ಸುಳ್ಯ : ಅಮರಕ್ರೀಡಾ ಸಂಘಟನಾ ಸಮಿತಿ ಅಮರಮುಡ್ನೂರು ಹಾಗೂ ಅರಣ್ಯ ಇಲಾಖೆ, ಸುಬ್ರಹ್ಮಣ್ಯ ಉಪ ಇಲಾಖೆ, ವತಿಯಿಂದ ಮರ ಬೆಳೆಸಿ -ಬರ ಅಳಿಸಿ- ತಾಪ ಇಳಿಸಿ ಧ್ಯೇಯದೊಂದಿಗೆ ಪ್ರಥಮ ಹಂತದ ಗಿಡ ನೆಡುವ ಕಾರ್ಯಕ್ರಮ ಮಾವಿನಕಟ್ಟೆ ಪರಿಸರದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಗ್ರಾಪಂ ಸದಸ್ಯ ಪುಷ್ಪಕರ ಮಾವಿನಕಟ್ಟೆ ಚಾಲನೆ ನೀಡಿದರು. ಪರಿಸರ ಪ್ರೇಮಿ ಸತ್ಯನ್ ತಳೂರು ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅರಣ್ಯ ರಕ್ಷಕರಾದ ಸಂದೀಪ್, ಅರಣ್ಯ ವಿಕ್ಷಕರಾದ ವೆಂಕಟ್ರಮಣ ಕುತ್ಯಾಳ, ಹರಿಪ್ರಸಾದ್ ಎಲಿಮಲೆ, ವಿಜಯಕಾಂತ್ ಮಾವಿನಕಟ್ಟೆ, ಲೋಹೀತ್ ಮಾವಿನಕಟ್ಟೆ, ತೇಜಸ್ವಿ ಕಡಪಳ, ರಜನಿಕಾಂತ್ ಉಮ್ಮಡ್ಕ ಮುಖ್ಯ ಅತಿಥಿಗಳಾಗಿ ಬಾಗವಹಿಸಿದರು.
ಪ್ರದೀಪ್ ಬೊಳ್ಳೂರು ಸ್ವಾಗತಿಸಿ, ಹರ್ಷೀತ್ ದಾತಡ್ಕ ವಂದಿಸಿದರು. ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಯಶಸ್ವಿಗೆ ರಾಧಕೃಷ್ಣ ಮಾವಿನಕಟ್ಟೆ ಸಹಕರಿಸಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಾನಿನಕಟ್ಟೆ ಅರಣ್ಯ ಪ್ರದೇಶದಲ್ಲಿ ಗಿಡ ನೆಡಲಾಯಿತು.
ಬಾಳೆದಿಂಡು ಉತ್ತಮ ಔಷಧವಾಗಿದೆ. ಬಾಳೆ ರಸದ ವಿವಿಧ ಔಷಧೀಯ ಗುಣಗಳ ಬಗ್ಗೆ ಕುಮಾರ್…
ಆರೋಗ್ಯ ಕವಚ ಸಿಬ್ಬಂದಿಗಳಿಗೆ ಕಳೆದ ಹಲವು ತಿಂಗಳುಗಳಿಂದ ವೇತನವಾಗಿಲ್ಲ.
ದೇಸೀ ಗೋವು ಉಳಿಯಬೇಕು ಏಕೆ ಎಂಬುದಕ್ಕೆ ಹಲವು ನಿದರ್ಶನ, ಉದಾಹರಣೆ ಇದೆ. ಈ…
ಈಗಿನಂತೆ ಮೇ 6 ರಿಂದ ರಾಜ್ಯದ ಅಲ್ಲಲ್ಲಿ ಗುಡುಗು, ಗಾಳಿ ಸಹಿತ ಉತ್ತಮ…
ಕೊರೋನಾ(Corona) ಬಂದು ಈಗಾಗಲೇ 4 ವರ್ಷ ಕಳೆಯಿತು. ಅದಕ್ಕೆ ಬೇಕಾದ ಲಸಿಕೆಯನ್ನು(Vaccination) ಸರ್ಕಾರವೇ(Govt)…
ಭಾರತ(India) ನೆರೆಯ ರಾಷ್ಟ್ರ ಪಾಕಿಸ್ತಾನ(Pakistana) ಸದಾ ಒಂದಲ್ಲ ಒಂದು ಕಿರಿಕ್ ಮಾಡುತ್ತಲೇ ಇರುತ್ತದೆ.…