Advertisement
ಸುದ್ದಿಗಳು

ಮಂಗಳೂರು ಬಾಂಬ್ ಪ್ರಕರಣ : ಬ್ಯಾಂಕಿಂಗ್ ನಿಂದ ಬಾಂಬರ್ ವರೆಗೆ ತಲುಪಿದ ಆರೋಪಿ ಆದಿತ್ಯ ರಾವ್…!

Share

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದ ಬಾಂಬ್ ಪತ್ತೆ ಪ್ರಕರಣದ ಆರೋಪಿ ಆದಿತ್ಯ ರಾವ್  ಮೈಸೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿ ನಂತರ ಮತ್ತೊಂದು ಪ್ರತಿಷ್ಠಿತ ಕಾಲೇಜಿನಲ್ಲಿ ಎಂಬಿಎ ಮಾರ್ಕೆಟಿಂಗ್ ಆಂಡ್ ಆಪರೇಷನ್ ಸ್ನಾತಕೋತ್ತರ ಪದವಿ ಪಡೆದವನು. ಇಷ್ಟೆಲ್ಲಾ ಓದಿ ಹಂತ ಹಂತವಾಗಿ  ಪ್ರಮೋಶನ್ ಆಗಬೇಕಾದ ಆದಿತ್ಯ ರಾವ್ ಆದದ್ದು ಮಾತ್ರಾ ಡಿಮೋಶನ್. ವೈಟ್ ಕಾಲರ್ ಜಾಬ್ ನಿಂದ ಸಾಮಾನ್ಯ ಕೆಲಸದ ಕಡೆಗೆ ಹೊರಳಿದ್ದು…!.

Advertisement
Advertisement

ಮನೆಯಿಂದ ಉತ್ತಮ ವ್ಯಾಸಾಂಗಕ್ಕೆ ಹೆತ್ತವರು ಸಂಪೂರ್ಣವಾಗಿ ಸಹಕಾರ ನೀಡಿದ್ದರು. ಓದಿ ಚೆನ್ನಾದ ಹುದ್ದೆ ಪಡೆಯಲಿ ಎಂದು ಹೆತ್ತವರು ಕನಸು ಕಂಡಿದ್ದರು. ಆದರೆ ಕೊನೆ ಕೊನೆಗೆ ಮನೆಯವರೊಂದಿಗೆ ಹೆಚ್ಚು ಸಂಪರ್ಕವೂ ಇಲ್ಲದೆ ತನ್ನ ಪಾಡಿಗೆ ಇರುತ್ತಿದ್ದ ಆದಿತ್ಯ ರಾವ್ ಈಗ ಬಾಂಬರ್ ಆಗಿ ಬೆಳಕಿಗೆ ಬಂದಿದ್ದಾನೆ. ವಿವಿದೆಡೆ ಕೆಲಸ ಮಾಡಿದ್ದಾನೆ, ಆದರೆ ಎಲ್ಲೂ ಹೆಚ್ಚು ಕಾಲ ಉಳಿಯಲಿಲ್ಲ. ಕ್ಷುಲ್ಲಕ ಕಾರಣಗಳಿಂದ ಹುದ್ದೆ ತೊರೆದಿದ್ದ. ಎಸಿ ವ್ಯವಸ್ಥೆ ಆರೋಗ್ಯಕ್ಕೆ ಹಾಳು ಎಂದು ಕೆಲಸ ಬಿಟ್ಟರೆ, ಇನ್ನೂ ಕೆಲವು ಕಡೆ ಮೇಲಾಧಿಕಾರಿಗಳ ಮೇಲೆ ಸಿಟ್ಟಿನಿಂದ ಹೊರಬಂದ, ಇನ್ನೂ ಕೆಲವು ಕಡೆ ಒತ್ತಡ ಎಂದು ಹೊರಬಂದ…!

Advertisement

ಆದಿತ್ಯ ರಾವ್ ಪೊಲೀಸರಿಗೆ ನೀಡಿರುವ ಮಾಹಿತಿಯಂತೆ ಆತ ಐಸಿಐಸಿಐ ಪ್ರ್ಯುಡೆನ್ಶಿಯಲ್, ಎಚ್‌ಎಸ್‌ಬಿಸಿ, ಎಚ್‌ಡಿಎಫ್‌ಸಿ ಲೈಫ್‌   ಸೇರಿದಂತೆ ವಿವಿಧ ಹಣಕಾಸು ಸಂಬಂಧಿ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾನೆ. ನಂತರ ಬ್ಯಾಂಕಿಂಗ್ ಕ್ಷೇತ್ರ ಬಿಟ್ಟು ಮೆಕ್ಯಾನಿಕಲ್ ಇಂಜಿನಿಯರಿಂಗ್ ಆಧಾರದಲ್ಲಿ  ಕೆಲಸ ಪಡೆದ. ಈ ಆಧಾರದಲ್ಲಿ ಬೆಂಗಳೂರಿನಲ್ಲಿ ವಿವಿದೆಡೆ ಉತ್ತಮ ಕಂಪನಿಗಳಲ್ಲಿ  ಕೆಲಸ ಮಾಡಿದ. ಅಲ್ಲೂ ಕ್ಷೇತ್ರ ಸರಿ ಇಲ್ಲ ಎಂದು ಕೆಲಸ ಬಿಟ್ಟು  ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ಅರ್ಜಿ ಹಾಕಿ. ಆದರೆ ಇಲ್ಲಿ ಕೆಲಸ ದೊರೆಯದ ಬಳಿಕ ಹೋಟೆಲ್ ಕೆಲಸ, ಹೋಟೆಲ್ ಸೆಕ್ಯೂರಿಟಿ ಗಾರ್ಡ್ ಕೆಲಸ ಸೇರಿದಂತೆ ವಿವಿದೆಡೆ ಕೆಲಸ ಮಾಡಿದ.

