#ಮಳೆಮಾತು | ಚುರುಕಾದ ಮುಂಗಾರು ಮಳೆ | ರಾಜ್ಯದ ವಿವಿದೆಡೆ ನಿರೀಕ್ಷೆಗೂ ಮುನ್ನವೇ ಮುಂಗಾರು ಹೆಜ್ಜೆ |

June 7, 2020
8:17 PM

ಕೇರಳದಿಂದ ಮುಂಗಾರು ಮಳೆ ರಾಜ್ಯಕ್ಕೆ ಪ್ರವೇಶ ಮಾಡಿದೆ. ಈ ಬಾರಿ ಅಂಫಾನ್ ಚಂಡಮಾರುತದ ಜೊತೆ ಜೊತೆಗೇ ಆರಂಭವಾದ ಮುಂಗಾರು ಮಳೆ ನಿಗದಿತ ಸಮಯಕ್ಕೆ ಕೇರಳ ಪ್ರವೇಶ ಮಾಡಿದೆ. ಜೂ.7 ರಿಂದ ರಾಜ್ಯದಲ್ಲಿ  ಮಳೆ ಚುರುಕಾಗಲಿದ್ದು ಜೂ.9 ರಿಂದ ಎಂದಿನಂತೆ ಸುರಿಯಲಿದೆ. ಈ ನಡುವೆ ಜೂನ್ 4 ರಂದು ಕರಾವಳಿಗೆ ಆಗಮಿಸಿರುವ ಮುಂಗಾರು ಸದ್ಯ ದಕ್ಷಿಣ ಒಳನಾಡನ್ನು ಆವರಿಸಿದೆ. ಹೀಗಾಗಿ ನಿರೀಕ್ಷೆಗಿಂತಲೂ ಮೊದಲೇ ಕರ್ನಾಟಕದ ಒಳನಾಡಿನಲ್ಲೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈಗಿನ ಲೆಕ್ಕಾಚಾರ ಪ್ರಕಾರ ವಾಡಿಕೆಯಂತೆ ಈ ಬಾರಿ ಮಳೆ ಸುರಿಯಲಿದೆ.


ಕೇರಳದಿಂದ ಜೂನ್ 4 ರಂದು ಕರಾವಳಿಗೆ ಮುಂಗಾರು ಮಳೆ ಕಾಲಿಟ್ಟಿದ್ದರೂ ಚಂಡಮಾರುತದ ಕಾರಣದಿಂದ ಕೊಂಚ ನಿಧಾನವಾಗಿ ಈಗ ಮತ್ತೆ ವೇಗ ಪಡೆದಿದೆ.  ಕರ್ನಾಟಕದಲ್ಲಿ ಭಾನುವಾರದಿಂದ ಮುಂಗಾರು ಚುರುಕುಗೊಳ್ಳಲಿದೆ.  ಜೂನ್ 9 ರಿಂದ ಹೆಚ್ಚು ಮಳೆ ಬೀಳಲಿದೆ.

ಈ ಬಾರಿ ಜೂನ್ 11-12 ರೊಳಗೆ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಈಶಾನ್ಯ ರಾಜ್ಯಗಳಿಗೆ ಮುಂಗಾರು ಮಳೆ ತಲುಪಲಿದೆ. ವಾಯುಭಾರ ಕುಸಿತದ ಕಾರಣದಿಂದ ನೈರುತ್ಯ ಮಾನ್ಸೂನ್ ವೇಗ ಪಡೆಯುತ್ತಿದೆ. ಇದರಿಂದಾಗಿ ದೇಶದ ವಿವಿದೆಡೆ ನಿರೀಕ್ಷೆಗಿಂತಲೂ ಬೇಗನೆ ಮಳೆಯಾಗಲಿದೆ. ಮಂಗಳವಾರದ ವೇಳೆಗೆ  ಮಧ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗುವ ಸಾಧ್ಯತೆ ಇದೆ. ಹೀಗಾಗಿ  ಪಶ್ಚಿಮ ಬಂಗಾಳ, ಒಡಿಶಾ, ಸಿಕ್ಕಿಂ ಮತ್ತು ಈಶಾನ್ಯ ರಾಜ್ಯಗಳ ಕೆಲವು ಭಾಗಗಳಿಗೆ ಮುಂಗಾರು ವೇಗ ಪಡೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ ಎರಡು ದಿನಗಳಲ್ಲಿ,ನೈರುತ್ಯ ಮಾನ್ಸೂನ್  ಕರ್ನಾಟಕದ ಕೆಲವು ಭಾಗಗಳು, ತಮಿಳುನಾಡು ಮತ್ತು ಕರಾವಳಿ ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ನಡುವೆ ಕೇರಳದಲ್ಲಿ ಮೀನುಗಾರರಿಕೆ ಎಚ್ಚರಿಕೆ ನೀಡಲಾಗಿದೆ. ಕೇರಳ ಪ್ರದೇಶದ ಸಮುದ್ರದಲ್ಲಿ ಗಾಳಿಯ ವೇಗವು 45-55 ಕಿ.ಮೀ ಹೊಂದಲಿದ್ದು  ಕೇರಳ ಕರಾವಳಿಯಲ್ಲಿ ಮತ್ತು ಲಕ್ಷದ್ವೀಪ ಪ್ರದೇಶದಲ್ಲಿ ಮೀನುಗಾರರು ಸಮುದ್ರಕ್ಕೆ ಹೋಗದಂತೆ ಸೂಚಿಸಲಾಗಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 18-08-2026 | ಕರಾವಳಿಯಲ್ಲಿ ಮುಂದಿನ 10 ದಿನ ಮಳೆ ಸಾಧ್ಯತೆ – ಮಲೆನಾಡಿನಲ್ಲಿ ಆಗಸ್ಟ್ 21 ರಿಂದ ಇಳಿಕೆ
August 18, 2026
4:16 PM
by: ಸಾಯಿಶೇಖರ್ ಕರಿಕಳ
ಬೆಳಗಾವಿಯಲ್ಲಿ ಮಳೆ ಕೊರತೆಯ ಆತಂಕ ದೂರ ; ಜುಲೈ ಮಳೆಯಿಂದ ಕೃಷಿ ಚಟುವಟಿಕೆಗೆ ಚುರುಕು
August 18, 2026
7:33 AM
by: ದ ರೂರಲ್ ಮಿರರ್.ಕಾಂ
‘ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ’ ನಕಲಿ ಸುದ್ದಿ : ಸಾರ್ವಜನಿಕರಿಗೆ ಕೇಂದ್ರ ಸಚಿವರಿಂದ ಮಾಹಿತಿ
August 18, 2026
7:25 AM
by: ದ ರೂರಲ್ ಮಿರರ್.ಕಾಂ
ಆಗಸ್ಟ್ 28 ರೊಳಗೆ ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆ: ಸಚಿವ ಮಧು ಬಂಗಾರಪ್ಪ
August 18, 2026
7:18 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror