ಭಾನುವಾರ ರಾತ್ರಿ ಭಾರತ ಬೆಳಗಿತು. ದೀಪಗಳಿಂದ ಭಾರತ ಬೆಳಗುತ್ತಲೇ ಅಂಧಕಾರ ದೂರವಾಯಿತು. ಒಬ್ಬರಿಗೊಬ್ಬರು ನಾವಿದ್ದೇವೆ ಎಂಬ ಜಾಗೃತಿ ಮೂಡಿತು. ಇದಕ್ಕೆ ಸಿಕ್ಕಿದ ಪ್ರತಿಕ್ರಿಯೆ ಉತ್ತಮವಾಗಿತ್ತು. ಇಡೀ ದೇಶದಲ್ಲಿ ವಿದ್ಯುತ್ ಬೇಡಿಕೆಯಲ್ಲಿ 9 ಗಂಟೆಯಿಂದ 9.10 ರ ವರೆಗೆ ಒಮ್ಮೆಲೇ 32 GW(ಗಿಗಾ ವ್ಯಾಟ್ ) ವಿದ್ಯುತ್ ಬೇಡಿಕೆ ಕಡಿತವಾಯಿತು.
ದೇಶದಲ್ಲಿ 9 ಗಂಟೆಯವರೆಗೆ 115 ಗಿಗಾ ವ್ಯಾಟ್ ವಿದ್ಯುತ್ ಬೇಡಿಕೆ ಇತ್ತು. 9 ಗಂಟೆಯ ನಂತರ 9.10 ರವರೆಗೆ ಒಮ್ಮೆಲೇ 85 ಗಿಗಾ ವ್ಯಾಟ್ ಗೆ ಇಳಿಕೆಯಾಯಿತು. 9.10 ರ ನಂತರ ಈ ಬೇಡಿಕೆ ಒಮ್ಮೆಲೇ 114.4 ಗಿಗಾ ವ್ಯಾಟ್ ಗೆ ತಲಪಿದೆ. ಅಂದರೆ ಸುಮಾರು 32 ಗಿಗಾ ವ್ಯಾಟ್ ನಷ್ಟು ವಿದ್ಯುತ್ ಕಡಿತವಾಗಿದೆ. ಇದು ಕೇವಲ ಲೈಟ್ ಗಳನ್ನು ಮಾತ್ರವೇ ಆಫ್ ಮಾಡಿರುವ ಬೇಡಿಕೆ ಎಂದು ರಾಷ್ಟ್ರೀಯ ವಿದ್ಯುತ್ ಸಚಿವಾಲಯದ ಅಡಿಯಲ್ಲಿ ಬರುವ ಪವರ್ ಸಿಸ್ಟಮ್ ಆಪರೇಷನ್ ಕಾರ್ಪೊರೇಶನ್ ಲಿಮಿಟೆಡ್ ತಿಳಿಸಿದೆ.
ಕರ್ನಾಟಕದ ವಿವಿಧ ಭಾಗಗಳಲ್ಲಿ ಮತ್ತೆ ಮಳೆಯ ಚಟುವಟಿಕೆ ಹೆಚ್ಚಾಗಿದ್ದು, ಕರಾವಳಿ, ಮಲೆನಾಡು ಹಾಗೂ…
ರಾಜ್ಯದ ಹಲವೆಡೆ ಮಳೆಯಾಗಿದ್ದು, ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಹಗುರ ಮಳೆಯ ಸಾಧ್ಯತೆ…
ರಾಜ್ಯದಲ್ಲಿ ಹೋಟೆಲ್ಗಳಿಗೆ ವಾಣಿಜ್ಯ LPG ಕೊರತೆಯನ್ನು ಸರಿಪಡಿಸಲು ಮಂಗಳವಾರದಿಂದ ಹೆಚ್ಚುವರಿ ಸಿಲಿಂಡರ್ ಸರಬರಾಜು…
ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.…
ಚಿಕ್ಕಮಗಳೂರಿನಲ್ಲಿ ಭಾರಿ ಮಳೆಯಿಂದ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.…
ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯ ಚಟುವಟಿಕೆ ಮತ್ತೆ ಆರಂಭವಾಗುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ…