Advertisement
ಅನುಕ್ರಮ

ಮಳೆ ಬರುವ ಕಾಲಕ್ಕೆ… ಒಳಗ್ಯಾಕ ಕುಂತೇವು…! ಇಳೆಯೊಡನೆ ಜಳಕವಾಡೋಣು…

Share

ಮಳೆ ಬರುವ ಕಾಲಕ್ಕೆ
ಒಳಗ್ಯಾಕ ಕುಂತೇವು
ಇಳೆಯೊಡನೆ ಜಳಕವಾಡೋಣು
ನಾವೂನು, ಮೋಡಗಳ ಆಟ ನೋಡೋಣು
….. ದ ರಾ ಬೇಂದ್ರೆ


#ಪಿ.ಜಿ.ಎಸ್.ಎನ್.ಪ್ರಸಾದ್ ಬಾಳಿಲ

ಮಳೆ ಮಾಪನ……

ಇದು ಆಸಕ್ತಿ ಇರುವ ಯಾರೇ ಆದರೂ ರೂಢಿಸಿಕೊಳ್ಳಬಹುದಾದ ಒಂದು ಸರಳ ಹವ್ಯಾಸ. ನಿರ್ದಿಷ್ಟ ಪ್ರದೇಶದಲ್ಲಿ ಬೀಳುವ ಮಳೆ ಹನಿಗಳ ಪ್ರಮಾಣವನ್ನು ಒಂದು ಸರಳ ಸಾಧನದ ಮೂಲಕ ಅಳೆದು ನಾವೇ ತಯಾರಿಸಿಕೊಂಡ ಕೋಷ್ಟಕದಲ್ಲಿ ಬರೆದಿಡುವುದು.ಇದು ದಿನಗಳು ಕಳೆದಂತೆ, ವರ್ಷಗಳು ಉರುಳಿದಂತೆ ನಮ್ಮ ಅರಿವಿಗೆ ಬಾರದೇ ಅಪೂರ್ವ ಅಂಕಿ ಅಂಶಗಳ ಆಗರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಇತಿಹಾಸ : ಕ್ರಿ.ಪೂ.400 ರಷ್ಟು ಹಿಂದೆಯೇ ಮಳೆ ಮಾಪನ ಮಾಡುತ್ತಿದ್ದ ಬಗ್ಗೆ ” ಕೌಟಿಲ್ಯನ ಅರ್ಥಶಾಸ್ತ್ರ” ದಲ್ಲಿ ಉಲ್ಲೇಖವಿದೆ.
ಮಲೆನಾಡಿನ ಕಾಫಿ ತೋಟಗಳಲ್ಲಿ 19 ನೆ ಶತಮಾನದ ಆರಂಭದಲ್ಲಿ ಮಳೆ ಅಳೆದು ಬರೆದಿಡುವ ಹವ್ಯಾಸ ಆರಂಭಿಸಿದವರು ಬ್ರಿಟಿಷರು. ಮಳೆ ರಿಜಿಸ್ಟರ್ ( ಕೋಷ್ಟಕ ) ತಯಾರಿಸಿ ಅದರಲ್ಲಿ ಹವಾಮಾನದ ವಿವರದೊಂದಿಗೆ ಮಳೆ ಅಳತೆಯನ್ನು ಬರೆದಿಡುತ್ತಿದ್ದರು. ಕಾಫಿ ನಾಡಿನ ರೈತರಲ್ಲಿ ನೂರು ವರ್ಷಗಳಷ್ಟು ಹಳೆಯದಾದ ಮಳೆಯ ರಿಜಿಸ್ಟರ್ ಗಳಿವೆ. ತಜ್ಞರ ಪ್ರಕಾರ ಇವು ಅಮೂಲ್ಯ ದಾಖಲೆಗಳು ಮಳೆ ಮಾಪಕ
ಕೌಟಿಲ್ಯನ ಅರ್ಥಶಾಸ್ತ್ರದಲ್ಲಿನ ಉಲ್ಲೇಖ ಪ್ರಕಾರ ಅಂದು ಮಳೆಯನ್ನು ದ್ರೋಣದ ಲೆಕ್ಕದಲ್ಲಿ ಅಳತೆ ಮಾಡುತ್ತಿದ್ದರು. ಈ ಪದ್ಧತಿಯನ್ನು ‘ವರ್ಷಾನನ’ ಅಂತಲೂ, ಉಪಕರಣವನ್ನು ವರ್ಷಮಾನ್ ಅಂತಲೂ ಕರೆಯುತ್ತಿದ್ದರು. ಇಂದು ಕೂಡಾ ಭಾರೀ ಮಳೆಯನ್ನು ಕುಂಭದ್ರೋಣ ಮಳೆ ಅಂತ ಕರೆಯುವುದುಂಟು.

