ಭಾನುವಾರ ರಾತ್ರಿ ಭಾರತ ಬೆಳಗಿತು. ದೀಪಗಳಿಂದ ಭಾರತ ಬೆಳಗುತ್ತಲೇ ಅಂಧಕಾರ ದೂರವಾಯಿತು. ಒಬ್ಬರಿಗೊಬ್ಬರು ನಾವಿದ್ದೇವೆ ಎಂಬ ಜಾಗೃತಿ ಮೂಡಿತು. ಇದಕ್ಕೆ ಸಿಕ್ಕಿದ ಪ್ರತಿಕ್ರಿಯೆ ಉತ್ತಮವಾಗಿತ್ತು. ಇಡೀ ದೇಶದಲ್ಲಿ ವಿದ್ಯುತ್ ಬೇಡಿಕೆಯಲ್ಲಿ 9 ಗಂಟೆಯಿಂದ 9.10 ರ ವರೆಗೆ ಒಮ್ಮೆಲೇ 32 GW(ಗಿಗಾ ವ್ಯಾಟ್ ) ವಿದ್ಯುತ್ ಬೇಡಿಕೆ ಕಡಿತವಾಯಿತು.
ದೇಶದಲ್ಲಿ 9 ಗಂಟೆಯವರೆಗೆ 115 ಗಿಗಾ ವ್ಯಾಟ್ ವಿದ್ಯುತ್ ಬೇಡಿಕೆ ಇತ್ತು. 9 ಗಂಟೆಯ ನಂತರ 9.10 ರವರೆಗೆ ಒಮ್ಮೆಲೇ 85 ಗಿಗಾ ವ್ಯಾಟ್ ಗೆ ಇಳಿಕೆಯಾಯಿತು. 9.10 ರ ನಂತರ ಈ ಬೇಡಿಕೆ ಒಮ್ಮೆಲೇ 114.4 ಗಿಗಾ ವ್ಯಾಟ್ ಗೆ ತಲಪಿದೆ. ಅಂದರೆ ಸುಮಾರು 32 ಗಿಗಾ ವ್ಯಾಟ್ ನಷ್ಟು ವಿದ್ಯುತ್ ಕಡಿತವಾಗಿದೆ. ಇದು ಕೇವಲ ಲೈಟ್ ಗಳನ್ನು ಮಾತ್ರವೇ ಆಫ್ ಮಾಡಿರುವ ಬೇಡಿಕೆ ಎಂದು ರಾಷ್ಟ್ರೀಯ ವಿದ್ಯುತ್ ಸಚಿವಾಲಯದ ಅಡಿಯಲ್ಲಿ ಬರುವ ಪವರ್ ಸಿಸ್ಟಮ್ ಆಪರೇಷನ್ ಕಾರ್ಪೊರೇಶನ್ ಲಿಮಿಟೆಡ್ ತಿಳಿಸಿದೆ.
ಗುಜ್ಜೆ ಬಳಸಿ ತಯಾರಿಸುವ ಮಂಚೂರಿ ರುಚಿಕರ ಫ್ಯೂಷನ್ ತಿನಿಸಾಗಿದೆ. ಮನೆಯಲ್ಲಿ ಸುಲಭವಾಗಿ ಮಾಡುವ…
ಬಲಮುರಿ, ಎಡಮುರಿ ಕಾವೇರಿ ತೀರಗಳಿಗೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಮುಳುಗು ಪ್ರಕರಣಗಳು…
ರಾಜ್ಯದ ಕೆಲವೆಡೆ ಮಳೆಯಾದರೂ, ಕರಾವಳಿಯಲ್ಲಿ ಮುಂದಿನ ಐದು ದಿನ ಬಿಸಿ ಮತ್ತು ತೇವಾಂಶ…
ರಾಜ್ಯದಲ್ಲಿ ಸಿಡಿಲು ಬಡಿತದಿಂದ 1,026 ಸಾವುಗಳು ದಾಖಲಾಗಿದೆ. ‘ದಾಮಿನಿ’ ಆ್ಯಪ್ ಬಳಸಿ ಮುನ್ನೆಚ್ಚರಿಕೆ…
ರಕ್ಷಾ ಆಯುರ್ವೇದವು ಏಪ್ರಿಲ್ 24ರಂದು ಸ್ವರ್ಣಪ್ರಾಶನ ಕಾರ್ಯಕ್ರಮ ಆಯೋಜಿಸಿದೆ. ಇದು ಮಕ್ಕಳ ರೋಗ…
ಕರ್ನಾಟಕದಲ್ಲಿ ಇಂದಿನಿಂದ ಪ್ರೀ-ಮಾನ್ಸೂನ್ ಮಳೆ ಚಟುವಟಿಕೆ ಆರಂಭವಾಗಲಿದೆ. ಕರಾವಳಿ, ಮಲೆನಾಡಿನಲ್ಲಿ ತಕ್ಷಣ ಮಳೆ,…