ಸುಳ್ಯ: ಭುವಿಯನ್ನು ಹಸಿರಾಗಿಸಲು ಸೇವಾ ಸಾಂಘಿಕ್ ವನ ಮಹೋತ್ಸವ ಕಾರ್ಯಕ್ರಮ ಭಾನುವಾರ ಸುಳ್ಯದ ಶಾಂತಿನಗರ ಕ್ರೀಡಾಂಗಣದ ಬಳಿಯಲ್ಲಿ ನಡೆಯಿತು. ಸಮರ್ಥ ಭಾರತ ಕೋಟಿ ವೃಕ್ಷ ಆಂದೋಲನ ಸಮಿತಿಯ ವತಿಯಿಂದ ನಡೆದ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಕ್ರೀಡಾಂಗಣದ ಸುತ್ತ ಸುಮಾರು 110ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು. 50 ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು. ಮಾವು ಹಲಸು, ಹುಣಸೆ, ಮಂತು ಹುಳಿ, ನೇರಳೆ, ಸಾಗುವಾನಿ, ಮತ್ತಿ ಮತ್ತಿತರ ಮರಗಳ ಗಿಡಗಳನ್ನು ನೆಡಲಾಯಿತು. 50 ಶ್ರೀಗಂಧ ಗಿಡಗಳನ್ನು ಕಾರ್ಯಕರ್ತರಿಗೆ ಮನೆಗಳಲ್ಲಿ ನೆಡಲು ವಿತರಿಸಲಾಯಿತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel