ಸುಳ್ಯ: ಮಳೆ ಇಲ್ಲದಿರುವಾಗ ಗಿಡ ನೆಡಬೇಕು, ಮರ ಉಳಿಸಬೇಕು ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತದೆ. ಆದರೆ ನಿರಂತರ ಎರಡು ದಿನ ಮಳೆ ಬಂದಾಗ ಜನ ಮರವನ್ನು ಮರೆತರೇ… ?ಹೀಗೊಂದು ಜಿಜ್ಞಾಸೆ ಹುಟ್ಟಿಕೊಂಡದ್ದು ಬುಧವಾರ ಸುಳ್ಯದಲ್ಲಿ ನಡೆದ ಪ್ರಕೃತಿ ವಿಕೋಪ ತಡೆ ಕಾರ್ಯಸೂಚಿ ಸಭೆಯಲ್ಲಿ.
ಸಭೆಯಲ್ಲಿ ಮಾತನಾಡಿದ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ‘ಜೂನ್ ತಿಂಗಳ ಕೊನೆಯವರೆಗೆ ಮಳೆಯೇ ಬಾರದಿದ್ದಾಗ ಗಿಡಗಳನ್ನು ನೆಡಬೇಕು, ಮರಗಳನ್ನು ಉಳಿಸಬೇಕು. ನೆಡಲು ಗಿಡ ಕೊಡಿ ಸಾರ್.. ಎಂದು ಹಲವು ಮಂದಿ ಕೇಳುತ್ತಿದ್ದರು. ಆದರೆ ಎರಡು ದಿನ ಮಳೆ ಸುರಿದಾಗ ಮರಗಳು ಅಪಾಯಕಾರಿಯಾಗಿದೆ, ಮರ ಕಡಿಯಿರಿ ಸಾರ್ ಎಂದು ಕರೆ ಮಾಡುತ್ತಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದಾಗ ಗಂಭೀರ ಸಭೆಯಲ್ಲಿ ಕೆಲ ಕಾಲ ನಗುವಿನ ಕಾರಂಜಿ ಚಿಮ್ಮಿತು.
ಮಳೆ ಬಂದ ಕೂಡಲೇ ಮರಗಳನ್ನು, ಗಿಡಗಳನ್ನು ಮರೆಯುವುದು ಸರಿಯಲ್ಲ. ಗಿಡ ಬೆಳೆಸುವ, ಮರ ಉಳಿಸುವ ಜಾಗೃತಿ ಸದಾ ಇರಲಿ, ತೀರಾ ಅಪಾಯಕಾರಿ ಆಗಿದ್ದಲ್ಲಿ ಮಾತ್ರ ಅಂತಹಾ ಮರಗಳನ್ನು ಮಾತ್ರ ತೆರವು ಮಾಡಲು ಬೇಡಿಕೆ ಸಲ್ಲಿಸಿ. ಮಳೆಗಾಲದ ನೆಪದಲ್ಲಿ ಸದಾ ನಮ್ನನ್ನು ಸಲಹುವ ಮರಗಳನ್ನು ಕಡಿಯದಂತೆ ಎಚ್ಚರ ವಹಿಸಿ, ಗಿಡಗಳನ್ನು ನೆಡಲು ಆಸಕ್ತಿ ಮುಂದುವರಿಸಿ ಎಂದು ಅವರು ವಿನಂತಿಸಿದಾಗ ನಗು ಕರತಾಡನವಾಗಿ ಮಾರ್ಪಾಡಾಯಿತು.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಯಗಳನ್ನು ಸಂಪರ್ಕಿಸಿ 9535156490
ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಹಾಗೂ ಮೂರು ಮರಿಗಳು…
ಮಹಾರಾಷ್ಟ್ರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಮಳೆ ಬೀಳುವ ಸಾಧ್ಯತೆಯಿರುವುದರಿಂದ…
ಉತ್ತರ ಪ್ರದೇಶದ ಆಗ್ರಾ ಬಳಿಯ ಸಿಂಗ್ನಾದಲ್ಲಿ ಅಂತಾರಾಷ್ಟ್ರೀಯ ಆಲೂಗಡ್ಡೆ ದಕ್ಷಿಣ ಏಷ್ಯಾ ಪ್ರಾದೇಶಿಕ…
ರಾಜ್ಯದಲ್ಲಿ ಮಾರಾಟವಾಗುವ 15 ಬಗೆಯ ಔಷಧಗಳು ಹಾಗೂ ಸೌಂದರ್ಯ ವರ್ಧಕಗಳು ಪ್ರಾಮಾಣಿಕೃತ ಗುಣಮಟ್ಟದಲ್ಲಿ…
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಆಕ್ಸಿಯಮ್-4 ಮಿಷನ್…