ಮಂಗಳೂರು/ಸುಳ್ಯ: ಕ್ಯಾರ್ ಚಂಡಮಾರುತದ ಬಳಿಕ ಶಾಂತವಾಗಿದ್ದ ಅರಬೀ ಸಮುದ್ರ ಈಗ ಮತ್ತೆ ಇನ್ನೊಂದು ಚಂಡಮಾರುತಕ್ಕೆ ಸಿದ್ಧವಾಗುತ್ತಿದೆ. ಇದು “ಮಹಾ” ಚಂಡಮಾರುತ. ಇದು ಅರಬೀ ಸಮುದ್ರದಲ್ಲಿ ಏಳುತ್ತಿರುವ 4 ನೇ ಚಂಡಮಾರುತ.
ಸದ್ಯ ಅರಬೀ ಸಮುದ್ರದ ಮಧ್ಯ ಭಾಗದಲ್ಲಿ ವಾಯು ಭಾರ ಕುಸಿತ ಕಂಡುಬಂದಿದೆ. ಇಂದು ಸಂಜೆಯ ವೇಳೆಗೆ ಇದರ ತೀವ್ರತೆ ತಿಳಿಯಲಿದೆ. ಈಗಿನ ನಿರೀಕ್ಷೆ ಪ್ರಕಾರ ಲಕ್ಷದ್ವೀಪದ ಕಡೆಗೆ ಈ ಚಂಡಮಾರುತ ಸಾಗುವ ಲಕ್ಷಣ ಇದೆ. ಈ ಹಿಂದೆ ಉಂಟಾದ ಚಂಡಮಾರುತವು ಕರಾವಳಿ ತೀರದಲ್ಲಿ ಭಾರೀ ಮಳೆಗೆ ಕಾರಣವಾಗಿತ್ತು. ಅದೇ ಸಂದರ್ಭ ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಕಾರಣದಿಂದ ಕರಾವಳಿ ತೀರವು ಅಪಾಯದಿಂದ ಪಾರಾಗಿತ್ತು. ಆದರೆ ಒಳನಾಡು ಪ್ರದೇಶದಲ್ಲಿ ಭಾರೀ ಮಳೆಯಾಯಿತು. ಇದೀಗ ಮತ್ತೆ ಅರಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಮುಂದಿನ 48 ಗಂಟೆಗಳಲ್ಲಿ ‘ಮಹಾ’ ಚಂಡಮಾರುತ ತೀವ್ರಗೊಳ್ಳುವ ನಿರೀಕ್ಷೆ ಇದೆ. ಮುಂದಿನ 24 ಗಂಟೆಗಳಲ್ಲಿ ತಮಿಳುನಾಡು ಕರ್ನಾಟಕ, ಮತ್ತು ಕೇರಳಗಳಲ್ಲಿ ಮಳೆಯಾಗಲಿದೆ. ತಮಿಳುನಾಡು, ಕೇರಳ, ಮತ್ತು ಕರ್ನಾಟಕ ಕರಾವಳಿಯುದ್ದಕ್ಕೂ ಸಮುದ್ರದಲ್ಲಿ ಅಬ್ಬರ ಕಾಣಬಹುದು ಎಂದು ಹವಾಮಾನ ವಿಶ್ಲೇಷಣೆಯಲ್ಲಿ ನಿರೀಕ್ಷಿಸಲಾಗಿದೆ.
ಸೆ.18ರಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಚುರುಕಾಗುವ ಸೂಚನೆ ಇದ್ದು, ಸೆ.19ರಿಂದ ಉತ್ತರ…
ಬರಪೀಡಿತ ಎಂದು ಘೋಷಿಸಿರುವ ರಾಜ್ಯದ 101 ತಾಲೂಕುಗಳ ರೈತರಿಗೆ ಸಾಲ ಮರುಪಾವತಿ ಅವಧಿಯನ್ನು…
ಇಂಡೋನೇಷ್ಯಾದ ಸುಲವೆಸಿಯಲ್ಲಿ ಪತ್ತೆಯಾದ ಸುಮಾರು 25,000 ವರ್ಷಗಳ ಹಿಂದಿನ ಮಾನವ ಹಲ್ಲುಗಳಲ್ಲಿ ಅಡಿಕೆ…
‘ಹನುಮಾನ್ ಅಂಶ್’ ಸಿನಿಮಾ 40ನೇ ದಿನವೂ ₹8.25 ಕೋಟಿ ಗಳಿಸಿ ಬಾಕ್ಸ್ ಆಫೀಸ್ನಲ್ಲಿ…
ನೈಋತ್ಯ ಮುಂಗಾರು ಹಿಂದೆ ಸರಿಯಲು ಪೂರಕ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದ್ದು, ಸೆ.17ರ ವೇಳೆಗೆ ಪಶ್ಚಿಮ…
ಕರ್ನಾಟಕದ ಹಲವು ಭಾಗಗಳಲ್ಲಿ ಸೆ.17ರಂದು ಸಂಜೆ ಹಾಗೂ ರಾತ್ರಿ ಅಲ್ಲಲ್ಲಿ ಸಾಮಾನ್ಯ ಮಳೆಯ…