Advertisement
ವಿಶೇಷ ವರದಿಗಳು

ಮಂಗನ ಓಡಿಸುವ ಇನ್ನೊಂದು ಸುಲಭ ಪ್ರಯತ್ನ…..

Share

ಸುಳ್ಯ: ಮಂಗಗಳ ಕಾಟ ವಿಪರೀತವಾಗಿ ಕೃಷಿಕರು ಕಂಗಾಲಾಗಿದ್ದಾರೆ. ಸರಕಾರವು ಮಂಗನ ಪಾರ್ಕ್ ಮಾಡುವ ಬಗ್ಗೆ ಯೋಚನೆ ಮಾಡುತ್ತಿದ್ದರೆ ಗ್ರಾಮೀಣ ಭಾಗದ ಕೃಷಿಕರಿಗೆ ಸದ್ಯ ಮಂಗಗಳ ಕಾಟದಿಂದ ರಿಲೀಫ್ ಬೇಕಿದೆ. ಹೀಗಾಗಿ ಇನ್ನಿಲ್ಲದ ಪ್ರಯತ್ನ ನಡೆಯುತ್ತಲೇ ಇದೆ. ಇದೀಗ ಕಾಸರಗೋಡು ಜಿಲ್ಲೆಯ ಕಿನ್ನಿಂಗಾರಿನ ರಾಜಗೋಪಾಲ ಕೈಪಂಗಳ ಅವರು ಹೊಸದೊಂದು ಪ್ರಯತ್ನ ಮಾಡಿದ್ದಾರೆ. ಈ ಸುಲಭ ಉಪಕರಣದ ಮೂಲಕ ಈಗಲೂ ಕೃಷಿ ಭೂಮಿಯಲ್ಲಿ ಈ ಬಗ್ಗೆ ಪರೀಕ್ಷೆ ಮಾಡುತ್ತಿದ್ದಾರೆ. ಇತರ ಕೃಷಿಕರೂ ಈ ಸುಲಭ ವಿಧಾನದಲ್ಲಿ ಪ್ರಯತ್ನ ಮಾಡಬಹುದಾಗಿದೆ. ಇದರ ವಿಡಿಯೋ ಇಲ್ಲಿದೆ:

Advertisement
Advertisement
Advertisement
Advertisement

 

Advertisement

ಈ ಸುಲಭ ಉಪಕರಣದಲ್ಲಿ ಕಾರು ಅಥವಾ ಬೈಕ್ ಟ್ಯೂಬ್ ಬಳಕೆ ಮಾಡಿಕೊಂಡು ಅದಕ್ಕೆ ಗಾಳಿ ತುಂಬಿ ಪ್ಯಾನ್ಸಿ ಅಂಗಡಿಯಲ್ಲಿ  ದೊರೆಯುವ ಹಾರ್ನ್ ಮಾದರಿಯ ಆಟಿಕೆಗೆ ಪೈಪ್ ಮೂಲಕ ಗಾಳಿ ಹೋಗುವಂತೆ ಮಾಡಿ ಮಂಗಗಳ ಹಿಂಡು ಇರುವ ಕಡೆ ಈ ಸದ್ದು ಕೇಳಿಸುವುದು ಇಲ್ಲಿನ ಉಪಾಯ. ಎಲ್ಲಾ ಕೃಷಿಕರೂ ಈ ಪ್ರಯತ್ನ ಮಾಡಬಹುದು ಎನ್ನುತ್ತಾರೆ ರಾಜಗೋಪಾಲ್ ಅವರು.

