ಮಕ್ಕಳೆಲ್ಲಾ ಯಾಕೆ ಈ ರೀತಿಯಾಗಿ ವ್ಯವಹರಿಸುತ್ತಾರೆ ಎಂದು ಹಿರಿಯರು ಪ್ರಶ್ನಿಸುವುದಕ್ಕಿಂತ ಮೊದಲು…….

August 17, 2019
10:00 AM

ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಶುಕ್ರಾಚಾರ್ಯ’ ’
ಪ್ರಸಂಗ : ಮೃತಸಂಜೀವಿನಿ

Advertisement

(ಶುಕ್ರನ ಮಗಳು ದೇವಯಾನಿಯು ಯಯಾತಿಯನ್ನು ತನಗೆ ವಿವಾಹ ಮಾಡಿಕೊಂಡುವಂತೆ ಪ್ರಾರ್ಥಿಸಿದಾಗ)

“ಕುಮಾರಿ… ನೀನು ಏನೂ ದಾರಿ ತಪ್ಪಿದ ಹಾಗಾಗಲಿಲ್ಲ. ನಮ್ಮ ಮಕ್ಕಳೆಲ್ಲಾ ಯಾಕೆ ಈ ರೀತಿಯಾಗಿ ವ್ಯವಹರಿಸುತ್ತಾರೆ ಎಂದು ಹಿರಿಯರು ಪ್ರಶ್ನಿಸುವುದಕ್ಕಿಂತ ಮೊದಲು ಮೂಲ ಕಾರಣವನ್ನು ತಮ್ಮಲ್ಲೇ ತಾವು ಕಂಡುಹುಡುಕಬೇಕು. ಹೇಳಿಕೇಳಿ ಈ ರಾಕ್ಷಸರ ಆಚಾರ್ಯ ಪೀಠವನ್ನು ಅಲಂಕರಿಸಿದ ಮೇಲೆ ನನ್ನಲ್ಲಿಯೂ ಕೂಡಾ ಆಹಾರ, ವಿಹಾರ, ವ್ಯವಹಾರ ಇದು ಕ್ಷಾತ್ರದಿಂದಲೇ ಮುಂಬರಿದಿದೆ. ಇತ್ತಿತ್ತ ನಾನು ಉಣ್ಣುವಲ್ಲಾಗಲೀ, ಕುಡಿಯುವುದಲ್ಲಾಗಲೀ ವಿಧಿನಿಷೇಧದ ಕಟ್ಟುಪಾಡಿಗೆ ಒಳಪಟ್ಟವನಾಗಿರಲಿಲ್ಲ. ಆದರೆ ಒಂದು ಕಾಲದಲ್ಲಿ ಜಾಗೃತನಾಗಿದ್ದೆ. ಮಗಳೇ… ನಿನ್ನಲ್ಲೂ ಒಂದು ವಿಧವಾದ ಸುಪ್ತವಾದ ಕ್ಷಾತ್ರ ಚಿತ್ತವೃತ್ತಿ ಇದೆ. ಇದಕ್ಕೆ ಪೂರಕವಾಗಿ ಅಂದು ಕಚನನ್ನು ನೀನು ಮೋಹಿಸಿ, ಅವನಿಂದ ಶಾಪಗೊಂಡೆ. ಎಷ್ಟೆಂದರೂ ಅವನು ಬ್ರಾಹ್ಮಣ ಪುತ್ರ. ಅಂತರಂಗ ಬಿಚ್ಚಿ ನಿನ್ನಲ್ಲಿ ಹೇಳುತ್ತೇನೆ. ನನ್ನಲ್ಲಿ ಇರುವುದಕ್ಕಿಂತಲೂ ಹೆಚ್ಚಿನ ಬ್ರಾಹ್ಮಣ್ಯ ಆ ಹುಡುಗನಲ್ಲಿತ್ತು. ಬೇರೊಬ್ಬರಾಗಿರುತ್ತಿದ್ದರೆ ನಿನ್ನ ಭಿಕ್ಷೆಗೆ ಒಲ್ಲೆ ಅನ್ನುತ್ತಿದ್ದರು. ಅಪ್ಪನಿಗಿಂತ ಇಮ್ಮಡಿ, ಮುಮ್ಮಡಿ ಯೋಗ್ಯತೆಯುಳ್ಳಂತಹ ಮಗ ಆ ಕಚ. ಬೃಹಸ್ಪತಿಯಾದರೂ… ಅದು ಬಿಡು… ಹಾಗಾದರೆ ಆ ತರುಣ ವಿದ್ಯೆಗೆ ಎಷ್ಟು ಮೌಲ್ಯವನ್ನು ಕಲ್ಪಿಸಿದ ನೋಡು. ಅದು ಕಳೆದು ಹೋಯಿತಲ್ಲಾ ಎಂದು ನೊಂದು ಶಪಿಸಿದ “ನಿನಗೆ ಕ್ಷತ್ರಿಯನೇ ಗಂಡನಾಗಲಿ” ಅಂತ. ಹೀಗೆ ಬೀಜದಲ್ಲಿದ್ದ ಕ್ಷತ್ರಿಯಗಂಧ, ಆಮೇಲೆ ನಾವು ಬೆಳೆಯುತ್ತಿರುವಾಗ ಆ ಕಚನ ನೊಂದ ನುಡಿ. ಅವನ ಬ್ರಾಹ್ಮಣ್ಯದ ಮಾತನ್ನು ತಳ್ಳಿಹಾಕುವುದಕ್ಕೆ ಬ್ರಹ್ಮನಿಗೂ ಸಾಧ್ಯವಿಲ್ಲ. ಆದ ಕಾರಣ ನಿನಗೆ ಕ್ಷತ್ರಿಯನೇ ಪತಿಯಾಗಬೇಕಾದುದು ಹೌದು..”

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಇದನ್ನೂ ಓದಿ

ಯಾರಿಗೆ ಧೈರ್ಯ ಉಂಟು ಮಾರಾಯ್ರೆ, ‘ಈ ತುಪ್ಪದ ಭರಣಿಯನ್ನು ಒಲೆಯ ಬುಡದಲ್ಲಿ ಇಡಲು…!’
April 13, 2020
10:23 PM
by: ನಾ.ಕಾರಂತ ಪೆರಾಜೆ
ಕತ್ತಲೆಯ ಕೋಣೆಯಲ್ಲಿದ್ದ ಅಂಧಕಾರಕ್ಕೆ ನೂರು ವರುಷ ಆಯುಸ್ಸು….
November 7, 2019
2:49 PM
by: ನಾ.ಕಾರಂತ ಪೆರಾಜೆ
‘ನಮ್ಮ ಶಿವ ದೇವರು ವಿಷ ಕುಡಿದರೂ ಸಾಯಲಿಲ್ಲ’ ಅಂತ ಭಾವುಕರು ಹೇಳ್ತಾರಲ್ಲ….. ‘ಯಾಕೆ ಶಿವ ಸಾಯಲಿಲ್ಲ’?
October 21, 2019
11:00 AM
by: ನಾ.ಕಾರಂತ ಪೆರಾಜೆ
‘ಕುಮಾರ’ ಶಬ್ದದ ಅರ್ಥವೇನು? ವೇದಾಂತಿಗಳು ಹೇಳುತ್ತಾರೆ……
October 12, 2019
2:33 PM
by: ನಾ.ಕಾರಂತ ಪೆರಾಜೆ

You cannot copy content of this page - Copyright -The Rural Mirror

Join Our Group