ಭಾನುವಾರ ರಾತ್ರಿ ಭಾರತ ಬೆಳಗಿತು. ದೀಪಗಳಿಂದ ಭಾರತ ಬೆಳಗುತ್ತಲೇ ಅಂಧಕಾರ ದೂರವಾಯಿತು. ಒಬ್ಬರಿಗೊಬ್ಬರು ನಾವಿದ್ದೇವೆ ಎಂಬ ಜಾಗೃತಿ ಮೂಡಿತು. ಇದಕ್ಕೆ ಸಿಕ್ಕಿದ ಪ್ರತಿಕ್ರಿಯೆ ಉತ್ತಮವಾಗಿತ್ತು. ಇಡೀ ದೇಶದಲ್ಲಿ ವಿದ್ಯುತ್ ಬೇಡಿಕೆಯಲ್ಲಿ 9 ಗಂಟೆಯಿಂದ 9.10 ರ ವರೆಗೆ ಒಮ್ಮೆಲೇ 32 GW(ಗಿಗಾ ವ್ಯಾಟ್ ) ವಿದ್ಯುತ್ ಬೇಡಿಕೆ ಕಡಿತವಾಯಿತು.
ದೇಶದಲ್ಲಿ 9 ಗಂಟೆಯವರೆಗೆ 115 ಗಿಗಾ ವ್ಯಾಟ್ ವಿದ್ಯುತ್ ಬೇಡಿಕೆ ಇತ್ತು. 9 ಗಂಟೆಯ ನಂತರ 9.10 ರವರೆಗೆ ಒಮ್ಮೆಲೇ 85 ಗಿಗಾ ವ್ಯಾಟ್ ಗೆ ಇಳಿಕೆಯಾಯಿತು. 9.10 ರ ನಂತರ ಈ ಬೇಡಿಕೆ ಒಮ್ಮೆಲೇ 114.4 ಗಿಗಾ ವ್ಯಾಟ್ ಗೆ ತಲಪಿದೆ. ಅಂದರೆ ಸುಮಾರು 32 ಗಿಗಾ ವ್ಯಾಟ್ ನಷ್ಟು ವಿದ್ಯುತ್ ಕಡಿತವಾಗಿದೆ. ಇದು ಕೇವಲ ಲೈಟ್ ಗಳನ್ನು ಮಾತ್ರವೇ ಆಫ್ ಮಾಡಿರುವ ಬೇಡಿಕೆ ಎಂದು ರಾಷ್ಟ್ರೀಯ ವಿದ್ಯುತ್ ಸಚಿವಾಲಯದ ಅಡಿಯಲ್ಲಿ ಬರುವ ಪವರ್ ಸಿಸ್ಟಮ್ ಆಪರೇಷನ್ ಕಾರ್ಪೊರೇಶನ್ ಲಿಮಿಟೆಡ್ ತಿಳಿಸಿದೆ.
ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ ಜುಲೈ 23ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ…
23.07.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ ಕರಾವಳಿ: ಕಾಸರಗೋಡು, ದಕ್ಷಿಣ…
ಆಮದುಗೊಂಡ ಕಳಪೆ ಅಡಿಕೆಯನ್ನು ದೇಶೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ…
ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆ…
ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…
ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…