ಮಂಗಳೂರು/ಸುಳ್ಯ: ಕ್ಯಾರ್ ಚಂಡಮಾರುತದ ಬಳಿಕ ಶಾಂತವಾಗಿದ್ದ ಅರಬೀ ಸಮುದ್ರ ಈಗ ಮತ್ತೆ ಇನ್ನೊಂದು ಚಂಡಮಾರುತಕ್ಕೆ ಸಿದ್ಧವಾಗುತ್ತಿದೆ. ಇದು “ಮಹಾ” ಚಂಡಮಾರುತ. ಇದು ಅರಬೀ ಸಮುದ್ರದಲ್ಲಿ ಏಳುತ್ತಿರುವ 4 ನೇ ಚಂಡಮಾರುತ.
ಸದ್ಯ ಅರಬೀ ಸಮುದ್ರದ ಮಧ್ಯ ಭಾಗದಲ್ಲಿ ವಾಯು ಭಾರ ಕುಸಿತ ಕಂಡುಬಂದಿದೆ. ಇಂದು ಸಂಜೆಯ ವೇಳೆಗೆ ಇದರ ತೀವ್ರತೆ ತಿಳಿಯಲಿದೆ. ಈಗಿನ ನಿರೀಕ್ಷೆ ಪ್ರಕಾರ ಲಕ್ಷದ್ವೀಪದ ಕಡೆಗೆ ಈ ಚಂಡಮಾರುತ ಸಾಗುವ ಲಕ್ಷಣ ಇದೆ. ಈ ಹಿಂದೆ ಉಂಟಾದ ಚಂಡಮಾರುತವು ಕರಾವಳಿ ತೀರದಲ್ಲಿ ಭಾರೀ ಮಳೆಗೆ ಕಾರಣವಾಗಿತ್ತು. ಅದೇ ಸಂದರ್ಭ ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಕಾರಣದಿಂದ ಕರಾವಳಿ ತೀರವು ಅಪಾಯದಿಂದ ಪಾರಾಗಿತ್ತು. ಆದರೆ ಒಳನಾಡು ಪ್ರದೇಶದಲ್ಲಿ ಭಾರೀ ಮಳೆಯಾಯಿತು. ಇದೀಗ ಮತ್ತೆ ಅರಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಮುಂದಿನ 48 ಗಂಟೆಗಳಲ್ಲಿ ‘ಮಹಾ’ ಚಂಡಮಾರುತ ತೀವ್ರಗೊಳ್ಳುವ ನಿರೀಕ್ಷೆ ಇದೆ. ಮುಂದಿನ 24 ಗಂಟೆಗಳಲ್ಲಿ ತಮಿಳುನಾಡು ಕರ್ನಾಟಕ, ಮತ್ತು ಕೇರಳಗಳಲ್ಲಿ ಮಳೆಯಾಗಲಿದೆ. ತಮಿಳುನಾಡು, ಕೇರಳ, ಮತ್ತು ಕರ್ನಾಟಕ ಕರಾವಳಿಯುದ್ದಕ್ಕೂ ಸಮುದ್ರದಲ್ಲಿ ಅಬ್ಬರ ಕಾಣಬಹುದು ಎಂದು ಹವಾಮಾನ ವಿಶ್ಲೇಷಣೆಯಲ್ಲಿ ನಿರೀಕ್ಷಿಸಲಾಗಿದೆ.
ಎಲ್ಲಿ ಉಚಿತವೆಂಬ ಆಮಿಶ ಇದೆಯೋ ಅಲ್ಲಿ ತಳ್ಳಾಟವೂ ಇರುತ್ತದೆ. ಸರಕಾರಿ ಬಸ್ ಗಳಲ್ಲಿ…
ಕೊಡಗು ಜಿಲ್ಲೆಯಲ್ಲಿ ಮಳೆ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಹೆಚ್ಚಿನ ಗಾಳಿ-ಮಳೆ…
ಈ ಬಾರಿ ಮೇ ತಿಂಗಳಿನಿಂದಲೇ ಮಳೆ ಆರಂಭವಾಗಿದೆ. ಜೂನ್.10 ಕಳೆಯುವ ಹೊತ್ತಿಗೆ ವಾತಾವರಣ…
ಈಗಿನಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದ್ದರೂ ನಿರೀಕ್ಷಿತ ಪ್ರಮಾಣದಲ್ಲಿ…
ಜೂನ್ 2025ರಲ್ಲಿ ಮಿಥುನ ರಾಶಿಯಲ್ಲಿ ಸೂರ್ಯ, ಬುಧ ಮತ್ತು ಗುರು ಗ್ರಹಗಳ ತ್ರಿಗ್ರಾಹಿ…
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಅಂದಾಜು 800 ರಿಂದ 900…