ಮಡಿಕೇರಿ ಆಕಾಶವಾಣಿಗೆ 26 ನೇ ವರ್ಷಾಚರಣೆಯ ಸಂಭ್ರಮ

August 29, 2019
10:00 AM

ಮಡಿಕೇರಿ : ಮಡಿಕೇರಿ ಆಕಾಶವಾಣಿಯು 1993ರ ಆಗಸ್ಟ್ 28ರಂದು 103.1 ಮೆಗಾ ಹಟ್ರ್ಸ್ ತರಂಗಾಂತರದಿಂದ ಸ್ಥಾಪನೆಯಾಗಿ ಇದೀಗ 26ನೇ ವರ್ಷವನ್ನು ಪೂರೈಸುತ್ತಿದೆ. ಸಮಾಜದ ಸರ್ವರಿಗೂ ಬೇಕಾಗಿರುವ ವಿಚಾರಗಳನ್ನು ಪ್ರಾರಂಭದಿಂದಲೂ ಬಿತ್ತರಿಸುತ್ತಿದೆ.

Advertisement

ಕೊಡಗು ಜಿಲ್ಲೆಯ ಪ್ರತಿಭೆಗಳ ಪರಿಚಯ, ಕೃಷಿಯ ಚಿತ್ರಣ ಹಾಗೂ ಸಾಧನೆ, ಮಹಿಳೆಯರ-ಮಕ್ಕಳ ಕಾರ್ಯಕ್ರಮಗಳಲ್ಲದೇ ಜನರಿಗೆ ತಾಜಾ ಮಾಹಿತಿ ನೀಡುವ ಕೊಡವ ಭಾಷೆಯ ಸುದ್ದಿ ಸಮಾಚಾರ,ಅರೆಭಾಷೆಯ ಸುದ್ದಿಜೊಂಪೆ,ಬ್ಯಾರಿ ಭಾಷೆಯ ಸುದ್ದಿಸಾರ-ಇವುಗಳ ಪ್ರಸಾರ, ನಿಧನದ ಸುದ್ದಿ, ಸರಕಾರದ ಇಲಾಖೆಗಳ, ಸಂಘ ಸಂಸ್ಥೆಗಳ ಅಭಿವೃದ್ಧಿ ಯೋಜನೆಗಳ ಪ್ರಚಾರವಲ್ಲದೇ, ಚಿಂತನ, ಚಿತ್ರಗೀತೆಗಳು, ನೇರ ರಸಪ್ರಶ್ನೆಗಳೊಂದಿಗೆ ಸಂವಾದ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಚರ್ಚೆ, ಜಾನಪದ ಗೀತೆಗಳು, ಭಕ್ತಿಗೀತೆಗಳು, ಭಾವಗೀತೆಗಳು, ಹಿಂದಿ ಚಿತ್ರಗೀತೆಗಳು, ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಾರ್ತೆಗಳು, ದಿನವೂ ಶುಭನುಡಿ ಹೀಗೆ ಉಪಯುಕ್ತ ವಿಚಾರಗಳೊಂದಿಗೆ ಆಕಾಶವಾಣಿಯು ಈ ಭಾಗದ ಜನಪ್ರಿಯ ಮಾಧ್ಯಮವಾಗಿದೆ.

6 ಕಿಲೋ ವಾಟ್ಸ್ ಸಾಮಥ್ರ್ಯದಿಂದ ಶುರುವಾದ ಮಡಿಕೇರಿ ಆಕಾಶವಾಣಿಯು ಈಗ ತನ್ನ ಪ್ರಸಾರದ ಸಾಮಥ್ರ್ಯವನ್ನು 10 ಕಿಲೋ ವಾಟ್ಸ್ ಹೆಚ್ಚಿಸಿಕೊಂಡು ಪ್ರಸಾರದ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಈ ಸಂದರ್ಭದಲ್ಲಿ ಆಕಾಶವಾಣಿ -ನಮ್ಮವಾಣಿ ರೂಪಕ ಬೆಳಗ್ಗೆ 9:10 ಮಧ್ಯಾಹ್ನ 1:30 ಹಾಗೂ ಸಂಜೆ 5 ಗಂಟೆಗೆ ಮಡಿಕೇರಿ ಕೇಂದ್ರದಿಂದ ಮೂಡಿಬಂತು ಎಂದು ಕಾರ್ಯಕ್ರಮ ನಿರ್ವಾಹಕರಾದ ಉಣ್ಣಿಕೃಷ್ಣನ್ ಮತ್ತು ವಿಜಯ್ ಅಂಗಡಿ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರೇಡಿಯೋ ಜಾಹೀರಾತು ಪ್ರತಿನಿಧಿ ಶೌಕತ್ ಹಾಗೂ ರೇಡಿಯೋ ಶ್ರೋತೃ ಭಾಗೀರಥಿ ಹುಲಿತಾಳ ಅವರನ್ನು ಸನ್ಮಾನಿಸಲಾಯಿತು.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಕೊಳೆರೋಗ | ಶೇ.95 ರಷ್ಟು ಕೃಷಿಕರ ತೋಟದಲ್ಲಿ ಅಡಿಕೆ ಕೊಳೆರೋಗ | ಸಮೀಕ್ಷಾ ವರದಿಯ ಮಾಹಿತಿ
August 3, 2025
12:10 PM
by: ದ ರೂರಲ್ ಮಿರರ್.ಕಾಂ
ಸವಿರುಚಿ | ಹಲಸಿನ ಬೇಳೆ (ಹ ಬೀ) ಸೂಪ್‌
August 3, 2025
9:00 AM
by: ದ ರೂರಲ್ ಮಿರರ್.ಕಾಂ
ಪ್ರೇಮ ವಿಚಾರದಲ್ಲಿ ಈ ರಾಶಿಯವರಿಗೆ ಭಾವನಾತ್ಮಕ ಏರಿಳಿತ
August 3, 2025
8:00 AM
by: ದ ರೂರಲ್ ಮಿರರ್.ಕಾಂ
ಕಲುಷಿತ ಭಾಷೆಯ ಶುದ್ಧೀಕರಣಕ್ಕೆ ಆದ್ಯತೆ: ರಾಘವೇಶ್ವರ ಶ್ರೀ
August 2, 2025
9:46 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group