ಯಕ್ಷಗಾನ : ಮಾತು-ಮಸೆತ

ಮಕ್ಕಳೆಲ್ಲಾ ಯಾಕೆ ಈ ರೀತಿಯಾಗಿ ವ್ಯವಹರಿಸುತ್ತಾರೆ ಎಂದು ಹಿರಿಯರು ಪ್ರಶ್ನಿಸುವುದಕ್ಕಿಂತ ಮೊದಲು…….

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಶುಕ್ರಾಚಾರ್ಯ’ ’
ಪ್ರಸಂಗ : ಮೃತಸಂಜೀವಿನಿ

Advertisement

(ಶುಕ್ರನ ಮಗಳು ದೇವಯಾನಿಯು ಯಯಾತಿಯನ್ನು ತನಗೆ ವಿವಾಹ ಮಾಡಿಕೊಂಡುವಂತೆ ಪ್ರಾರ್ಥಿಸಿದಾಗ)

“ಕುಮಾರಿ… ನೀನು ಏನೂ ದಾರಿ ತಪ್ಪಿದ ಹಾಗಾಗಲಿಲ್ಲ. ನಮ್ಮ ಮಕ್ಕಳೆಲ್ಲಾ ಯಾಕೆ ಈ ರೀತಿಯಾಗಿ ವ್ಯವಹರಿಸುತ್ತಾರೆ ಎಂದು ಹಿರಿಯರು ಪ್ರಶ್ನಿಸುವುದಕ್ಕಿಂತ ಮೊದಲು ಮೂಲ ಕಾರಣವನ್ನು ತಮ್ಮಲ್ಲೇ ತಾವು ಕಂಡುಹುಡುಕಬೇಕು. ಹೇಳಿಕೇಳಿ ಈ ರಾಕ್ಷಸರ ಆಚಾರ್ಯ ಪೀಠವನ್ನು ಅಲಂಕರಿಸಿದ ಮೇಲೆ ನನ್ನಲ್ಲಿಯೂ ಕೂಡಾ ಆಹಾರ, ವಿಹಾರ, ವ್ಯವಹಾರ ಇದು ಕ್ಷಾತ್ರದಿಂದಲೇ ಮುಂಬರಿದಿದೆ. ಇತ್ತಿತ್ತ ನಾನು ಉಣ್ಣುವಲ್ಲಾಗಲೀ, ಕುಡಿಯುವುದಲ್ಲಾಗಲೀ ವಿಧಿನಿಷೇಧದ ಕಟ್ಟುಪಾಡಿಗೆ ಒಳಪಟ್ಟವನಾಗಿರಲಿಲ್ಲ. ಆದರೆ ಒಂದು ಕಾಲದಲ್ಲಿ ಜಾಗೃತನಾಗಿದ್ದೆ. ಮಗಳೇ… ನಿನ್ನಲ್ಲೂ ಒಂದು ವಿಧವಾದ ಸುಪ್ತವಾದ ಕ್ಷಾತ್ರ ಚಿತ್ತವೃತ್ತಿ ಇದೆ. ಇದಕ್ಕೆ ಪೂರಕವಾಗಿ ಅಂದು ಕಚನನ್ನು ನೀನು ಮೋಹಿಸಿ, ಅವನಿಂದ ಶಾಪಗೊಂಡೆ. ಎಷ್ಟೆಂದರೂ ಅವನು ಬ್ರಾಹ್ಮಣ ಪುತ್ರ. ಅಂತರಂಗ ಬಿಚ್ಚಿ ನಿನ್ನಲ್ಲಿ ಹೇಳುತ್ತೇನೆ. ನನ್ನಲ್ಲಿ ಇರುವುದಕ್ಕಿಂತಲೂ ಹೆಚ್ಚಿನ ಬ್ರಾಹ್ಮಣ್ಯ ಆ ಹುಡುಗನಲ್ಲಿತ್ತು. ಬೇರೊಬ್ಬರಾಗಿರುತ್ತಿದ್ದರೆ ನಿನ್ನ ಭಿಕ್ಷೆಗೆ ಒಲ್ಲೆ ಅನ್ನುತ್ತಿದ್ದರು. ಅಪ್ಪನಿಗಿಂತ ಇಮ್ಮಡಿ, ಮುಮ್ಮಡಿ ಯೋಗ್ಯತೆಯುಳ್ಳಂತಹ ಮಗ ಆ ಕಚ. ಬೃಹಸ್ಪತಿಯಾದರೂ… ಅದು ಬಿಡು… ಹಾಗಾದರೆ ಆ ತರುಣ ವಿದ್ಯೆಗೆ ಎಷ್ಟು ಮೌಲ್ಯವನ್ನು ಕಲ್ಪಿಸಿದ ನೋಡು. ಅದು ಕಳೆದು ಹೋಯಿತಲ್ಲಾ ಎಂದು ನೊಂದು ಶಪಿಸಿದ “ನಿನಗೆ ಕ್ಷತ್ರಿಯನೇ ಗಂಡನಾಗಲಿ” ಅಂತ. ಹೀಗೆ ಬೀಜದಲ್ಲಿದ್ದ ಕ್ಷತ್ರಿಯಗಂಧ, ಆಮೇಲೆ ನಾವು ಬೆಳೆಯುತ್ತಿರುವಾಗ ಆ ಕಚನ ನೊಂದ ನುಡಿ. ಅವನ ಬ್ರಾಹ್ಮಣ್ಯದ ಮಾತನ್ನು ತಳ್ಳಿಹಾಕುವುದಕ್ಕೆ ಬ್ರಹ್ಮನಿಗೂ ಸಾಧ್ಯವಿಲ್ಲ. ಆದ ಕಾರಣ ನಿನಗೆ ಕ್ಷತ್ರಿಯನೇ ಪತಿಯಾಗಬೇಕಾದುದು ಹೌದು..”

