Advertisement
ಅನುಕ್ರಮ

“ಮಧುಮೇಹ” ಭಯವೇಕೆ ? ಏನು ಮಾಡಬಹುದು -ಏನು ಮಾಡಬಾರದು ?

Share

 

ಡಾ.ಆದಿತ್ಯ ಚಣಿಲ
BHMS(Intern)

 

ಮಧುಮೇಹ(ಡಯಾಬಿಟಿಸ್) ಎಂದರೆ ಅದೇನೋ ಜನರಲ್ಲಿ ತಳಮಳ.  ವೈದ್ಯರ ಬಳಿಗೆ ಬಂದಾಗ ಕೇಳುವುದುಂಟು “ಡಾಕ್ಟ್ರೆ ಪತ್ಯ ಏನಾದ್ರು ಮಾಡಬೇಕಾ ” ಅಂತ.

ಮಧುಮೇಹದಲ್ಲಿ 3 ಮುಖ್ಯ ಪ್ರಕಾರಗಳು

1. ಇನ್ಸುಲಿನ್ ಅವಲಂಬಿತ ಮಧುಮೇಹ  – ಇದು ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತದೆ

2.ಇನ್ಸುಲೈನ್ ಅವಲಂಬಿತವಲ್ಲದ ಮಧುಮೇಹ  – ಇದು ಹೆಚ್ಚಾಗಿ ವಯಸ್ಕರಲ್ಲಿ ಕಂಡುಬರುತ್ತದೆ

3. ಗರ್ಭಿಣಿಯರಲ್ಲಿ ಕಂಡುಬರುವ ಮಧುಮೇಹ

 ಏನಿದರ ಲಕ್ಷಣ?

ಬಾಯಿ ಒಣಗುವಿಕೆ  , ಅತಿಯಾದ ಬಾಯಾರಿಕೆ , ಅತಿಯಾದ ಹಸಿವು, ಹೆಚ್ಚು ಬಾರಿ ಮೂತ್ರವಿಸರ್ಜನೆ, ಕಾರಣವಿಲ್ಲದೆ ತೂಕದಲ್ಲಿ ಇಳಿಕೆ , ತಲೆಸುತ್ತುವುದು
ತಲೆನೋವು , ಕಣ್ಣು ಬಲೆಬಂದಂತಾಗುವುದು ಇತ್ಯಾದಿ

ನಿಯಂತ್ರಣ ಹೇಗೆ ?
ನಿಯಂತ್ರಣ ಮುಖ್ಯವಾಗಿ 3 ರೀತಿಯಲ್ಲಿ
ಔಷಧಿ ಮೂಲಕ ,  ಆಹಾರದಲ್ಲಿ ಕೊಂಚ ಬದಲಾವಣೆ , ಆಹಾರದ ಬದಲಾವಣೆ ಮತ್ತು ವ್ಯಾಯಾಮ

ಔಷಧಿ ಮೂಲಕ ಹೇಗೆ ?

ಹೋಮಿಯೋಪಥಿ- ಹೋಮಿಯೋಪಥಿಯಲ್ಲಿ ವ್ಯಕ್ತಿಗನುಸಾರವಾದ ಔಷಧಿಯನ್ನು ಕೊಡುತ್ತಾರೆ.ಪ್ರತಿವ್ಯಕ್ತಿಯಲ್ಲಿನ ಗುಣಲಕ್ಷಣ,ದೇಹ ಪ್ರಕೃತಿ ,ಆಹಾರ ಪದ್ಧತಿ ,ರೋಗ ಲಕ್ಷಣಗಳು ,ಮುಂತಾದವುಗಳನ್ನು ಪರಿಗಣಿಸಿ ಔಷಧಿಯನ್ನುನೀಡಲಾಗುತ್ತದೆ.

ಆಹಾರದಲ್ಲಿ ಕೊಂಚ ಬದಲಾವಣೆ : – (Breaking the meal) ಒಂದೇ ಸಮನೆ ಆಹಾರವನ್ನು ತಿನ್ನುವ ಬದಲಾಗಿ  ಆಹಾರ ಸೇವನೆಯನ್ನು 3 ಬಾರಿ ಬದಲಾಗಿ 5 ಬಾರಿ ಸೇವಿಸುವುದು. ಬೆಳಗ್ಗಿನ ಚಹಾದ ಬಳಿಕ ಮತ್ತೆ  ಸುಮಾರು 2 ಗಂಟೆಯ ಬಳಿಕ ಕೊಂಚ ಆಹಾರ ತೆಗೆದುಕೊಳ್ಳುವುದು. ಮದ್ಯಾಹ್ನದ ಊಟದಲ್ಲಿ ಹೆಚ್ಚಿನ ಪ್ರಮಾಣದ ತರಕಾರಿ ಹಾಗೂ ಕಡಿಮೆ ಪ್ರಮಾಣದಲ್ಲಿ ಅನ್ನ ಮತ್ತು ಊಟದ ಬಳಿಕ ಹಣ್ಣಿನ ಸೇವನೆ. ಕುಡಿಯುವ ನೀರಿನ ಪ್ರಮಾಣದಲ್ಲಿ ಕೊಂಚ ಏರಿಕೆ
ಎಣ್ಣೆಯ ಪದಾರ್ಥಗಳನ್ನು ಕಡಿಮೆ ಸೇವಿಸುವುದು. ಸಂಜೆ ಪುನಃ ಆಹಾರ ಸೇವನೆ. ನಂತರ ರಾತ್ರಿ  ಆಹಾರ ಸೇವನೆ.

ಏನೆಲ್ಲ ಮಾಡಬಾರದು:

ಸಿಹಿಯಾದ ಪದಾರ್ಥದ ಸೇವನೆ, ಬೇಕರಿಯಲ್ಲಿ ತಯಾರಾದ ಪದಾರ್ಥಗಳ ಸೇವನೆ, ಐಸ್ ಕ್ರೀಮ್ ,ಮದ್ಯ ,ಶಕ್ತಿಗೆ ಬೇಕಾಗುವಂತಹ ಪದಾರ್ಥಗಳು ಸೋಡಾ ಇಂತಹುಗಳನ್ನು ನಿಲ್ಲಿಸಬೇಕು. ಕುಳಿತುಕೊಂಡಲ್ಲೆ ಕಾಲಹರಣ ಮಾಡಬಾರದು. ಕ್ರಿಯಾಶೀಲವಾಗಿರಬೇಕು.

ಏನೆಲ್ಲಾ  ಮಾಡಬೇಕು:

ಹಣ್ಣುಗಳಲ್ಲಿ -ಮಾವು ,ಬಾಳೆಹಣ್ಣು,ಪಪ್ಪಾಯಿ,ಆಪಲ್,ಕಿತ್ತಳೆ,ಪಿಯರ್ ಹಣ್ಣು, ಪೇರಳೆ,ಚಿಕ್ಕು ಇತ್ಯಾದಿ ಸೇವನೆ. ದ್ವಿದಳ ಧಾನ್ಯಗಳು  ಮಧುಮೇಹ ನಿಯಂತ್ರಣದೊಡನೆ ರಕ್ತದೊತ್ತಡವನ್ನು ನಿಯಂತ್ರಣ ಮಾಡುತ್ತದೆ. ಹಾಲು ಮತ್ತು ಹಾಲಿನ ಉತ್ಪನ್ನಗಳಾದ ಮೊಸರು ತುಪ್ಪ ಇತ್ಯಾದಿ
ಸಿರಿದಾನ್ಯಗಳ ಬಳಕೆ ಮುಖ್ಯಸಿರಿ ಧನ್ಯಗಳಾದ ಜೋಳ,ರಾಗಿ,ಸಜ್ಜೆ,ಬರಗು,ಅರ್ಕ,ಕೊರಲು,ನವಣೆ,ಸಾಮೆ ಇತ್ಯಾದಿ
ಕೂಸುಗಡ್ಡೆ ಬಟಾಣಿ ಪಾಲಕ್ ಹಸಿರು ತರಕಾರಿಗಳು,ನೆಲ್ಲಿಕಾಯಿ,ಹಾಗಲಕಾಯಿ, ಮೀನು,ಮೊಟ್ಟೆ ಇತ್ಯಾದಿಗಳನ್ನು ಸೇವಿಸಬಹುದು.
ಅಡಿಗೆ ಪದಾರ್ಥಗಳಾದ ಅರಶಿನ ,ಬೆಳ್ಳುಳ್ಳಿ,ಲವಂಗ,ದಾಲ್ಚಿನ್ನಿ ಇತ್ಯಾದಿ ಒಳ್ಳೆಯದು.

ಕೊಂಚ ವ್ಯಾಯಾಮ:
ದಂಡ ಹೊಡೆಯುವುದು, ನಡೆದಾಟ, ಏರೋಬಿಟ್ ವ್ಯಾಯಾಮ ಇತ್ಯಾದಿಗಳು .

 

ಸದಾ ನೆನಪಿಡಬೇಕಾದ ಅಂಶ :

1.ನಿಮ್ಮ ಬ್ಲಡ್ ಶೂಗರ್ ಲೆವೆಲ್ ಮೇಲೆ ಉಪಹಾರದ ಮುಂಚೆ 100 ರಿಂದ ಕೆಳಗೆ ಉಪಹಾರದ ನಂತರ 140 ರ ಕೆಳಗೆ ಇರಬೇಕು.

2.ಬೆಳಗಿನ ವ್ಯಾಯಾಮ

3.ಬಾಯಿಯ ವಸಡಿನ ಆರೋಗ್ಯ

4.ತೆಂಗಿನ ಎಣ್ಣೆಯ ಬಳಕೆ

5. ಪ್ರತಿನಿತ್ಯ ಮೆಡಿಸಿನ್ ಸೇವನೆ

6.ಪಾದಕ್ಕೆ ಗಾಯವನ್ನು ತಪ್ಪಿಸುವುದು

7.ಮನೆಯಲ್ಲಿ ತಯಾರಾದ ಊಟ ಆಹಾರ ಪದಾರ್ಥ ಸೇವನೆ

8.ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸೇವನೆ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 18-08-2026 | ಕರಾವಳಿಯಲ್ಲಿ ಮುಂದಿನ 10 ದಿನ ಮಳೆ ಸಾಧ್ಯತೆ – ಮಲೆನಾಡಿನಲ್ಲಿ ಆಗಸ್ಟ್ 21 ರಿಂದ ಇಳಿಕೆ

ಕರಾವಳಿ ಕರ್ನಾಟಕದಲ್ಲಿ ಮುಂದಿನ 10 ದಿನಗಳವರೆಗೂ ಮೋಡ–ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.…

13 hours ago

ಬೆಳಗಾವಿಯಲ್ಲಿ ಮಳೆ ಕೊರತೆಯ ಆತಂಕ ದೂರ ; ಜುಲೈ ಮಳೆಯಿಂದ ಕೃಷಿ ಚಟುವಟಿಕೆಗೆ ಚುರುಕು

ಜೂನ್‌ನಲ್ಲಿ ಶೇ.29ರಷ್ಟು ಮಳೆ ಕೊರತೆ ಎದುರಿಸಿದ್ದ ಬೆಳಗಾವಿ ಜಿಲ್ಲೆಯಲ್ಲಿ ಜುಲೈನಲ್ಲಿ ಉತ್ತಮ ಮಳೆಯಾಗಿದ್ದು,…

22 hours ago

‘ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ’ ನಕಲಿ ಸುದ್ದಿ : ಸಾರ್ವಜನಿಕರಿಗೆ ಕೇಂದ್ರ ಸಚಿವರಿಂದ ಮಾಹಿತಿ

ಕೇಂದ್ರ ಸರ್ಕಾರದಿಂದ ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ…

22 hours ago

ಆಗಸ್ಟ್ 28 ರೊಳಗೆ ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆ: ಸಚಿವ ಮಧು ಬಂಗಾರಪ್ಪ

ಸರ್ಕಾರಿ ಶಾಲೆಗಳಲ್ಲಿ ಬಾಕಿ ಇರುವ ಮಕ್ಕಳಿಗೆ ಆಗಸ್ಟ್ 28ರೊಳಗೆ ಶೂ ಮತ್ತು ಸಾಕ್ಸ್…

22 hours ago

ರಾಜ್ಯಾದ್ಯಂತ ಆಹಾರ ಸುರಕ್ಷತೆ ಪರಿಶೀಲನೆಗೆ ದಾಳಿ ಮುಂದುವರಿಕೆ : ಉಲ್ಲಂಘನೆಗೆ ಕ್ಷಮೆಯಿಲ್ಲ ಎಂದ ಆರೋಗ್ಯ ಸಚಿವ

ರಾಜ್ಯಾದ್ಯಂತ ಪಿಜಿ, ಹಾಸ್ಟೆಲ್‌, ಕ್ಯಾಟರಿಂಗ್ ಹಾಗೂ ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ತಪಾಸಣೆ ಮುಂದುವರಿಯಲಿದೆ…

22 hours ago

ಗೋ ಸಂರಕ್ಷಣೆಗೆ Gen Z – 10 ಸಾವಿರ ‘ಗೋ ಮಿತ್ರ’ರಿಗೆ ತರಬೇತಿ – ಗ್ರಾಮೀಣ ಆರ್ಥಿಕತೆಗೆ ಹೊಸ ಮಾದರಿಯೇ?

ಉತ್ತರ ಪ್ರದೇಶದಲ್ಲಿ ಸುಮಾರು 10 ಸಾವಿರ ‘ಗೋ ಮಿತ್ರ’ರಿಗೆ ತರಬೇತಿ ನೀಡಿ ಗೋ…

1 day ago