ಒಂದು ನಿರ್ದಿಷ್ಟ ಪ್ರದೇಶದಲ್ಲಿ, ನಿರ್ದಿಷ್ಟ ಕಾಲದಲ್ಲಿ ಬೀಳುವ ಮಳೆ ಹನಿಗಳ ಪ್ರಮಾಣವನ್ನು ಅಳೆಯಲು ಬಳಸುವ ಸಾಧನವೇ ಮಳೆ ಮಾಪಕ. ಸಾಮಾನ್ಯವಾಗಿ 24 ಗಂಟೆಗಳಲ್ಲಿ ಸುರಿದ ಮಳೆಯನ್ನು ದಿನವಹಿ ದಾಖಲಿಸುವುದು ರೂಢಿ. ಮಳೆ ಮಾಪಕಕ್ಕೆ ಮಳೆ ನೀರು ಅಡೆತಡೆ ಇಲ್ಲದೆ ಬೀಳುವಂತಿರಬೇಕು.

ಮಳೆ ಮಾಪಕದ ರೇಖಾ ಚಿತ್ರ:

ಈ ದಿನಗಳಲ್ಲಿ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಮಳೆ ಮಾಪಕಗಳು ಲಭ್ಯವಿವೆ.ಸರಳ ಸಾಧನಗಳಿಂದ ತೊಡಗಿ, ದುಬಾರಿ ಸ್ವಯಂಚಾಲಿತ ಸಾಧನಗಳವರೆಗೆ ಸಿಗುತ್ತದೆ.

 

ನಾನು ಅಳವಡಿಸಿಕೊಂಡ ಸುಲಭದಲ್ಲಿ ಅಳತೆ ಮಾಡಬಹುದಾದ ಉಪಕರಣ  ಮೇಲೆ ಕಾಣಿಸಲಾದ ಸರಳ ಗಾಜಿನ ಜಾಡಿಯಲ್ಲಿನ ಅಳತೆ ಕೂಡಾ ನಿಖರವಾದ ಲೆಕ್ಕಾಚಾರವನ್ನು ತೋರಿಸಬಲ್ಲುದು.

ಎಲ್ಲಿ ಸ್ಥಾಪಿಸಬೇಕು…?: ಮನೆಯ ಛಾವಣಿ, ಮರಗಿಡಗಳ ಕೆಳಗೆ ಅಳತೆಯ ಸಾಧನವನ್ನು ಇಡಬಾರದು. ಆದಷ್ಟು ಬಯಲ ಪ್ರದೇಶದಲ್ಲಿ ಇರಬೇಕು.
ಮಿ.ಮೀ.ಅಥವಾ ಸೆಂಟಿಮೀಟರ್ ಅಳತೆಯ ಜಾಡಿ ಸಿಗದಿದ್ದರೆ,ಚಿತ್ರದಲ್ಲಿ ಕಾಣಿಸಿದಂತೆ ನಾವೇ ಅಳತೆಯನ್ನು ಗುರುತು ಹಾಕಿಕೊಳ್ಳಬಹುದು ಇಲ್ಲವೇ ಫೂಟ್ ರೂಲರ್ ಸಹಾಯದಿಂದಲೂ ಅಳತೆ ಮಾಡಬಹುದು. ಪ್ರತಿದಿನ ಅಳತೆಯನ್ನು ನೋಡಿ ಕೋಷ್ಟಕದಲ್ಲಿ ಬರೆದಿಡುವುದು. ನಿನ್ನೆ ಬೆಳಿಗ್ಗೆ 8 ರಿಂದ ಈ ದಿನ ಬೆಳಗ್ಗೆ 8 ರ ತನಕ ದಾಖಲಾದ ಮಳೆಯನ್ನು ನಿನ್ನೆಯ ಲೆಕ್ಕಕ್ಕೆ ಬರೆದಿಡುವುದು ವಾಡಿಕೆ.

