Advertisement
ಯಕ್ಷಗಾನ : ಮಾತು-ಮಸೆತ

ಮಕ್ಕಳೆಲ್ಲಾ ಯಾಕೆ ಈ ರೀತಿಯಾಗಿ ವ್ಯವಹರಿಸುತ್ತಾರೆ ಎಂದು ಹಿರಿಯರು ಪ್ರಶ್ನಿಸುವುದಕ್ಕಿಂತ ಮೊದಲು…….

Share

ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಶುಕ್ರಾಚಾರ್ಯ’ ’
ಪ್ರಸಂಗ : ಮೃತಸಂಜೀವಿನಿ

(ಶುಕ್ರನ ಮಗಳು ದೇವಯಾನಿಯು ಯಯಾತಿಯನ್ನು ತನಗೆ ವಿವಾಹ ಮಾಡಿಕೊಂಡುವಂತೆ ಪ್ರಾರ್ಥಿಸಿದಾಗ)

“ಕುಮಾರಿ… ನೀನು ಏನೂ ದಾರಿ ತಪ್ಪಿದ ಹಾಗಾಗಲಿಲ್ಲ. ನಮ್ಮ ಮಕ್ಕಳೆಲ್ಲಾ ಯಾಕೆ ಈ ರೀತಿಯಾಗಿ ವ್ಯವಹರಿಸುತ್ತಾರೆ ಎಂದು ಹಿರಿಯರು ಪ್ರಶ್ನಿಸುವುದಕ್ಕಿಂತ ಮೊದಲು ಮೂಲ ಕಾರಣವನ್ನು ತಮ್ಮಲ್ಲೇ ತಾವು ಕಂಡುಹುಡುಕಬೇಕು. ಹೇಳಿಕೇಳಿ ಈ ರಾಕ್ಷಸರ ಆಚಾರ್ಯ ಪೀಠವನ್ನು ಅಲಂಕರಿಸಿದ ಮೇಲೆ ನನ್ನಲ್ಲಿಯೂ ಕೂಡಾ ಆಹಾರ, ವಿಹಾರ, ವ್ಯವಹಾರ ಇದು ಕ್ಷಾತ್ರದಿಂದಲೇ ಮುಂಬರಿದಿದೆ. ಇತ್ತಿತ್ತ ನಾನು ಉಣ್ಣುವಲ್ಲಾಗಲೀ, ಕುಡಿಯುವುದಲ್ಲಾಗಲೀ ವಿಧಿನಿಷೇಧದ ಕಟ್ಟುಪಾಡಿಗೆ ಒಳಪಟ್ಟವನಾಗಿರಲಿಲ್ಲ. ಆದರೆ ಒಂದು ಕಾಲದಲ್ಲಿ ಜಾಗೃತನಾಗಿದ್ದೆ. ಮಗಳೇ… ನಿನ್ನಲ್ಲೂ ಒಂದು ವಿಧವಾದ ಸುಪ್ತವಾದ ಕ್ಷಾತ್ರ ಚಿತ್ತವೃತ್ತಿ ಇದೆ. ಇದಕ್ಕೆ ಪೂರಕವಾಗಿ ಅಂದು ಕಚನನ್ನು ನೀನು ಮೋಹಿಸಿ, ಅವನಿಂದ ಶಾಪಗೊಂಡೆ. ಎಷ್ಟೆಂದರೂ ಅವನು ಬ್ರಾಹ್ಮಣ ಪುತ್ರ. ಅಂತರಂಗ ಬಿಚ್ಚಿ ನಿನ್ನಲ್ಲಿ ಹೇಳುತ್ತೇನೆ. ನನ್ನಲ್ಲಿ ಇರುವುದಕ್ಕಿಂತಲೂ ಹೆಚ್ಚಿನ ಬ್ರಾಹ್ಮಣ್ಯ ಆ ಹುಡುಗನಲ್ಲಿತ್ತು. ಬೇರೊಬ್ಬರಾಗಿರುತ್ತಿದ್ದರೆ ನಿನ್ನ ಭಿಕ್ಷೆಗೆ ಒಲ್ಲೆ ಅನ್ನುತ್ತಿದ್ದರು. ಅಪ್ಪನಿಗಿಂತ ಇಮ್ಮಡಿ, ಮುಮ್ಮಡಿ ಯೋಗ್ಯತೆಯುಳ್ಳಂತಹ ಮಗ ಆ ಕಚ. ಬೃಹಸ್ಪತಿಯಾದರೂ… ಅದು ಬಿಡು… ಹಾಗಾದರೆ ಆ ತರುಣ ವಿದ್ಯೆಗೆ ಎಷ್ಟು ಮೌಲ್ಯವನ್ನು ಕಲ್ಪಿಸಿದ ನೋಡು. ಅದು ಕಳೆದು ಹೋಯಿತಲ್ಲಾ ಎಂದು ನೊಂದು ಶಪಿಸಿದ “ನಿನಗೆ ಕ್ಷತ್ರಿಯನೇ ಗಂಡನಾಗಲಿ” ಅಂತ. ಹೀಗೆ ಬೀಜದಲ್ಲಿದ್ದ ಕ್ಷತ್ರಿಯಗಂಧ, ಆಮೇಲೆ ನಾವು ಬೆಳೆಯುತ್ತಿರುವಾಗ ಆ ಕಚನ ನೊಂದ ನುಡಿ. ಅವನ ಬ್ರಾಹ್ಮಣ್ಯದ ಮಾತನ್ನು ತಳ್ಳಿಹಾಕುವುದಕ್ಕೆ ಬ್ರಹ್ಮನಿಗೂ ಸಾಧ್ಯವಿಲ್ಲ. ಆದ ಕಾರಣ ನಿನಗೆ ಕ್ಷತ್ರಿಯನೇ ಪತಿಯಾಗಬೇಕಾದುದು ಹೌದು..”

