ಸುಳ್ಯ: ಪ್ರತಿನಿತ್ಯವೂ ನೀರಿಲ್ಲ ಅಂತ ನಾವು ಹೇಳುತ್ತಲೇ ಇದ್ದೇವೆ. ನಾವ್ಯಾಕೆ ನೀರು ಸಂರಕ್ಷಣೆಯತ್ತ ಚಿತ್ತವಿಡಬಾರದು ? ಮಳೆ ನೀರನ್ನೇ ಸಂರಕ್ಷಣೆ ಮಾಡಿದರೆ, ಇಂಗುವಂತೆ ಮಾಡಿದರೆ ಬರ ಬಾರದಂತೆ ಸ್ವಲ್ಪ ತಡೆಯಬಹುದು. ಈ ಬಗ್ಗೆ ಪಿ ಜಿ ಎಸ್ ಎನ್ ಪ್ರಸಾದ್ ಒಂದು ಲೆಕ್ಕ ನೀಡಿದ್ದಾರೆ. ಅದು ಮಳೆ ಲೆಕ್ಕ,
ಒಂದು ಚದರ ಮೀಟರ್ ಪ್ರದೇಶದಲ್ಲಿ ಬೀಳುವ ಒಂದು ಮಿ.ಮೀ.ಮಳೆ ಅಂದರೆ ಒಂದು ಲೀಟರ್ ನೀರು. ಎಕ್ರೆಗೆ 4046.856 ಚದರ ಮೀಟರ್. ಇಲ್ಲಿ ಮಳೆಯ ಅಗಾಧತೆಯನ್ನು ಗಮನಿಸೋಣ.
ಮಳೆ ಇಲ್ಲ ,ಹೀಗಾದರೆ ಹೇಗಾದೀತು,ಅದು ಇದು – ಅಂತ ಮಾತಾಡುತ್ತೇವೆ. ಈ ತನಕ ಬಂದಿರುವ ಮಳೆ ಒಂದು ಎಕರೆ ಪ್ರದೇಶದಲ್ಲಿ 15,13,524 ಲೀ. ಪ್ರಕೃತಿಯನ್ನು ದೂರದೆ ಅಭ್ಯಸಿಸೋಣ. ವಾರ್ಷಿಕ ಸರಾಸರಿ ಮಳೆ 4456 ಮಿ.ಮೀ. ಚದರ ಮೀಟರ್ ಒಂದರ 4456 ಲೀ.ನೀರು. ಇದನ್ನು ಸಂಗ್ರಹಿಸಿ ಇಟ್ಟಲ್ಲಿ ಒಬ್ಬನ 45 ದಿನಗಳ ಅಗತ್ಯಕ್ಕೆ ಸಾಕಾಗಬಲ್ಲುದು.!
ಮುಂದಿನ ದಿನಗಳಲ್ಲಿ ಇದು ಬೇಕಾದೀತು.
ಇಂದಿನ ದಿನವನ್ನು ಗಮನಿಸಿದರೆ, ಈಗಿನ ವಾತಾವರಣ ಗಮನಿಸಿದರೆ ಮಳೆ ಗಮನಿಸಿದರೆ ಜಲಸಂರಕ್ಷಣೆಯತ್ತ ಎಲ್ಲರೂ ಚಿತ್ತಹರಿಸಲೇಬೇಕಾದ ಅನಿವಾರ್ಯತೆ ಇದೆ. ಯಾವೆಲ್ಲಾ ಮಾದರಿಯನ್ನು ನೀರನ್ನು ಸಂರಕ್ಷಣೆ ಮಾಡಬಹುದು ಹಾಗೂ ಹೇಗೆ ಮಾಡಬಹುದು ಎಂಬುದರ ಬಗ್ಗೆ ಯೋಚನೆ ಮಾಡಲೇಬೇಕಿದೆ. ಇದುವರೆಗೆ ಮಳೆ ಇಲ್ಲ ಮಳೆ ಇಲ್ಲ ಎಂದು ಮಾತನಾಡಿದ್ದಾಯಿತು. ಮುಂದೇನು ಎಂಬುದರ ಬಗ್ಗೆ ಯೋಚನೆ ಮಾಡಬೇಕಿದೆ. ಇದಕ್ಕಾಗಿ ಜಲಸಂರಕ್ಷಣೆಯ ಯಶೋಗಾಥೆಗಳು ಇದ್ದರೆ, ಮಳೆಕೊಯ್ಲು , ನೀರಿನ ಬಗೆಗಿನ ಯಾವುದೇ ಯಶೋಗಾಥೆಗಳು ಇದ್ದರೆ ನಮ್ಮೊಂದಿಗೆ ಹಂಚಿಕೊಳ್ಳಿ. (sullianews@gmail.com ಅಥವಾ ವ್ಯಾಟ್ಸಪ್- 9449125447) ನಾವು ಅದನ್ನು ಪ್ರಕಟ ಮಾಡಿ ಇನ್ನೂ ಕೆಲವಾರು ಜನರಿಗೂ ತಿಳಿಯುವಂತೆ ಮಾಡುತ್ತೇವೆ.
ಸಂಪತ್ತು ಮತ್ತು ಸೌಲಭ್ಯಗಳು ಹೆಚ್ಚಿರುವುದೇ ನಿಜವಾದ ಶ್ರೀಮಂತಿಕೆಯಲ್ಲ; ಅವುಗಳನ್ನು ವಿವೇಕದಿಂದ ಬಳಸುವ ಮನಸ್ಸು…
ಸೆ.11ರಿಂದ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗಲಿದ್ದು, ಬಿಸಿಲು ಹೆಚ್ಚಾಗುವ ಲಕ್ಷಣಗಳಿವೆ.…
ದುರ್ಬಲ ಮುಂಗಾರು ಮತ್ತು ಜಲ–ಪವನ ವಿದ್ಯುತ್ ಉತ್ಪಾದನೆ ಕುಸಿತದಿಂದ ರಾಜ್ಯದಲ್ಲಿ ವಿದ್ಯುತ್ ಪೂರೈಕೆಯ…
2026ರ ಗೌರಿ-ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಮಂಗಳೂರು ಮಹಾನಗರಪಾಲಿಕೆ ಸೂಚಿಸಿದ್ದು, POP…
ಕರ್ನಾಟಕದಲ್ಲಿ ಮಳೆಯ ಸಾಧ್ಯತೆ ಒಟ್ಟಾರೆ ಇಳಿಮುಖವಾಗುತ್ತಿದ್ದು, ಕರಾವಳಿಯಲ್ಲಿ ಸೆ.11ರಿಂದ ಮಳೆ ಕಡಿಮೆಯಾಗುವ ಲಕ್ಷಣಗಳಿವೆ.…
2025-26ರಲ್ಲಿ ಕ್ಯಾಂಪ್ಕೋದ ಅಡಿಕೆ ಖರೀದಿ ಪ್ರಮಾಣ ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿದ್ದರೂ, ಬೆಲೆ ಏರಿಕೆಯಿಂದ…