ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಸಂಜೆ ರಾಜ್ಯದ 22 ನೇ ಮುಖ್ಯಮಂತ್ರಿಯಾಗಿ, 4 ನೇ ಬಾರಿಗೆ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದರು. ಹಸಿರುಶಾಲು ಮೂಲಕ ರಾಜಭವನಕ್ಕೆ ಆಗಮಿಸಿದ ಯಡಿಯೂರಪ್ಪ ರಾಜ್ಯದ ರೈತರ ಹಿತ ಕಾಪಾಡುವ ಭರವಸೆಯನ್ನು ನೀಡಿದ್ದಾರೆ.
ಭರಣಿ ನಕ್ಷತ್ರದಲ್ಲಿ ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇದು ಕೆಲವು ಕಡೆ ಚರ್ಚೆಗೆ ಕಾರಣವಾದರೆ, ಧರಣಿ ಆಳಲು ಅಂದರೆ ಆಡಳಿತ ನಡೆಸಲು ಭರಣಿ ನಕ್ಷತ್ರವೇ ಸೂಕ್ತ ಎಂಬುದೂ ಇನ್ನೊಂದು ವಾದ. ಕೆಲವು ಜ್ಯೋತಿಷಿಗಳು ಈ ನಕ್ಷತ್ರ ಹಿತವಲ್ಲ ಎಂದು ಮಾಧ್ಯಮಗಳಲ್ಲಿ ಹೇಳಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel