Advertisement
ಯಕ್ಷಗಾನ : ಮಾತು-ಮಸೆತ

ಮಕ್ಕಳನ್ನು ಎತ್ತುವುದಕ್ಕಾಗಿ ತಾಯಿ ಬಾಗಬಹುದು, ಆದರೆ ವ್ಯಾಧಿರೂಪದಿಂದ ಬೆನ್ನು ಬಾಗಬಾರದು…..

Share

ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ವಿಶ್ವರೂಪ’)
ಪ್ರಸಂಗ : ವಿಶ್ವರೂಪಾಚಾರ್ಯ

(ಸಂದರ್ಭ : ಸ್ವರ್ಗದಲ್ಲಿ ಗುರುಪೀಠ ಶೂನ್ಯವಾದಾಗ ಆ ಸ್ಥಾನವನ್ನು ಅಲಂಕರಿಸಲು ದೇವೇಂದ್ರನು ಬಿನ್ನವಿಸುತ್ತಾನೆ)

“.. ಕಾಮ್ಯರೂಪವಾದಂತಹ ಯಜ್ಞದಿಂದ, ವಿಶ್ವಕರ್ಮನಾದಂತಹ ಯಜ್ಞೇಶ್ವರನ ಅನುಗ್ರಹದಿಂದ ಪಡೆದಂತಹ ಲೋಕಾಧಿಪತ್ಯಕ್ಕೆ ಭಾಗಿಯಾದವರಲ್ಲಿ ನಾನು ಮುಖ್ಯಸ್ಥನು. ‘ವಿಶ್ವಕರ್ಮ’ – ವಿಶ್ವನು ಯಾವನ ಕೃತಿಯಾಗಿದೆಯೋ ಆ ಅವನು ‘ವಿಶ್ವಕರ್ಮ’. ತತ್ವತಃ ನೋಡಿದರೆ ವಿಶ್ವಕ್ಕಿಂತ ಭಿನ್ನನಲ್ಲ ವಿಶ್ವಕರ್ಮ. ಉತ್ತಮ ಸಂಗೀತಗಾರನ ಸೃಷ್ಟಿ ಗಾನದ ನಾದದ ಅಲೆಗಳು. ಪ್ರತ್ಯೇಕವಾಗಿ ಶಬ್ದಪ್ರಮಾಣದಿಮದ ಹೇಳುತ್ತೇವೆ. ಹೊರತು ಸಂಗೀತಕ್ಕೆ ಭಿನ್ನವಾದ್ದಲ್ಲ ಅಲೆಗಳು. ನಾದತರಂಗ ಮಾತ್ರ ಹಾಡುವಂತಹ ಯಾವತ್ತೂ ಹಾಡುಗಾರನ ನಾದ, ಅವಿನಾಭಾವ. ಆದರೆ ವ್ಯಾವಹಾರಿಕವಾಗಿ ಹೇಗೆ ಅಂದರೆ ಪ್ರಪಂಚ ಬೇರೆ, ವಿಶ್ವಕರ್ಮ ಬೇರೆ. ಈ ವಿಶ್ವಕರ್ಮನದ್ದಾದಂತಹ ಮತ್ತೊಂದು ಸ್ವರೂಪಕ್ಕೆ ‘ವಿಶ್ವರೂಪ’ ಅಂತ ಹೇಳುತ್ತೇವೆ. ಈ ವಿಶ್ವಕ್ಕೆ ರೂಪವನ್ನು ಹೇಗೆ ಕೊಡುವುದು? ಅಂದರೆ ಭೌತಿಕವಾಗಿ ಐದು – ಪಂಚಭೂತ. ಆಮೇಲೆ ಮಾನಸಿಕ, ಬೌದ್ಧಿಕವಾಗಿ ಚಿಂತಿಸುವಾಗ ಅದಕ್ಕೆ ಮೂರು ಶಕ್ತಿಗಳು – ಇಚ್ಛಾ, ಕ್ರಿಯಾ, ಜ್ಞಾನ. ಹಾಗಾಗಿ ವಿಶ್ವಕರ್ಮನನ್ನು ಮೂರ್ತಿವತ್ತಾಗಿ ಚಿತ್ರಸಿದಾವಾಗ ಐದು ಮುಖ ವಿಶ್ವಕರ್ಮನಿಗೆ. ವಿಶ್ವರೂಪನಾದ ನನಗೆ ಮೂರು ಮುಖ. ತತ್ವತಃ ಒಂದೇ ಅಖಂಡ. ಒಂದಕ್ಕಿಂತ ಒಂದು ಭಿನ್ನವಾದುದಲ್ಲ. ಹೀಗೆ ಆತ್ಮಾನುಸಂಧಾನದಲ್ಲಿ ನಾನು ಅದೇ ಆಗಿ ಇದ್ದ ಕಾಲಕ್ಕೆ ನೀನು ಬಂದಿದ್ದಿ.

