Advertisement
ಅನುಕ್ರಮ

ಬೊಮ್ಮಕ್ಕನ ಬದ್ಕು……

Share

ಬೀದಿ ಗುಡ್ಸುವ ಬೊಮ್ಮಕ್ಕ
ಪೊರ್ಲೂನ ಕಂಟ್….
ಅಪ್ಪ ಅವ್ವ ಹೋದ ಮೇಲೆ
ಬೀದಿ ಗುಡ್ಸಿ ಸಾಗಿಸ್ತಿತ್ತ್
ಅವಳ ಬದ್ಕ್…

ಯಾರೋ ಕೊಟ್ಟ ಹರ್ಕುಲ್ ಸೀರೆಲಿ
ಮುಚ್ಚಿಕಂತಿತ್ತು ಅವಳ ಮಾನ
ಬೀದಿಲಿ ಸಿಕ್ಕಿದ ಗೋಣಿ ಚೀಲಲಿ
ಕಟ್ಟಿಕಂಡಿತ್ತ್ ಅವಳ ಮನೆ ಮಾಡ್ ನಾ

ಹಂಗೂ ಹಿಂಗು ಸಾಗ್ತಾ ಇತ್ತ್
ಅವಳ ಬದ್ಕು
ಬೀದಿಲಿ ಹೋಗೋ ರಾಮಪ್ಪಂಗೆ
ಅವಳ ಸೊಂಟದ ಮೇಲೆನೇ ಕಣ್ಣ್

ಹರ್ಕ್ ಲ್ ಸೀರೆ ಬಿಚ್ಚಿ ಹೋತ್
ಪೊರ್ಲುನಾ ಹೂ ಬಾಂಡಿ ಹೋತ್
ಬೀದಿ ನಾಯಿ ಜೊಲ್ಲು ಸುರ್ಸಿ
ಉಂಡು ತೇಗಿ ಬುಟ್ಟು ಹೋತ್

ಅವಳ ಮನೆ ಸುತ್ತಮುತ್ತ ತಿರ್ಗ್ತ್ ತ್ತಾ ಇದ್ದ
ಕುಕ್ಕಿ ಕುಕ್ಕಿ ತಿಂಬ ಗಿಡ್ಗಂಗ……
ಹಿಂದೆ ಮುಂದೆ ಯಾರು ಇಲ್ಲೆ
ಅತ್ತ ಇತ್ತ ಹೋಕು ಆದ್ಲೆ

ಗೋಣಿ ಚೀಲ ಮಾಡ್ ಕೆಳಗೆ
ಬೊಮ್ಮಕ್ಕನ ಬದ್ಕ್ ಕಂರ್ಚಿ ಹೋತ್
ಬೀದಿ ಗುಡ್ಸಿ ಬದ್ಕ್ ತಿತ್ತ್
ಬೀದಿ ನಾಯ್ಗಳ ಬಾಯಿಗೆ ಸಿಕ್ಕಿ ಬೀದಿಲೇ ಹೆಣ ಆತ್..

# ಅಪೂರ್ವ ಕೊಲ್ಯ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

Published by
ಅಪೂರ್ವಚೇತನ್ ಪೆರಂದೋಡಿ

Recent Posts

ಅವೈಜ್ಞಾನಿಕ ಮಳೆ ವರದಿ ಶೈಕ್ಷಣಿಕ ವಲಯಕ್ಕೆ ತೊಂದರೆ – ಹವಾಮಾನ ಮುನ್ಸೂಚನೆ ಕುರಿತು ಎಸ್.ಎಲ್. ಭೋಜೆಗೌಡ ಕಳವಳ

ಅವೈಜ್ಞಾನಿಕ ಮಳೆ ಮುನ್ಸೂಚನೆಗಳ ಆಧಾರದ ಮೇಲೆ ಪದೇ ಪದೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವುದು…

2 hours ago

ಹವಾಮಾನ ವರದಿ | 26-07-2026 | ಕರ್ನಾಟಕದಲ್ಲಿ ಮತ್ತೆ ಮಳೆ ಚುರುಕು – ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ | ಕರಾವಳಿ–ಮಲೆನಾಡಿನಲ್ಲಿ 10 ದಿನ ಮಳೆಯ ಸಾಧ್ಯತೆ

ಪಶ್ಚಿಮ ಬಂಗಾಳ ಕರಾವಳಿಯಲ್ಲಿ ರೂಪುಗೊಳ್ಳಲಿರುವ ವಾಯುಭಾರ ಕುಸಿತದಿಂದ ಕರ್ನಾಟಕದಲ್ಲಿ ಮತ್ತೆ ಮುಂಗಾರು ಚುರುಕುಗೊಳ್ಳುವ…

2 hours ago

ಅಡಿಕೆ ತಳಿಗಳ ಬಗ್ಗೆ ಹೊಸ ವೈಜ್ಞಾನಿಕ ಅಧ್ಯಯನ – ಅಡಿಕೆ ತಳಿಗಳಲ್ಲೂ ಆಲ್ಕಲಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸ

ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…

1 day ago

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ – ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಜು.25ರಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…

2 days ago

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಜುಲೈ 30ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…

2 days ago