ಸುದ್ದಿಗಳು

ಬ್ಯಾರೀಸ್ ಚೇಂಬರ್ ಆಫ಼್ ಕಾಮರ್ಸ್ ಜುಬೈಲ್ ಘಟಕದ ಉದ್ಘಾಟನೆ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಜುಬೈಲ್: ಬ್ಯಾರೀಸ್ ಚೇಂಬರ್ ಆಫ಼್ ಕಾಮರ್ಸ್ ಜುಬೈಲ್ ಘಟಕದ‌ ಉದ್ಘಾಟನಾ ಸಮಾರಂಭವು ಇಂಟರ್ ಕನ್ಟಿನೆನ್ಟಲ್ ಹೊಟೇಲ್‌ ಸಭಾಂಗಣದಲ್ಲಿ ನವೆಂಬರ್ 21ರಂದು ಅದ್ಧೂರಿಯಾಗಿ‌ ನಡೆಯಿತು.‌

Advertisement
Advertisement

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಬಿಸಿಸಿಐ ಅಧ್ಯಕ್ಷ ಹಾಗೂ ಎಸ್ಎಮ್ಆರ್ ಗ್ರೂಪ್ ನ ಸಿ ಇ ಓ ರಶೀದ್ ಹಾಜಿ ಡಿಜಿಟಲ್ ವೀಡಿಯೊ ಪ್ರದರ್ಶನದೊಂದಿಗೆ ಬಿಸಿಸಿಐ ಜುಬೈಲ್ ಘಟಕವನ್ನು ಉದ್ಘಾಟಿಸಿದರು. ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು ಕರಾವಳಿ ಕರ್ನಾಟಕದಲ್ಲಿ ಬ್ಯಾರಿಗಳಿಗಾಗಿ ಹಲವು ಸಂಘಟನೆಗಳಿದ್ದರೂ ವ್ಯಾಪಾರೋದ್ಯಮಿಗಳನ್ನು ಒಂದು ವೇದಿಕೆಯಡಿ ತರುವ ಯಾವುದೇ ಪ್ರಯತ್ನ ನಡೆದಿರಲಿಲ್ಲ. ಬಿಸಿಸಿಐ ಈ ಕೊರತೆಯನ್ನು ನೀಗಿಸಿದೆ ಎಂದರು. ಈಗಾಗಲೇ ಕರಾವಳಿ ಕರ್ನಾಟಕ, ದುಬೈಯಲ್ಲಿ ಕಾರ್ಯಚರಿಸುತ್ತಿರುವ ಬಿಸಿಸಿಐ ಜುಬೈಲ್ ನಲ್ಲಿ ತನ್ನ ಘಟಕವನ್ನು ತೆರೆದಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದರ ಬೆಳವಣಿಗೆಗೆ ಸೂಚಕವಾಗಿದೆ. ಬ್ಯಾರಿ ವ್ಯಾಪಾರೋದ್ಯಮಿಗಳ ಅತ್ಯುತ್ತಮ ನೆಟ್ ವರ್ಕ್ ಸ್ಥಾಪಿಸಿ ಉದ್ಯಮರಂಗ ದ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಮುಂದೊಂದು ದಿನ ಬಿಸಿಸಿಐ ಐವತ್ತು ಲಕ್ಷ ಉದ್ಯೋಗವಕಾಶವನ್ನು ಸ್ರುಷ್ಟಿಸಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಸುಮಾರು ಇನ್ನೂರರಷ್ಟು ವ್ಯಾಪಾರೋದ್ಯಮಿಗಳು ಜುಬೈಲ್, ದಮ್ಮಾಮ್, ಅಲ್ ಖೋಬರ್ ಮತ್ತು ಸುತ್ತಮುತ್ತಲಿನಿಂದ ಭಾಗವಹಿಸಿದ್ದರು.
ಸಮಾರಂಭದಲ್ಲಿ ದುಬೈ ಮತ್ತು ಭಾರತದಿಂದ ಸುಮಾರು 17 ಮಂದಿ ಪ್ರತಿನಿಧಿಗಳು ಆಗಮಿಸಿದ್ದರು. ಸಮಾರಂಭದಲ್ಲಿ ವ್ಯವಹಾರ ನೀತಿಶಾಸ್ತ್ರ ವಿಷಯದ ಕುರಿತು ಮಾತನಾಡಿದ ಬಿಸಿಸಿಐ ಕಾರ್ಯಕಾರಿ ಸಮಿತಿ ಸದಸ್ಯ ಮುಹಮ್ಮದ್ ಖಾಸಿಮ್, ಆಸ್ತಿ ಗಳಿಕೆಯೇ ಮನುಷ್ಯನ ಗುರಿಯಾಗಬಾರದು. ಆಸ್ತಿಯನ್ನು ಅತ್ಯುತ್ತಮ ಉದ್ದೇಶಕ್ಕಾಗಿ ಬಳಸುವುದು ನಮ್ಮ ಗುರಿಯಾಗಿರಬೇಕು. ವ್ಯಾಪಾರದಲ್ಲಿ ನೀತಿಯನ್ನು ಪಾಲಿಸುವುದು ದೀರ್ಘ ವಧಿ ಲಾಭವನ್ನು ತರುತ್ತದೆ. ಮೋಸ ಮತ್ತು ವಂಚನೆ ಕ್ಷಣಿಕ ಲಾಭವನ್ನಷ್ಟೆ ತಂದು ದೀರ್ಘಾವಧಿಯಲ್ಲಿ ಹೆಚ್ಚು ನಷ್ಟ ಉಂಟು ಮಾಡುತ್ತದೆ ಎಂದರು.

