ಬೌದ್ಧಿಕವಾದ ಸಂಘರ್ಷ ಎಷ್ಟು ಹೆಚ್ಚಾದರೂ ಮುಂದಿನ ಜನಾಂಗಕ್ಕೆ ಅದೊಂದು ಶುಭ…….

July 27, 2019
10:00 AM

ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಶುಕ್ರಾಚಾರ್ಯ’ ’
ಪ್ರಸಂಗ : ಮೃತಸಂಜೀವಿನಿ

Advertisement
Advertisement
Advertisement

 

Advertisement

(ಬ್ರಹಸ್ಪತಿ ಪುತ್ರ ಕಚನು ಮೃತಸಂಜೀವಿನಿ ವಿದ್ಯೆಯನ್ನು ಕಲಿಯಲು ಶುಕ್ರಾಚಾರ್ಯರ ಆಶ್ರಮಕ್ಕೆ ಬರುತ್ತಾನೆ)

“ವತ್ಸಾ … ಕೆಲವೊಮ್ಮೆ ಈ ಪ್ರಪಂಚದಲ್ಲಿ ನಾವು ಎಣಿಸಿದಂತೆ ಅಲ್ಲ, ಎಣಿಸಿದ್ದಕ್ಕೆ ವಿಪರೀತವಾಗಿ ಕೆಲವು ಘಟನೆಗಳು ಒದಗುತ್ತವೆ. ಆಗ ಎಂತಹ ವಿದ್ವಾಂಸನಾದರೂ ಒಮ್ಮೆಗೆ ಆಶ್ಚರ್ಯಚಕಿತನಾಗುತ್ತಾನೆ. ಹೇಳಿ ಕೇಳಿ ವೃತ್ತಿಯಿಂದಲೂ, ಕ್ಷೇತ್ರ ವ್ಯತ್ಯಾಸದಿಂದಲೂ ನಿನ್ನ ತಂದೆಯಾದ ಬೃಹಸ್ಪತಿಗೂ, ನನಗೂ ಯಾವಾಗಲೂ ಸಂಘರ್ಷವೇ. ಆದರೆ ಒಂದು ಸಂತೋಷ. ನಮ್ಮೊಳಗೆ ಆಗುತ್ತಿರುವ ಸಂಘರ್ಷವು ಬೌದ್ಧಿಕವಾದುದು, ಭೌತಿಕವಾದುದಲ್ಲ. ಪ್ರಪಂಚದಲ್ಲಿ ಬೌದ್ಧಿಕವಾದ ಸಂಘರ್ಷ ಎಷ್ಟು ಹೆಚ್ಚಾದರೂ ಮುಂದಿನ ಜನಾಂಗಕ್ಕೆ ಅದೊಂದು ಶುಭ ಪರಿಣಾಮವಾಗುತ್ತದೆ. ನೀನು ಬೃಹಸ್ಪತಿಯ ಮಗನಾದ್ದರಿಂದ ನನಗೆ ಅನ್ಯಥಾ ಭಾವನೆಯೇ ಇಲ್ಲ. ವೈಯಕ್ತಿಕವಾಗಿ ನಿನ್ನ ತಂದೆಗೂ ನನಗೂ ಏನೂ ರಾಗದ್ವೇಷಾದಿಗಳಿಲ್ಲ. ನಾವು ವಹಿಸಿಕೊಂಡಿರುವ ಪಕ್ಷ, ಆ ಪಕ್ಷದ ಉತ್ಕರ್ಷವನ್ನು ಬಯಸುವುದು ತಾತ್ವಿಕವಾಗಿ, ವೈಯಕ್ತಿಕವಾಗಿ ನೈತಿಕದ ಹೊಣೆ ಎಂಬುದರಲ್ಲಿ ಮಾತ್ರ. ಅವರಿದ್ದಲ್ಲಿ ನಾನಿಲ್ಲ, ನಾನಿದ್ದಲ್ಲಿ ಅವರಿಲ್ಲ. ಆದ ಕಾರಣ ಒಂದು ಮನೆಯ ಮಾಡಿನಡಿ ನಮಗೆ ಹೊಂದಾಣಿಕೆಯಿಲ್ಲ…

