ಭರತ ಭೂಮಿ ನಮಗೆ ತಾಯಿ
ನಮ್ಮ ಕನಸು ಅದುವೆ ತಾನೆ
ಜೀವರಾಶಿ ಕಣವು ಎಲ್ಲ ಒಂದೆ ಅಲ್ಲವೆ
ಮಾತೆ ಮುನಿಸೊ ಮೊದಲು ನಾವು
ಮನಸು ನೀಡಿ ಹೊಲಸು ತೊಳೆದು
ಪಾಪ ತೊಳೆವ ಪುಣ್ಯ ಒಂದೆ ಅಲ್ಲವೆ
ಮೂರು ಹೊತ್ತು ಸೂರಿಗಾಗಿ
ಮನವ ಮಿಡಿಯೊ ಹೃದಯಕಾಗಿ
ನಾಡು ನುಡಿಯೆ ಎಲ್ಲ ಒಂದೆ ಅಲ್ಲವೆ
ಬದುಕ ನೀಡಿ ಬೆಳೆಸೊ ತಾಯಿ
ಉಳಿಸೊ ನೆಲವ ಬದುಕಿಗಾಗಿ
ಮರೆತಿರೇಕೆ ಎಲ್ಲ ನೆಲವು ಒಂದೆ ಅಲ್ಲವೆ
ಹುಟ್ಟು ಸಾವು ಸಹಜ ತಾನೆ
ತೊರಬೇಕು ನೋಡಿ ಪ್ರೀತಿಗಾಗಿ
ಬಾಳಬೇಕು ಎಲ್ಲ ಕೂಡಿ ಒಂದೆ ಅಲ್ಲವೆ
# ರೇಣುಕಾ ರಮೇಶ ನಾವಲಗಿ
ಕೆ ವಿ ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಸುಳ್ಯ
ಗುರುವಾರದ ವೇಳೆಗೆ ಕೇರಳಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ…
ಮ್ಯಾನ್ಮಾರ್ನಿಂದ ಅಕ್ರಮವಾಗಿ ಸಾಗಾಟವಾಗುತ್ತಿದ್ದ ₹24 ಕೋಟಿ ಮೌಲ್ಯದ ಅಡಿಕೆಯನ್ನು ಮಿಜೋರಾಂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.…
ರಾಜ್ಯಾದ್ಯಂತ ಅಡಿಕೆ ಗಿಡಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗಿದ್ದು,ಕೆಲವು ಕಡೆ ಸಸಿಯ ಬೆಲೆ ₹100ಕ್ಕೆ…
ಕೇಂದ್ರ ಸರ್ಕಾರದ ವಿವಿಧ ಕೃಷಿ ಸೌಲಭ್ಯಗಳನ್ನು ಪಡೆಯಲು ‘ಕೇಂದ್ರ ರೈತ ಐಡಿ’ ಕಡ್ಡಾಯವಾಗುತ್ತಿದೆ.…
ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಕೆಜಿಗೆ ₹5 ಏರಿಕೆ ದಾಖಲಾಗಿದ್ದು, ಹೊಸ ಅಡಿಕೆ…
ಭಾರತದಲ್ಲಿ ಕೇವಲ ಒಂದು ದಿನದ ತೀವ್ರ ಬಿಸಿಲು ಸುಮಾರು 3,400 ಹೆಚ್ಚುವರಿ ಸಾವುಗಳಿಗೆ…