ಮೇಲ್ಕಾಣಿಸಿದ ಸಾಂಪ್ರದಾಯಿಕ ಉಪಕರಣದಲ್ಲಿಯಾದರೆ ದೊಡ್ಡ ಜಾಡಿಯಲ್ಲಿ ಸಂಗ್ರಹವಾದ ಮಳೆ ನೀರನ್ನು ಹತ್ತಿರದಲ್ಲಿ ಕಾಣಿಸಲಾದ ಪಾರದರ್ಶಕ ಜಾಡಿಗೆ ವರ್ಗಾಯಿಸಿ ಅಳೆಯಬೇಕಾಗುತ್ತದೆ. ಹೊಸಬರಿಗೆ ಇದು ಸ್ವಲ್ಪ ಕಷ್ಟದ ಕೆಲಸ ಅಂತ ಅನಿಸಬಹುದು.

2014 ರ ಮೊದಲು ನಾಲ್ಕಾರು ಮಂದಿಯಷ್ಟೇ ತೊಡಗಿಸಿಕೊಂಡಿದ್ದ ವಿಶೇಷ ಖರ್ಚಿಲ್ಲದ ಈ ಹವ್ಯಾಸ ಇಂದು ಜನಪ್ರಿಯಗೊಳ್ಳುತ್ತಿದೆ. ಸುಳ್ಯ ತಾಲೂಕಿನಾದ್ಯಂತ ಈಗ 15 ಮಂದಿ ಕೃಷಿಕರು ಮಳೆ ಅಳತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅನೇಕ ಮಂದಿ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಇನ್ನೂ ಅನೇಕ ಮಂದಿ ಕೃಷಿಕರು ಈ ಹವ್ಯಾಸವನ್ನು ರೂಢಿಸಿಕೊಂಡರೆ ಕೃಷಿಕರದ್ದೇ ಆದ NETWORK ನ್ನು ಬಲಗೊಳಿಸಬಹುದು ಮಾತ್ರವಲ್ಲ ಕೃಷಿಕಾಯಕದಲ್ಲಿ ಮಳೆಯ ಪಾತ್ರವನ್ನು ನಿಖರವಾಗಿ ಅಂದಾಜಿಸಬಹುದು.

ಇಲ್ಲೊಂದು ಗಾದೆ ಮಾತು ನೆನಪಾಗ್ತಿದೆ..” ಒಂದು ಮಳೆ ಬಂದರೆ ಎತ್ತಿನ ಎರಡೂ ಕೊಂಬುಗಳು ಒದ್ದೆಯಾಗಬೇಕಾದಿಲ್ಲ..” ಯಾಕೆಂದರೆ ಒಂದು ಪ್ರದೇಶದ ಅತ್ಯಂತ ನಿಖರವಾದ ಮಳೆ ಅಳತೆ ಸಿಗಬೇಕಾದರೆ 3.5 ಕಿ.ಮೀ.ಸುತ್ತಳತೆಯಲ್ಲಿ ಒಂದಾದರೂ ಮಳೆ ಮಾಪನ ಬೇಕು..
ಈ ಕ್ಷಣವೇ ಮಳೆಯ ಚಿಟಪಟಕ್ಕೆ ನೀವೂ ಸ್ವರ ಸೇರಿಸಿ ಮಾತನಾಡಲಾರಂಭಿಸಿ.. ನಿಮ್ಮೊಳಗೊಬ್ಬ ಸಂಶೋಧಕ ಜಾಗೃತನಾಗಲೂಬಹುದು.