Advertisement

ನೆಟ್ ವರ್ಕಿಂಗ್ ಮತ್ತು ಸಂಶೋಧನೆ ಎಂಬ ವಿಷಯದ ಕುರಿತು ಮಾತನಾಡಿದ ಕಾರ್ಯಕಾರಿ ಸಮಿತಿ ಸದಸ್ಯ ಆಸಿಫ಼್ ಅಮ್ಯಾಕೊ ಬಿಸಿಸಿಐ ವಿಸ್ತಾರವಾದ ಅಧ್ಯಯನದ ಮೂಲಕ ಹೊಸ ಉದ್ಯಮ ರಂಗಗಳಲ್ಲಿ ಹೂಡಿಕೆ ಮಾಡಲು ಉತ್ತೇಜಿಸಲಿದೆ. ಬ್ಯಾರಿಗಳ ಬ್ಯುಸಿನೆಸ್ ನೆಟ್ ವರ್ಕ್ ಅಭಿವೃದ್ಧಿ ಪಡಿಸಿ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಎಂದರು.

ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ಼್ ರವರು ಆರಂಭದಲ್ಲಿ ಬಿಸಿಸಿಐ ಪರಿಚಯವನ್ನು ನೀಡಿ ಅದರ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು. ಅಖಿಲ್ ಫ಼ಾರೂಕ್ ರವರ ಕಿರಾಅತ್ ಪಠಣ ಮತ್ತು ದಾನಿಶ್ ಅಹ್ಮದ್ ರವರ ಅನುವಾದದೊಂದಿಗೆ ಕಾರ್ಯಕ್ರಮ ಚಾಲನೆಗೊಂಡಿತು.

