ಸಖಾಫಿ ಬೆಳ್ಳಾರೆ ಸೌಹಾರ್ದತೆ ಕುರಿತು ಮುಖ್ಯ ಭಾಷಣ ಮಾಡಿದರು. ಹನೀಫ್ ಬೆಳ್ಳಾರೆ ಪಾಸ್ತಾವಿಕ ಭಾಷಣ ಮಾಡಿದರು.
ಬೆಳ್ಳಾರೆ ಜಮಾಅತಿನ ಅಧ್ಯಕ್ಷ ಕೆ ಎಂ ಮಹಮ್ಮದ್ ಹಾಜಿ ಬೆಳ್ಳಾರೆ , ಜಮಾಅತಿನ ಮಾಜಿ ಅಧ್ಯಕ್ಷ ರುಗಳಾದ ಮೂಸಾ ಹಾಜಿ ಕಲ್ಲಪಣೆ ,ಹಾಜಿ ಮಹಮ್ಮದ್ ಇಂಜಿನಿಯರ್ ಬೆಳ್ಳಾರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸೌಹಾರ್ದ ವೇದಿಕೆ ಯ ಪ್ರಧಾನ ಕಾರ್ಯದರ್ಶಿ ಜಲೀಲ್ ಎ ಆರ್ ಸ್ವಾಗತಿಸಿ , ಸದಸ್ಯ ಕೆ ಎ ಬಶೀರ್ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
ಅ.6 ರಂದು ಸುನ್ನೀ ಸೌಹಾರ್ದ ವೇದಿಕೆ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರವನ್ನ ಬೆಳ್ಳಾರೆ ದೇವಿಹೈಟ್ಸ್ ನಲ್ಲಿ ಮಾಡುವುದೆಂದು ಸಂಘಟಕರು ಇದೇ ವೇಳೆ ಪ್ರಕಟನೆಗೆ ತಿಳಿಸಿರುತ್ತಾರೆ.
ಆಂಧ್ರಪ್ರದೇಶ ಸರ್ಕಾರ ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳನ್ನು ಮನೆ ಬಾಗಿಲಿಗೆ ತಲುಪಿಸುವ “Farm-to-Home”…
2025-26ರಲ್ಲಿ ಭಾರತದಲ್ಲಿ 3765.63 ಲಕ್ಷ ಟನ್ ಆಹಾರ ಉತ್ಪಾದನೆ ಸಾಧ್ಯತೆ ಇದ್ದು, ಇದು…
ವಿ.ಆರ್.ಎನ್ ಇನ್ಪೋಟೆಕ್ ಕಂಪೆನಿಯ ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ ಹಾಗೂ ಟೆಲಿಕಾಲರ್ ಹುದ್ದೆಗಳಿಗೆ ಮೇ…
ಬ್ಲಿಂಕಿಟ್ ಕಂಪೆನಿಯ ಪಿಕ್ಕರ್ ಹಾಗೂ ಪ್ಯಾಕರ್ ಹುದ್ದೆಗಳಿಗೆ ಜೂನ್ 1ರಂದು ಮಂಗಳೂರಿನಲ್ಲಿ ನೇರ…
ಬಕ್ರೀದ್ಗೂ ಮುನ್ನ ಗೋಹತ್ಯೆ ಮತ್ತು ಗೋ ರಕ್ಷಣೆಯ ವಿಚಾರ ಮತ್ತೆ ದೇಶದಲ್ಲಿ ಚರ್ಚೆಗೆ…
ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ದಕ್ಷಿಣ ಕನ್ನಡದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ…