ಜಿಲ್ಲೆ

ಬೋರ್ಡ್ ಬೇರೆ……. ಕಾಮಗಾರಿ ಬೇರೆ….!

Share

ಆಲಂಕಾರು : ಇಲ್ಲೊಂದು ಕಾಮಗಾರಿ ನಡೆದಿದೆ… ಆದರೆ ಕಾಮಗಾರಿ ಹೆಸರು , ಊರಿನ ಹೆಸರು ಮಾತ್ರಾ ಬೇರೆ…!

ಪುತ್ತೂರು ತಾಲ್ಲೂಕಿನ ಕೊಯಿಲ ಗ್ರಾಮದ ಕುದ್ಲೂರು ಅಂಗನವಾಡಿ ಕೇಂದ್ರದ ಬಳಿ ಕೆಲ ಸಮಯದ ಹಿಂದೆ ಕಾಂಕ್ರೀಟ್ ರಸ್ತೆ ಯಾಗಿತ್ತು. ಈ ಕಾಮಗಾರಿಗೆ 2 ವರ್ಷ ಕಳೆಯಿತು. ಆದರೆ ಬೋರ್ಡ್ ಹಾಕಿದವರು ಮಾತ್ರಾ ಈ ಕಾಮಗಾರಿ ಪ್ರದೇಶ ಗಮನಿಸಲಿಲ್ಲ. ಊರಿನವರು ಯಾರು ಗಮನಿಸಲಿಲ್ಲ. ಇದರಲ್ಲಿ  ಕಾಮಗಾರಿ ಫಲಕ ಮಾತ್ರಾ ಬದಲಾಗಿದೆ.

ಈ  ಗ್ರಾಮದ ಹೆಸರು ಕೊಯಿಲ , ಆದರೆ  ಫಲಕದಲ್ಲಿ ಕೋಡಿಂಬಳ ಹೆಸರು ಇದೆ…!. ಊರಿನ ಹೆಸರು ಕುದ್ಲೂರು. ಆದರೆ ಈ ಫಲಕದಲ್ಲಿ ಮಾಲೇಶ್ವರ ಅಂತ ಇದೆ…!. ಇದು ಹೇಗಾಯಿತು ಎನ್ನುವುದು  ಪ್ರಶ್ನೆಯಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಇದನ್ನು ಗಮನಿಸಲಿಲ್ಲವೇ ? ಶಾಸಕ ಎಸ್.ಅಂಗಾರ ಗಮನಕ್ಕೂ ಇದು ಬರಲಿಲ್ಲವೇ ? ಅಧಿಕಾರಿಗಳು ನೋಡಲಿಲ್ಲವೇ ಎಂಬಿತ್ಯಾದಿ ಪ್ರಶ್ನೆಗೆ ಉತ್ತರವಿಲ್ಲ. ಕಾಮಗಾರಿಗೆ ಫಲಕ ಏಕೆ ಅವಶ್ಯ ಎಂಬ ಪ್ರಶ್ನೆಗೆ, ಕಾಮಗಾರಿ ನಡೆಸಿದ ಬಗ್ಗೆ ಊರ ಜನರಿಗೆ ಸರಿಯಾದ ಮಾಹಿತಿ ಬೇಕು ಎಂಬುದಷ್ಟೇ ಉದ್ದೇಶ.

ಫಲಕ ಬದಲಾಗಿ ಅನೇಕ ಸಮಯವಾದರೂ ಯಾರೂ ಗಮನಿಸದೇ ಇರುವುದು  ಅಚ್ಚರಿ ಮೂಡಿಸಿದೆ. ಅಧಿಕಾರಿಗಳು , ಜನಪ್ರತಿನಿಧಿಗಳು ಸರಿಯಾದ ಫಲಕ ಅಳವಡಿಸಬೇಕು ಎಂದು ಸ್ಥಳೀಯರಾದ  ಜೀಯಾ ಝೀಯಾ ಆತೂರು  ಸುಳ್ಯನ್ಯೂಸ್.ಕಾಂ ಗೆ ಹೇಳುತ್ತಾರೆ.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಒಂದು ವರ್ಷದಲ್ಲಿ 10 ಲಕ್ಷ ಮನೆಗಳಿಗೆ ಸೌರ ಫಲಕ

ಮನೆ ಛಾವಣಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದಿಸಿ ಮನೆಗಳಿಗೆ…

6 hours ago

ನಂದಿನಿ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ

ನಂದಿನ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ ವ್ಯಕ್ತಪಡಿಸಿದೆ. …

6 hours ago

ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳು | ಒಂದು ವರ್ಷದಲ್ಲಿ 22 ಸಾವಿರ ಸೈಬರ್ ಪ್ರಕರಣ ದಾಖಲು |

ದಿನದಿಂದ ದಿನಕ್ಕೆ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ…

6 hours ago

ಬೆಳ್ಳಿ ಧರಿಸುವುದು ಎಲ್ಲಾ ರಾಶಿಯವರಿಗೆ ಉತ್ತಮವೇ…? | ಯಾವೆಲ್ಲಾ ರಾಶಿಗಳಿಗಳಿಗೆ ಹಾನಿ..?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

6 hours ago

ಸಂಬಾರ ಮಂಡಳಿಯ ದರ ಪಟ್ಟಿಯಲ್ಲಿ ಶಿರಸಿಯ ಕಾಳುಮೆಣಸು ನಮೂದಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ

ಶಿರಸಿಯ ಕಾಳುಮೆಣಸಿನ ಬೆಲೆಯನ್ನು ಸಂಬಾರ ಮಂಡಳಿಯ ದರಪಟ್ಟಿಯಲ್ಲಿ ನಮೂದಿಸುವಂತೆ ಕೇಂದ್ರ ವಾಣಿಜ್ಯ ಸಚಿವ…

14 hours ago

ಹೆತ್ತವರವನ್ನು ನೋಡಿಕೊಳ್ಳದ ಮಕ್ಕಳ ದಾನಪತ್ರ ರದ್ದುಗೊಳಿಸುವ ಅವಕಾಶ ಕಾನೂನಿನಲ್ಲಿದೆ | ಸಚಿವ ಕೃಷ್ಣಭೈರೇಗೌಡ

ತಂದೆ-ತಾಯಿ ಹಾಗೂ ಹಿರಿಯರನ್ನು ಆರೈಕೆ ಮಾಡದ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ನೀಡಿದ ದಾನಪತ್ರವನ್ನು…

14 hours ago