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ಅಡಿಕೆ ರೋಗ ನಿಯಂತ್ರಣಕ್ಕೆ ಕೇಂದ್ರದ ಬೆಂಬಲ – ಕ್ಯಾ. ಚೌಟಗೆ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್ ಭರವಸೆ

ಕರಾವಳಿ ಮತ್ತು ಮಲೆನಾಡಿನ ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕೆ, ಹಳದಿ ಎಲೆ ಹಾಗೂ…

8 hours ago

ಹವಾಮಾನ ವರದಿ | 23-08-2026 | ಆಗಸ್ಟ್ 25 ರವರೆಗೆ ಮಳೆ – ಕರಾವಳಿ-ಮಲೆನಾಡಿನಲ್ಲಿ ಉತ್ತಮ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 25ರವರೆಗೆ ಮಳೆ…

12 hours ago

ಅಳಿವಿನಂಚಿನಲ್ಲಿದ್ದ ಪೆರಿಯಾರ್ ಹಸುವಿಗೆ ರಾಷ್ಟ್ರೀಯ ತಳಿ ಮಾನ್ಯತೆ – ಕೇರಳದ ಎರಡನೇ ದೇಶಿ ಗೋತಳಿ

ಅಳಿವಿನಂಚಿನಲ್ಲಿದ್ದ ಕೇರಳದ ಪೆರಿಯಾರ್ ಕುಳ್ಳನ್ ಹಸುವಿಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ರಾಷ್ಟ್ರೀಯ…

14 hours ago

ಪಿಒಪಿ ಗಣಪತಿಗೆ ಬ್ರೇಕ್..? ಕರಾವಳಿಯ 90–95% ಪರಿಸರ ಸ್ನೇಹಿ ಮಾದರಿ ರಾಜ್ಯಕ್ಕೆ ಪಾಠ

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನೇ ಪ್ರತಿಷ್ಠಾಪಿಸಿ ಗಣೇಶೋತ್ಸವ ಆಚರಿಸುವಂತೆ…

16 hours ago

ಪಶ್ಚಿಮ ಘಟ್ಟ ಸಂರಕ್ಷಣೆ ಹೆಸರಿನಲ್ಲಿ ಕೃಷಿಕರಿಗೆ ನಿರ್ಬಂಧ ಬೇಡ – ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕರಿಸಲು ಆಗ್ರಹ

ಪಶ್ಚಿಮ ಘಟ್ಟ ಸಂರಕ್ಷಣೆಯ ಹೆಸರಿನಲ್ಲಿ ಕೃಷಿಕರ ಜೀವನೋಪಾಯಕ್ಕೆ ನಿರ್ಬಂಧ ಹೇರಬಾರದು, ಕಸ್ತೂರಿ ರಂಗನ್…

16 hours ago

ಮುಂಗಾರು ಬೇಗನೆ ವಿದಾಯ ಹೇಳುತ್ತಿದೆಯೇ..? ಸೆಪ್ಟೆಂಬರ್‌ನಲ್ಲಿ ಮಳೆ ಕಡಿಮೆಯಾಗುವ ಮುನ್ಸೂಚನೆ..?

ಸೆಪ್ಟೆಂಬರ್ 5–10ರ ನಂತರ ದೇಶದ ಹಲವು ಭಾಗಗಳಲ್ಲಿ ಮುಂಗಾರು ಮಳೆ ಗಣನೀಯವಾಗಿ ಕಡಿಮೆಯಾಗುವ…

1 day ago