ಕೊನೆಗೆ ಈ ವ್ಯವಸ್ಥೆಯೇ ಸರಿ ಇಲ್ಲ ಎಂದು ಹೇಳುತ್ತಲೇ ಈಗ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಡುವ ಮೂಲಕ ಬಾಂಬರ್ ಆಗಿದ್ದಾನೆ. ಅತೀ ಹೆಚ್ಚು ಓದಿ ಡಬಲ್ ಗ್ರಾಜುವೇಟ್ ಆಗಿ ಬ್ಯಾಂಕಿಂಗ್ ನಿಂದ ಬಾಂಬರ್ ವರೆಗೆ ಆದಿತ್ಯ ರಾವ್ ಡಿಮೋಶನ್ ಆಗುತ್ತಲೇ ಪೊಲೀಸ್ ಅತಿಥಿಯಾದ…!

Advertisement

 

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ವಿಶ್ವ ಬಿದಿರು ದಿನವನ್ನು ಆಚರಿಸಿದ ನಾಗಾಲ್ಯಾಂಡ್‌ | ಬಿದಿರು ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲು ಯೋಜಿಸಿದ ನಾಗಾಲ್ಯಾಂಡ್‌ |

ನಾಗಾಲ್ಯಾಂಡ್‌ನಲ್ಲಿ ಕೂಡಾ ಬಿದಿರು ಕೃಷಿಯ ಬಗ್ಗೆ ಗಮನಹರಿಸಲಾಗಿದೆ. ಇದೀಗ ವಿಶ್ವ ಬಿದಿರು ದಿನದ…

9 hours ago

ರೈತರಿಗೆ ₹ 21,000 ಕೋಟಿ ನೆರವು | 100 ಹೊಸ ಕೃಷಿ ವಿಧಾನಗಳ ಅಭಿವೃದ್ಧಿ |

ಕೇಂದ್ರ ಸರ್ಕಾರದ 100 ದಿನಗಳಲ್ಲಿ ಕೃಷಿ ಸಚಿವಾಲಯದಲ್ಲಿ  ಸಾಧನೆಗಳ ಬಗ್ಗೆ ಕೇಂದ್ರ ಕೃಷಿ…

10 hours ago

ದೇಶದಲ್ಲಿ ಸಹಕಾರಿ ವಲಯ ಬಲಗೊಳ್ಳುತ್ತಿದೆ | ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ |

ದೇಶದ ಎಲ್ಲ ಗ್ರಾಮಗಳು ಮತ್ತು ಜಿಲ್ಲೆಗಳಲ್ಲಿ ಸಹಕಾರಿ ಕ್ಷೇತ್ರಕ್ಕೆ ಮರುಜನ್ಮ ನೀಡುವ ಗುರಿಯೊಂದಿಗೆ…

10 hours ago

ಕೃಷಿ ಕ್ಷೇತ್ರದ ಪ್ರಗತಿಗೆ ಆದ್ಯತೆ | ಕೃಷಿ ವಲಯವನ್ನು ಜಾಗತಿಕವಾಗಿ ಅಭಿವೃದ್ಧಿಗೊಳಿಸಬೇಕಿದೆ |

ಕೃಷಿ ವಲಯವನ್ನು ಜಾಗತಿಕವಾಗಿ ಅಭಿವೃದ್ಧಿಗೊಳಿಸಬೇಕಿದೆ ಎಂದು ಕೇಂದ್ರ ಜವಳಿ ಖಾತೆ ಸಚಿವ  ಗಿರಿರಾಜ್ ಸಿಂಗ್…

10 hours ago

ಹವಾಮಾನ ವರದಿ | 20-09-2024 | ಸೆ.23 ರಿಂದ ಕೆಲವು ಕಡೆ ಹೆಚ್ಚು ಮಳೆ ನಿರೀಕ್ಷೆ |

ಸೆ.23 ರಿಂದ ರಾಜ್ಯದ ಕೆಲವು ಕಡೆ ಮಳೆ ಹೆಚ್ಚಾಗುವ ನಿರೀಕ್ಷೆ ಇದೆ.

18 hours ago

ಗ್ರಾಮಗಳಲ್ಲಿ ನೀರಿನ ಹೊಂಡ | ಚಿತ್ರದುರ್ಗ ಜಿಲ್ಲೆಯ 7 ಹಳ್ಳಿಗಳಲ್ಲಿ ವಿಶ್ವಬ್ಯಾಂಕ್ ನೆರವಿನ ಯೋಜನೆ ಅನುಷ್ಟಾನ |

ಚಿತ್ರದುರ್ಗ ಜಿಲ್ಲೆಯ 7 ಹಳ್ಳಿಗಳಲ್ಲಿ 5 ಸಾವಿರದ 171 ಹೆಕ್ಟೇರ್ ಪ್ರದೇಶದಲ್ಲಿ ಯೋಜನೆ…

1 day ago