ವಿಧಿನಿಷೇಧದ ಕಟ್ಟುಪಾಡಿಗೆ ಒಳಪಡದೇ ಇದ್ದರೂ ಕೆಲವೊಮ್ಮೆ ನಾವು ವಿಧಿಯನ್ನೂ ನಿಷೇಧವನ್ನೂ ಪರಿಗ್ರಹಿಸುತ್ತೇನೆ. ಮಕ್ಕಳನ್ನು ಎತ್ತುವುದಕ್ಕಾಗಿ ತಾಯಿ ಬಾಗಬಹುದು. ಆದರೆ ವ್ಯಾಧಿರೂಪದಿಂದ ಬೆನ್ನು ಬಾಗಬಾರದು. ಮರಿಗಪ್ಪೆ ನೀರಿನಲ್ಲಿ ಇರಬೇಕು. ಬಾಲ ಹೋದ ಮೇಲೆ ಕಪ್ಪೆಗೆ ನೆಲವೇನು? ಜಲವೇನು? ಸ್ವರ್ಗವೂ ನಮಗೆ ನಿಷಿದ್ಧವಲ್ಲ. ನರಕಕ್ಕೂ ಭಯಪಡುವವರಲ್ಲ. ಆದುದರಿಂದಲೇ ನಿನಗೆ ಗೊತ್ತಿರಬಹುದು, ಒಂದು ಮುಖದಲ್ಲಿ ಅಮೃತಪಾನ ಮಾಡುತ್ತೇನೆ. ಒಂದು ಮುಖದಿಂದ ಮದ್ಯಪಾನ ಮಾಡುತ್ತೇನೆ. ಮತ್ತೊಂದು ಮುಖದಿಂದ ಪ್ರಪಂಚವನ್ನು ನೋಡುತ್ತೇನೆ. …”

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ಅಡಿಕೆ ರೋಗ ನಿಯಂತ್ರಣಕ್ಕೆ ಕೇಂದ್ರದ ಬೆಂಬಲ – ಕ್ಯಾ. ಚೌಟಗೆ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್ ಭರವಸೆ

ಕರಾವಳಿ ಮತ್ತು ಮಲೆನಾಡಿನ ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕೆ, ಹಳದಿ ಎಲೆ ಹಾಗೂ…

8 hours ago

ಹವಾಮಾನ ವರದಿ | 23-08-2026 | ಆಗಸ್ಟ್ 25 ರವರೆಗೆ ಮಳೆ – ಕರಾವಳಿ-ಮಲೆನಾಡಿನಲ್ಲಿ ಉತ್ತಮ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 25ರವರೆಗೆ ಮಳೆ…

12 hours ago

ಅಳಿವಿನಂಚಿನಲ್ಲಿದ್ದ ಪೆರಿಯಾರ್ ಹಸುವಿಗೆ ರಾಷ್ಟ್ರೀಯ ತಳಿ ಮಾನ್ಯತೆ – ಕೇರಳದ ಎರಡನೇ ದೇಶಿ ಗೋತಳಿ

ಅಳಿವಿನಂಚಿನಲ್ಲಿದ್ದ ಕೇರಳದ ಪೆರಿಯಾರ್ ಕುಳ್ಳನ್ ಹಸುವಿಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ರಾಷ್ಟ್ರೀಯ…

14 hours ago

ಪಿಒಪಿ ಗಣಪತಿಗೆ ಬ್ರೇಕ್..? ಕರಾವಳಿಯ 90–95% ಪರಿಸರ ಸ್ನೇಹಿ ಮಾದರಿ ರಾಜ್ಯಕ್ಕೆ ಪಾಠ

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನೇ ಪ್ರತಿಷ್ಠಾಪಿಸಿ ಗಣೇಶೋತ್ಸವ ಆಚರಿಸುವಂತೆ…

16 hours ago

ಪಶ್ಚಿಮ ಘಟ್ಟ ಸಂರಕ್ಷಣೆ ಹೆಸರಿನಲ್ಲಿ ಕೃಷಿಕರಿಗೆ ನಿರ್ಬಂಧ ಬೇಡ – ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕರಿಸಲು ಆಗ್ರಹ

ಪಶ್ಚಿಮ ಘಟ್ಟ ಸಂರಕ್ಷಣೆಯ ಹೆಸರಿನಲ್ಲಿ ಕೃಷಿಕರ ಜೀವನೋಪಾಯಕ್ಕೆ ನಿರ್ಬಂಧ ಹೇರಬಾರದು, ಕಸ್ತೂರಿ ರಂಗನ್…

16 hours ago

ಮುಂಗಾರು ಬೇಗನೆ ವಿದಾಯ ಹೇಳುತ್ತಿದೆಯೇ..? ಸೆಪ್ಟೆಂಬರ್‌ನಲ್ಲಿ ಮಳೆ ಕಡಿಮೆಯಾಗುವ ಮುನ್ಸೂಚನೆ..?

ಸೆಪ್ಟೆಂಬರ್ 5–10ರ ನಂತರ ದೇಶದ ಹಲವು ಭಾಗಗಳಲ್ಲಿ ಮುಂಗಾರು ಮಳೆ ಗಣನೀಯವಾಗಿ ಕಡಿಮೆಯಾಗುವ…

1 day ago