ಬರಹ: #ಪಿ.ಜಿ.ಎಸ್.ಎನ್.ಪ್ರಸಾದ್ ಬಾಳಿಲ

ಪಿ.ಜಿ.ಎಸ್.ಎನ್.ಪ್ರಸಾದ್ ಬಾಳಿಲ

( ಮಳೆ ಮಾಪನದ ಆಸಕ್ತರಿದ್ದರೆ ಸಂಪರ್ಕಿಸಬಹುದು – ಮಳೆ ಮಾಹಿತಿ-ಮಳೆ ಮಾಪನಕ್ಕೆಂದು ಕೃಷಿಕರ ಗುಂಪು ವಾಟ್ಸಪ್‌ ಹಾಗೂ ಪೇಸ್‌ ಬುಕ್‌ ನಲ್ಲಿದೆ. ಜಿಲ್ಲೆಯ ವಿವಿದೆಡೆಯ ಮಳೆ ಮಾಹಿತಿ ಲಭ್ಯವಿದೆ. ಜಿಲ್ಲೆಯಲ್ಲಿ ಇನ್ನಷ್ಟು ಮಂದಿ ಆಸಕ್ತರು  ಹೆಚ್ಚಾಗಬೇಕಿದೆ. )

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಪಿಎಂ ಕಿಸಾನ್‌ 22ನೇ ಕಂತು ಬಿಡುಗಡೆಗೆ ಸಿದ್ಧತೆ | 9.32 ಕೋಟಿ ರೈತರಿಗೆ ₹18,640 ಕೋಟಿ ನೇರ ನಗದು

ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ.…

11 hours ago

ಮಹಿಳಾ ಕೃಷಿಕರ ಪಾತ್ರ ಬಲಪಡಿಸಲು ಜಾಗತಿಕ ಸಮ್ಮೇಳನ | ದೆಹಲಿಯಲ್ಲಿ GCWAS-2026 ಆರಂಭ

ನವದೆಹಲಿಯಲ್ಲಿ ಮಹಿಳಾ ಕೃಷಿಕರ ಪಾತ್ರ ಬಲಪಡಿಸಲು ಜಾಗತಿಕ ಸಮ್ಮೇಳನ GCWAS-2026 ಆರಂಭವಾಗಿದೆ. ನೀತಿ,…

11 hours ago

ಗೇರುಹಣ್ಣಿನ ಮೌಲ್ಯವರ್ಧನೆಗೆ ಕೈಗಾರಿಕಾ ಸಂಪರ್ಕ ಸಭೆ : ವ್ಯಾಪಾರೀಕರಣಕ್ಕೆ ಹೊಸ ವೇದಿಕೆ

ದೇಶದಲ್ಲಿ ಉತ್ಪಾದನೆಯಾಗುವ ಗೇರುಹಣ್ಣಿನ ಕೇವಲ 1% ಮಾತ್ರ ಮೌಲ್ಯವರ್ಧನೆಗೆ ಬಳಸಲಾಗುತ್ತಿರುವ ಹಿನ್ನೆಲೆ ಪುತ್ತೂರಿನಲ್ಲಿ…

21 hours ago

ದಕ್ಷಿಣ ಕನ್ನಡದಲ್ಲಿ ಹೆಚ್ಚುತ್ತಿರುವ ಕಡಲ್ಕೊರೆತ ಗಂಭೀರತೆ : ಲೋಕಸಭೆಯಲ್ಲಿ ಧ್ವನಿಯೆತ್ತಿದ ಸಂಸದ

ದಕ್ಷಿಣ ಕನ್ನಡದಲ್ಲಿ ಶೇ.48ಕ್ಕೂ ಹೆಚ್ಚು ಕರಾವಳಿ ಕಡಲ್ಕೊರೆತಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಸಂಸದ ಲೋಕಸಭೆಯಲ್ಲಿ…

21 hours ago

ಭಾರತೀಯ ಕೊಕ್ಕೋಗೆ ಜಾಗತಿಕ ಮಟ್ಟದ ಮಾನ್ಯತೆ | ಈಗ ಮೌಲ್ಯವರ್ಧನೆಯೇ ರೈತರಿಗೆ ಹೊಸ ದಾರಿ

ಅಡಿಕೆ ತೋಟಗಳಲ್ಲಿ ಉಪಬೆಳೆಯಾಗಿ ಬೆಳೆಯುತ್ತಿರುವ ಕೊಕ್ಕೋಗೆ ಬೆಲೆ ಕುಸಿತ ದೊಡ್ಡ ಸವಾಲಾಗಿದೆ. ಮೌಲ್ಯವರ್ಧನೆ…

21 hours ago