Advertisement

ರಾಜಗೋಪಾಲ ಕೈಪಂಗಳ ಅವರು ಕೃಷಿಕರಿಗೆ ಉಪಯುಕ್ತವಾಗುವ ಇಂತಹ ಹಲವು ಉಪಕರಣ ಮಾಡಿದ್ದಾರೆ. ಅದರಲ್ಲಿ  ಆನೆ ಹಾಗೂ ಕಾಡುಪ್ರಾಣಿಗಳ ಹಾವಳಿ ತಡೆಗೆ ಸಿದ್ಧ ಮಾಡಿರುವ ಎಲ್ ಇ ಡಿ ಆಧಾರಿತ ಲೈಟ್  ಗಮನಸೆಳೆದಿದೆ. ಕೇರಳದ ಅರಣ್ಯ ಇಲಾಖೆ ಆನೆ ಹಾವಳಿ ತಡೆಗೆ ಈ ಲೈಟ್ ಉಪಯುಕ್ತವಾಗಿದೆ ಎಂದು ಹೇಳಿದೆ.

Advertisement

ಕೃಷಿಕನಾಗಿರುವುದರಿಂದ ಕೃಷಿಕರ ಸಂಕಷ್ಟ ಅರಿವಿದೆ. ಹೀಗಾಗಿ ಕಾಡು ಪ್ರಾಣಿಗಳ ಹಾವಳಿ ತಡೆಗೆ ವಿವಿಧ ಪ್ರಯತ್ನ ಮಾಡುತ್ತಲೇ ಇದ್ದೇನೆ. ಇದು ಮಂಗಗಳನ್ನು ತೋಟದಿಂದ ಓಡಿಸಲು ಮಾಡಿರುವ ಒಂದು ಪ್ರಯತ್ನ. ಈಗ ಇದರ ಸಾಧಕ ಬಾಧಕಗಳ ಬಗ್ಗೆಯೂ ಗಮನಿಸಲಾಗುತ್ತಿದೆ. ಇತರ ಕೃಷಿಕರೂ ಈ ವಿಧಾನ ಮಾಡಿ ಪ್ರಯತ್ನ ಮಾಡಬಹುದು. – ರಾಜಗೋಪಾಲ ಕೈಪಂಗಳ

ರಾಜಗೋಪಾಲ್ ಕೈಪಂಗಳ  ಅವರ ಸಂಪರ್ಕಕ್ಕೆ : 9061674679

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 03-03-2025 | ಬಿಸಿಲಿನ ವಾತಾವರಣ ಮುಂದುವರಿಕೆ | ಮಾ.6 ರ ನಂತರ ಅಲ್ಲಲ್ಲಿ ತುಂತುರು ಮಳೆ ನಿರೀಕ್ಷೆ |

ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…

23 hours ago

ಚಿಕ್ಕಮಗಳೂರಿನ ಅರಣ್ಯದಲ್ಲಿ ಕಾಡ್ಗಿಚ್ಚು | 20 ಕ್ಕೂ ಹೆಚ್ಚು ಎಕರೆ ಅರಣ್ಯ ನಾಶ

ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…

1 day ago

Weather Update | ಕೆಲವು ಕಡೆ ಮಳೆ ಸಾಧ್ಯತೆ | ಕರಾವಳಿ ಜಿಲ್ಲೆಗೆ ಇಂದೂ ಹೀಟ್‌ವೇವ್‌ ಎಚ್ಚರಿಕೆ |

ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು…

1 day ago

ಕುಂಭಮೇಳ | ಆ ಪ್ರಯಾಣದಲ್ಲಿ ಕಂಡದ್ದು ಏನೇನು..? ಅದೊಂದು ಸಿಹಿ ನಮಗೂ ಹೊಸದು…!

ಮಹಾಕುಂಭ ಮೇಳದ ಪ್ರಯಾಣದ ಅನುಭವವನ್ನು ಕೃಷಿಕ ಟಿ ಆರ್‌ ಸುರೇಶ್ಚಂದ್ರ ಇಲ್ಲಿ ಬರೆದಿದ್ದಾರೆ..…

1 day ago

ಭಾವತೀರ ಯಾನ ತಂಡದ ಸಂದರ್ಶನ

https://youtu.be/uK6DXLGXQiE?si=aXESe-CGSVVHt_WS

2 days ago

ವಳಲಂಬೆ ಜಾತ್ರೆ

https://youtu.be/2vEOlELtngk?si=R4B-hMjIJ5r31QyR

2 days ago