ಬಿಸಿಸಿಐ ದುಬೈ ಘಟಕದ ಅಧ್ಯಕ್ಷ ಎಸ್ಎಮ್ ಬಶೀರ್, ಬಿಸಿಸಿಐ ಉಪಾಧ್ಯಕ್ಷ ಝಕರಿಯಾ ಅಲ್ ಮುಝೈನ್, ಕಾರ್ಯಕಾರಿ ಸಮಿತಿ ಸದಸ್ಯ ಅಶ್ರಫ಼್ ಎಕ್ಸ್ ಪರ್ಟಯಿಸ್ ಮಾತನಾಡಿದರು. ಬಿಸಿಸಿಐ ಉಪಾಧ್ಯಕ್ಷ ರವೂಫ಼್ ಪುತ್ತಿಗೆ, ಶೇಖ್ ಎಕ್ಸ್ ಪರ್ಟೈಸ್, ಬಿಸಿಸಿಐ ಕೋಶಾಧಿಕಾರಿ ಮನ್ಸೂರ್, ಮುಮ್ತಾಝ್ ಅಲಿ, ಇಫ಼್ತಿಕಾರ್ ಯು.ಟಿ, ಬಹ್ರೈನ್ ಪ್ರತಿನಿಧಿ ರಝಾಕ್, ಕುವೈಟ್ ಪ್ರತಿನಿಧಿ ಅಬ್ದುಲ್ ಹಮೀದ್, ಕತಾರ್ ಪ್ರತಿನಿಧಿ ಅಬ್ದುಲ್ಲಾ ಮೋನು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಬಶೀರ್ ಎನ್ ಸಿ ಎಮ್ ಎಸ್ ಸ್ವಾಗತಿಸಿ, ಹಿದಾಯ ಫ಼ೌಂಡೇಶನ್ ಜುಬೈಲ್ ಘಟಕದ ಅಧ್ಯಕ್ಷ ಫ಼ಾರೂಕ್ ಅಸಿಸ್ಕೊ ವಂದಿಸಿದರು. ಮುಹಮ್ಮದ್ ಫ಼ಿರೋಝ್, ದಾನಿಶ್ ಮತ್ತು ನಯಾಝ್ ಕೈಸರ್ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಳೆ ಹಿನ್ನೆಲೆ | ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಶಾಲೆಗಳಿಗೆ ರಜೆ

ಮುಂದಿನ ಎರಡು ದಿನಗಳ ಕಾಲ ಕರಾವಳಿ ಜಿಲ್ಲೆಯಲ್ಲಿ ಮಳೆಯ ತೀವ್ರತೆ ಹೆಚ್ಚಿರಲಿದೆ. ಹೀಗಾಗಿ…

4 hours ago

ಶನಿ ಬುಧರಿಂದ ನವಪಂಚಮ ರಾಜಯೋಗ

2025 ರಲ್ಲಿ ಶನಿ ಮತ್ತು ಬುಧ ಗ್ರಹಗಳ ಸಂಯೋಜನೆಯಿಂದ ನಿರ್ಮಾಣವಾಗುತ್ತಿರುವ ನವಪಂಚಮ ರಾಜಯೋಗವು…

4 hours ago

ಸಂಪಾಜೆ ಗ್ರಾಮದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ

ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ…

12 hours ago

ಗೆದ್ದದ್ದು ಬೆಂಗಳೂರು ಅಲ್ಲ, ಇಂಗ್ಲೇಂಡಿನ ಡಿಯಾಜಿಯೋ ಕಂಪೆನಿ…!!! ಗೊತ್ತಾ..?

ಎಲ್ಲಿ  ಉಚಿತವೆಂಬ ಆಮಿಶ ಇದೆಯೋ  ಅಲ್ಲಿ ತಳ್ಳಾಟವೂ  ಇರುತ್ತದೆ. ಸರಕಾರಿ ಬಸ್ ಗಳಲ್ಲಿ…

13 hours ago

ಭಾರೀ ಮಳೆ ಸಾಧ್ಯತೆ | ಕೊಡಗು-ಉಡುಪಿ ಜಿಲ್ಲೆಯಲ್ಲಿ ಎಚ್ಚರಿಕೆ | ಕೊಡಗಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ರಜೆ | ಉಡುಪಿಯಲ್ಲಿ ಶಾಲೆಗಳಿಗೆ ರಜೆ |

ಕೊಡಗು ಜಿಲ್ಲೆಯಲ್ಲಿ ಮಳೆ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ  ರೆಡ್ ಅಲರ್ಟ್ ಘೋಷಿಸಲಾಗಿದೆ. ಹೆಚ್ಚಿನ ಗಾಳಿ-ಮಳೆ…

14 hours ago

ನಿಮ್ಮಲ್ಲಿ ಎಳೆ ಅಡಿಕೆ ಬೀಳ್ತಾ ಇದೆಯಾ…? ಕೇಳಲು ಶುರು ಮಾಡಿದ್ದಾರೆ ಅಡಿಕೆ ಬೆಳೆಗಾರರು..!

ಈ ಬಾರಿ ಮೇ ತಿಂಗಳಿನಿಂದಲೇ ಮಳೆ ಆರಂಭವಾಗಿದೆ. ಜೂನ್.‌10 ಕಳೆಯುವ ಹೊತ್ತಿಗೆ ವಾತಾವರಣ…

19 hours ago