ಕಲಿಯುಗದಲ್ಲಿ ಭಗವಂತನ ಸಾಮೂಹಿಕ ಭಜನೆಗೆ ಹೆಚ್ಚು ಶಕ್ತಿ ಇದೆ. ಭಗವಂತ ನಮ್ಮ ಬೇಕು ಬೇಡಗಳಲ್ಲಿ ಸ್ಪಂದಿಸುತ್ತಾನೆ. ಕೀರ್ತನೆಗಳನ್ನು ದೇವರಿಗೆ ಸಮರ್ಪಿಸುವುದು, ಭಗವಂತನನ್ನು ಹಾಡಿ ಧನ್ಯತಾ ಭಾವ ಸಮರ್ಪನೆ ಮಾಡಿ ದೇವರ ಅನುಗ್ರಹ ಪಡೆಯಬಹುದು ಎಂದು ರಾಮಕೃಷ್ಣ ತಿಳಿಸಿದರು.
ಇವರು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರ ದುರ್ಗಾನಗರ-ಅಜ್ಜಿನಡ್ಕ ಇಲ್ಲಿ ನಡೆದ ಭಜನಾ ಮಂಡಳಿಯ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಭಾಧ್ಯಕ್ಷತೆಯನ್ನು ರಾಮಕೃಷ್ಣ ಮೂಡಂಬೈಲು ವಹಿಸಿದರು. ವೇದಿಕೆಯಲ್ಲಿ ಭಜನಾ ಮಂದಿರದ ಅಧ್ಯಕ್ಷರಾದ ಶ್ರೀ ವಿನಯಕೃಷ್ಣ ಹಾಗೂ ಭಜನಾ ತರಬೇತುದಾರರಾದ ಪ್ರಶಾಂತ ಎನ್. ಬಿ ದೊಡ್ಡಡ್ಕ ಉಪಸ್ಥಿತರಿದ್ದರು
.ಭಜನಾ ತರಬೇತುದಾರರಾದ ಪ್ರಶಾಂತ ಎನ್. ಬಿ ದೊಡ್ಡಡ್ಕ ಇವರಿಗೆ ಭಜನಾ ಮಂಡಳಿಯ ಪರವಾಗಿ ರಾಮಕೃಷ್ಣ ಕಾಟುಕುಕ್ಕೆ ಸನ್ಮಾನಿಸಿ ಕಿರುಕಾಣಿಕೆ ಸಮರ್ಪಿಸಲಾಯಿತು. ಶ್ರುಜನ, ಅಕ್ಷತಾ ಎ, ಲಿಖಿತಾ ಪ್ರಾರ್ಥನೆ ಹಾಡಿದರು. ಮಧುಶ್ರೀ ಸ್ವಾಗತಿಸಿ, ಸುಮನ. ಎನ್ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಅಕ್ಷತಾ.ಎಂ ಮಾಡಿದರು. ಕೊನೆಯಲ್ಲಿ ರಾಮಕೃಷ್ಣ ಕಾಟುಕುಕ್ಕೆ ಭಜನಾ ತಂಡಕ್ಕೆ ಕೀರ್ತನೆಯನ್ನು ಅಭ್ಯಸಿಸಿದರು.
ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ…
ಕೃಷಿಕರಿಗೆ ಹವಾಮಾನದ ಬದಲಾವಣೆಯ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಡಿಸೀಸ್ ಫಾರ್ಕಾಸ್ಟ್ ಅಂದರೆ ಯಾವ…
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯ ಅನ್ವಯ, ಉತ್ತರ ಕನ್ನಡ…
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣದ ಮುನ್ಸೂಚನೆ…
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…