Advertisement

ನಿನ್ನ ಕೇಳಿಕೆಯಂತೂ ಸಾಧ್ಯವಿದ್ದ ಮಟ್ಟಿಗೆ ಯಾವ ವಿಘ್ನವಿಡ್ಡೂರಗಳಿದ್ದರೂ ಕಡೆಗಣಿಸಿ ನಾನು ಮಾಡಬೇಕಾದ, ಮಹಾಪ್ರಧಾನವಾದಂತಹ ಒಂದು ಕರ್ತವ್ಯವದು. ಪ್ರಾಣದಾನವು ದೊಡ್ಡ ದಾನ. ಹಾಗೆಯೇ ಅನ್ನದಾನ, ಔಷಧಿದಾನ. ನೀನು ಕೇಳುವಂತಹುದು ‘ವಿದ್ಯಾದಾನ.’ ವಿದ್ಯೆಯಿಂದ ಅಮೃತವನ್ನುಣಿಸುವುದು. ಮಿಕ್ಕದ್ದೆಲ್ಲ ಕ್ಷಣಿಕ. ಈ ದೇಹವಿದ್ದಷ್ಟು ಕಾಲ ಪ್ರಾಣದಾನ. ಹಸಿವೆ ಮುಗಿಯುವಲ್ಲಿಯ ತನಕ ಅನ್ನದಾನ. ರೋಗ ನಿವೃತ್ತಿಯಾಗುವಲ್ಲಿಯ ತನಕ ಔಷಧಿದಾನ. ಆದರೆ ಜೀವಾತ್ಮನಿಗೆ ಅಮೃತತ್ವ ಯೋಗವನ್ನು ಕರುಣಿಸುವುದು ಸತ್ಯವೂ, ಶಾಶ್ವತವೂ, ಸನಾತನವೂ ಆದ ‘ವಿದ್ಯೆ.’ ಆಚಾರ್ಯನೆಂದರೆ ಸಾಕ್ಷಾತ್ ಪರಬ್ರಹ್ಮ. ಅದು ಶ್ರುತಿವಾಕ್ಯ. ನೀನು ನನ್ನ ಶಿಷ್ಯ. ನನ್ನ ಗುರುತ್ವ ಅರ್ಥಪೂರ್ಣವಾಗಬೇಕು.”

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ

ಇದನ್ನೂ ಓದಿ

ಯಾರಿಗೆ ಧೈರ್ಯ ಉಂಟು ಮಾರಾಯ್ರೆ, ‘ಈ ತುಪ್ಪದ ಭರಣಿಯನ್ನು ಒಲೆಯ ಬುಡದಲ್ಲಿ ಇಡಲು…!’
April 13, 2020
10:23 PM
by: ನಾ.ಕಾರಂತ ಪೆರಾಜೆ
ಕತ್ತಲೆಯ ಕೋಣೆಯಲ್ಲಿದ್ದ ಅಂಧಕಾರಕ್ಕೆ ನೂರು ವರುಷ ಆಯುಸ್ಸು….
November 7, 2019
2:49 PM
by: ನಾ.ಕಾರಂತ ಪೆರಾಜೆ
‘ನಮ್ಮ ಶಿವ ದೇವರು ವಿಷ ಕುಡಿದರೂ ಸಾಯಲಿಲ್ಲ’ ಅಂತ ಭಾವುಕರು ಹೇಳ್ತಾರಲ್ಲ….. ‘ಯಾಕೆ ಶಿವ ಸಾಯಲಿಲ್ಲ’?
October 21, 2019
11:00 AM
by: ನಾ.ಕಾರಂತ ಪೆರಾಜೆ
‘ಕುಮಾರ’ ಶಬ್ದದ ಅರ್ಥವೇನು? ವೇದಾಂತಿಗಳು ಹೇಳುತ್ತಾರೆ……
October 12, 2019
2:33 PM
by: ನಾ.ಕಾರಂತ ಪೆರಾಜೆ

You cannot copy content of this page - Copyright -The Rural Mirror