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವ |

ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…

5 hours ago

ಬಾಗಲಕೋಟೆ ಮುಧೋಳ ಸೇಬು ಬೆಳೆಗಾರನ ಬಗ್ಗೆ ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ

ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್‌ನಲ್ಲಿ ಪ್ರಧಾನಿ…

21 hours ago

“ದ ಹಿಂದೂ ಮ್ಯಾನಿಫ್ಯಾಸ್ಟೋ” ಕೃತಿ ಬಿಡುಗಡೆ | ಅಹಿಂಸೆಯೇ ಭಾರತದ ನೈಜ ಧರ್ಮ-ಮೋಹನ್ ಭಾಗವತ್

ಅಹಿಂಸೆಯೇ ಭಾರತದ ನೈಜ ಧರ್ಮವಾಗಿದೆ. ಆದರೆ, ಹಿಂಸಾಮಾರ್ಗದಲ್ಲಿ ಸಾಗುವವರ ದಮನ ಮಾಡುವುದೂ ಸಹ…

21 hours ago

ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರ ದಾಳಿ ಹಿನ್ನೆಲೆ | ಭಾರತದಲ್ಲಿ ಪಾಕ್ ಸರ್ಕಾರದ ಸಾಮಾಜಿಕ ಜಾಲತಾಣ ನಿಷೇಧ

ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಪಾಕ್ ಪ್ರೇರಿತ ಭಯೋತ್ಪಾದಕರು ದಾಳಿ ನಡೆಸಿರುವ…

21 hours ago

ರಾಜ್ಯದಲ್ಲಿ ಒಂದು ವಾರ ಗುಡುಗು ಸಹಿತ ಮಳೆ ಸಾಧ್ಯತೆ | 19 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ

ರಾಜ್ಯದ ವಿವಿಧೆಡೆ ಮುಂದಿನ ಒಂದು ವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು…

21 hours ago