ಬೆಳ್ಳಾರೆ : ಶ್ರೀ ಸದಾಶಿವ ಶಿಶುಮಂದಿರ ಬೆಳ್ಳಾರೆ ಮತ್ತು ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇದರ ಆಶ್ರಯದಲ್ಲಿ ಶಿಶುಮಂದಿರದಲ್ಲಿ ವನಮಹೋತ್ಸವ ಹಾಗೂ ಪರಿಸರ ಮಾಹಿತಿ ಕಾರ್ಯಕ್ರಮ ಜರಗಿತು.
ಸಭಾಧ್ಯಕ್ಷತೆ ವಹಿಸಿದ ಶಿಶುಮಂದಿರದ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಜೋಶಿ ಪರಿಸರ ಜಾಗೃತಿ ಹಾಗೂ ಜಲ ಮರುಪೂರಣ ಸೇರದಂತೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಶಿಶುಮಂದಿರದ ಆವರಣದಲ್ಲಿ ಸಾಗುವಾನಿ, ಹಲಸು, ಮಾವಿನ ಗಿಡಗಳನ್ನು ನೆಡಲಾಯಿತು.
ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಬೆಳ್ಳಾರೆ ಟೌನ್ನ ಅಧ್ಯಕ್ಷ ರೊ| ಬಿ. ನರಸಿಂಹ ಜೋಶಿ, ಶಮಿತಾ ಪಿ. ರೈ ಪನ್ನೆ, ಜಗನ್ನಾಥ ರೈ ತಂಬಿನಮಕ್ಕಿ, ರಾಮಚಂದ್ರ ಭಟ್ ಕೊಳಂಬಳ, ಸಂಜೀವ ಕಲಾೈ, ವಾಸುದೇವ ಆಚಾರ್ಯ ಕೊಡಿಯಾಲ, ರಮೇಶ್, ಮಾತೃಮಂಡಳಿಯ ಸದಸ್ಯೆಯರು ಹಾಗೂ ಪೋಷಕ ವರ್ಗ ಉಪಸ್ಥಿತರಿದ್ದರು.
ಶಿಶುಮಂದಿರ ಸಂಚಾಲಕರಾದ ಪಿ. ಮಹಾಲಿಂಗ ಭಟ್ ಸ್ವಾಗತಿಸಿ, ಮಾತಾಜಿ ತೇಜೇಶ್ವರಿ ವಂದಿಸಿದರು.
‘ಪನಸೋಪಾಖ್ಯಾನ’ ಪ್ರಸಂಗವು ತಾಳಮದ್ದಳೆ ರೂಪದಲ್ಲಿ ಪ್ರಸ್ತುತವಾಯಿತು. ಇದು ಕಾಲ್ಪನಿಕ ಕಥಾಭಾಗವನ್ನು ಹೊಂದಿರುವ ಪ್ರಸಂಗ.…
ಜೂನ್ 18 ರಿಂದ ಮುಂಗಾರು ಮತ್ತೆ ದುರ್ಬಲಗೊಂಡು ಮಳೆ ಕಡಿಮೆಯಾಗುವ ಸೂಚನೆಗಳಿವೆ.
ತಾಂಬೂಲ ಸೇವನೆಗೆ ಅದರದ್ದೇ ಆದ ಇತಿಹಾಸ ಇದೆ. ಜಗತ್ತಿನ ಅಭಿವೃದ್ಧಿ ಹೊಂದಿದ ಮತ್ತು…
ಮಕ್ಕಳಲ್ಲಿ ಬೌದ್ಧಿಕ ಸಾಮರ್ಥ್ಯ ಗಣಿತ ಹಾಗೂ ಭಾಷಾ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಕಲಿಕಾ ಮಾದರಿ…
ಅಡಿಕೆ ಬೆಳೆಗಾರರಿಗೆ ಜೂನ್ ಆರಂಭವಾಗುತ್ತಿದ್ದಂತೆಯೇ ಎಳೆ ಅಡಿಕೆ ಬೀಳುವ ಸಮಸ್ಯೆ ಆರಂಭವಾಗಿದೆ. ವಿವಿಧ…