ಭರತ ಭೂಮಿ ನಮಗೆ ತಾಯಿ
ನಮ್ಮ ಕನಸು ಅದುವೆ ತಾನೆ
ಜೀವರಾಶಿ ಕಣವು ಎಲ್ಲ ಒಂದೆ ಅಲ್ಲವೆ
ಮಾತೆ ಮುನಿಸೊ ಮೊದಲು ನಾವು
ಮನಸು ನೀಡಿ ಹೊಲಸು ತೊಳೆದು
ಪಾಪ ತೊಳೆವ ಪುಣ್ಯ ಒಂದೆ ಅಲ್ಲವೆ
ಮೂರು ಹೊತ್ತು ಸೂರಿಗಾಗಿ
ಮನವ ಮಿಡಿಯೊ ಹೃದಯಕಾಗಿ
ನಾಡು ನುಡಿಯೆ ಎಲ್ಲ ಒಂದೆ ಅಲ್ಲವೆ
ಬದುಕ ನೀಡಿ ಬೆಳೆಸೊ ತಾಯಿ
ಉಳಿಸೊ ನೆಲವ ಬದುಕಿಗಾಗಿ
ಮರೆತಿರೇಕೆ ಎಲ್ಲ ನೆಲವು ಒಂದೆ ಅಲ್ಲವೆ
ಹುಟ್ಟು ಸಾವು ಸಹಜ ತಾನೆ
ತೊರಬೇಕು ನೋಡಿ ಪ್ರೀತಿಗಾಗಿ
ಬಾಳಬೇಕು ಎಲ್ಲ ಕೂಡಿ ಒಂದೆ ಅಲ್ಲವೆ
# ರೇಣುಕಾ ರಮೇಶ ನಾವಲಗಿ
ಕೆ ವಿ ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಸುಳ್ಯ
ಯುವಕರ ಮೊದಲ ಆದ್ಯತೆ ರಾಜಕೀಯವಲ್ಲ, ಕೌಶಲ್ಯ ಮತ್ತು ಆರ್ಥಿಕ ಸ್ವಾವಲಂಬನೆ ಆಗಿರಬೇಕು ಎಂಬುದು…
ಜುಲೈ 16ರಿಂದ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ…
ರಾಜ್ಯದ ಕರಾವಳಿ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಿಗೆ IMD ಯೆಲ್ಲೋ ಅಲರ್ಟ್ ಘೋಷಿಸಿದೆ.…
ಭುವನೇಶ್ವರದಲ್ಲಿ ಪ್ರತಿದಿನ ಸಾವಿರಾರು ತೆಂಗಿನಕಾಯಿ ತ್ಯಾಜ್ಯವನ್ನು ಕೊಕೊಪೀಟ್, ಹಗ್ಗ ಹಾಗೂ ಚಾಪೆಗಳಾಗಿ ಪರಿವರ್ತಿಸಿ…
ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಎಕರೆಗೆ ₹50 ಸಾವಿರ…
ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ-ಚಿರತೆ ಹಾವಳಿಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತ…