ಮನೆ ಮನೆಯಲ್ಲೂ ಗಣೇಶ ಹಬ್ಬದ ಸಂಭ್ರಮ…ಜೈ ಗಣೇಶ..

September 1, 2019
1:00 PM
ಚೌತಿಯೆಂದರೆ ಎಲ್ಲರ‌ ಮೆಚ್ಚಿನ ಹಬ್ಬ. ಮನೆ ಮನೆಯಲ್ಲೂ ಸಂಭ್ರಮ. ಅದಕ್ಕೂ ಕಾರಣವಿದೆ….
ಗಣಪನೆಂದರೆ ಎಲ್ಲರ‌ ಪ್ರೀತಿಯವ. ಪ್ರಥಮ ವಂದಿತ. ಅವನ ಹುಟ್ಟು ಹಬ್ಬವೆಂದರೆ ಸುಮ್ಮನೆಯೇ. ಎಲ್ಲರೂ ಆಚರಿಸುವುದೇ. ಹಳ್ಳಿಗಳಿರಲಿ , ಪೇಟೆಗಳಿರಲಿ ಎಲ್ಲೆಲ್ಲೂ ಖುಷಿಯೇ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರೂ ಸಂಭ್ರಮ ಪಡುವ ದಿನವೇ ಗಣೇಶ ಚತುರ್ಥಿ.  ದೇವಸ್ಥಾನಗಳಲ್ಲಿ   ಶಾಲಾ ಕಾಲೇಜುಗಳಲ್ಲಿ ,  ಊರು ಕೇರಿಗಳಲ್ಲಿ , ಪೇಟೆ, ಬೀದಿಗಳಲ್ಲಿ ಗಣಪನ ಮೂರ್ತಿಗಳನ್ನಿಟ್ಟು ಪೂಜಿಸಲಾಗುವುದು. ಅವರವರ ಬಕುತಿಗೆ , ಭಾವನೆಗೆ ಹೊಂದುವಂತೆ ಗಣೇಶನ ಹಬ್ಬವನ್ನು ಆಚರಿಸುವುದು ಹಿಂದಿನಿಂದಲೂ ನಡೆದು ಬಂದ ಪದ್ಧತಿ.
ಗಣೇಶನಿಗೆ ಎಲ್ಲರೂ ಪ್ರೀತಿ ಪಾತ್ರರೇ. ಆತನಿಗೆ ಎಲ್ಲೆಡೆಯೂ ಅಭಿಮಾನಿಗಳೇ. ವಿವಿಧ ಭಕ್ಷ್ಯ ಭೋಜನಗಳನ್ನು ಇಷ್ಟ ಪಡುವ ಗಣಪನಿಗೆ ಪ್ರೀತಿಯಿಂದ ಕೊಟ್ಟ ಗರಿಕೆ ಹುಲ್ಲೂ ಇಷ್ಟವೇ.
ಸಂಕಷ್ಟಗಳ ಸರಮಾಲೆಗಳಿದ್ದರೂ ಗಣಪನಲ್ಲಿ ನಿವೇದಿಸಿದರೆ ಸಮಾಧಾನ. ಯಾವುದೇ ಕೆಲಸ ಕಾರ್ಯಗಳು ಆರಂಭಿಸಬೇಕಾದರೆ ಮೊದಲು ಗಣೀಶನನ್ನು ಸ್ಮರಿಸಿ ಮುಂದುವರಿಯುವುದು ನಮ್ಮ ಸಂಪ್ರದಾಯ. ಹೊಸತಾಗಿ ಕಟ್ಟುವ, ಮನೆ ಇರಲಿ, ಉಪನಯನ, ಮದುವೆಯಂತಹ ಶುಭಕಾರ್ಯಗಳೆಲ್ಲವೂ ಆರಂಭ ಗೊಳ್ಳುವುದು ಗಣೇಶನ ಸ್ತುತಿಯಿಂದಲೇ ಆರಂಭ. ಹಾಗಾಗಿ ಹೆಚ್ಚಿನ ಮನೆಗಳಲ್ಲಿ ಪ್ರತಿ ವರುಷವೂ ಗಣಪತಿ ಹವನವನ್ನು ತಪ್ಪದೆ ಮಾಡುತ್ತಾರೆ.
ಬಂದರೆ ಕಷ್ಟಗಳೆಲ್ಲಾ ಒಟ್ಟೊಟ್ಟಿಗೆ ಬಂದು ಬಿಡುತ್ತವೆ. ಗಣೇಶನ ದಯೆಯೊಂದಿದ್ದರೆ ದೊಡ್ಡದಾಗಿ ಬರುವಂತಹುದು ಸಣ್ಣದರಲ್ಲೇ ಮುಗಿದು ಬಿಡುತ್ತದೆ.  ನಂಬಿದವರ ಯಾವತ್ತೂ ಕೈಬಿಡಲಾರ.ಆತನ ಆಶೀರ್ವಾದವೊಂದು ಜೊತೆಗಿದ್ದರೆ  ಯಾವುದೇ ಭಯ ನಮ್ಮ ಬಳಿ ಸುಳಿಯದು. ಜೈ ಗಣೇಶ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಬಯಕೆ, ಕಾಮ, ಆಕರ್ಷಣೆ, ಪ್ರೀತಿ ಮತ್ತು ಪ್ರೇಮ – ಜೀವನದ ಅಂತರಂಗದ ಹಂತಗಳು
February 28, 2026
7:00 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ | ಮನೆಯಲ್ಲೇ ಸುಲಭವಾಗಿ ಮಾಡುವ ಎಳೆಯ ಹಲಸಿನ ಕಾಯಿ ಸುಕ್ಕ
February 28, 2026
7:00 AM
by: ದಿವ್ಯ ಮಹೇಶ್
ಹೊಸರುಚಿ | ಎಳೆಯ ಹಲಸಿನ ಕಾಯಿ 65 – ಕರಕರಾ, ರುಚಿಕರ ಸ್ನ್ಯಾಕ್ ರೆಸಿಪಿ
February 22, 2026
9:09 AM
by: ದಿವ್ಯ ಮಹೇಶ್
ಪರರನ್ನು ಮೆಟ್ಟಿಲಾಗಿಸಿದ ಸಾಧನೆ ಶಾಶ್ವತವಲ್ಲ: ಆತ್ಮವಂಚನೆಯ ಅಂಧಕಾರದತ್ತ ಕರೆದೊಯ್ಯುವ ಮಾರ್ಗ
February 20, 2026
7:30 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror