ಮಹಾಮಳೆಗೊಂದು ಪ್ರಾರ್ಥನೆ : ದೇವರೇ ಮಳೆ ದೂರ ಮಾಡು….ಅನಾಹುತ ತಪ್ಪಿಸಲು ತಲಕಾವೇರಿಯಲ್ಲಿ ವಿಶೇಷ ಪೂಜೆ

September 13, 2019
8:00 AM

ಮಹಾಮಳೆ  ಎಲ್ಲೆಡೆ ಆತಂಕ ಸೃಷ್ಟಿಸಿದೆ. ಇದೀಗ ಜನರೆಲ್ಲಾ ದೇವರ ಮೊರೆ ಹೋಗುವಂತೆ ಮಾಡಿದೆ. ತಲಕಾವೇರಿಯಲ್ಲಿ  ವಿಶೇಷ ಪ್ರಾರ್ಥನೆ ನಡೆದಿದೆ..

Advertisement

ಕಳೆದ ಎರಡು ವರ್ಷಗಳ ಮಹಾಮಳೆಯಿಂದ ಕಂಗೆಟ್ಟಿರುವ ಕೊಡಗನ್ನು ಪ್ರಾಕೃತಿಕ ವಿಕೋಪದಿಂದ ರಕ್ಷಿಸುವಂತೆ ಪ್ರಾರ್ಥಿಸಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.

ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ ಹಾಗೂ ಪ್ರವಾಹದಿಂದ ಮಾನವ, ಜಾನುವಾರು ಜೀವಹಾನಿಯಾಗಿದ್ದು, ಕೃಷಿ ಕ್ಷೇತ್ರ ಹಾಗೂ ತೋಟಗಳು ಕೊಚ್ಚಿ ಹೋಗಿವೆ. ಭವಿಷ್ಯದ ದಿನಗಳಲ್ಲಿ ಜೀವನ ನಡೆಸುವುದು ಹೇಗೆ ಎಂದು ಜಿಲ್ಲೆಯ ಜನ ಚಿಂತಾಕ್ರಾಂತರಾಗಿದ್ದಾರೆ. ಈ ರೀತಿಯ ಪರಿಸ್ಥಿತಿ ಮುಂದೆ ಬಾರದಿರಲಿ ಮತ್ತು ಜಿಲ್ಲೆಯ ಜನ ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಭಕ್ತಸಮೂಹ ಬೇಡಿಕೊಂಡಿತು.

ಕುಲದೇವಿ ಎನಿಸಿರುವ ಕಾವೇರಿ, ಮಹಾಗಣಪತಿ ಮತ್ತು ಅಗಸ್ತ್ಯೇಶ್ವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಪ್ರಶಾಂತಾಚಾರ್ ಹಾಗೂ ಟಿ.ಎಸ್.ನಾರಾಯಣಾಚಾರ್ ವಿಶೇಷ ಪೂಜೆ ಸಲ್ಲಿಸಿದರು. ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ ಅವರು ಪ್ರಾರ್ಥಿಸಿದರು.

ಗ್ರಾಮದ ಪ್ರಮುಖರಾದ ಕುದುಕುಳಿ ಭರತ್ ಸೇರಿದಂತೆ ಹಿರಿಯರಾದ ಜಿ.ರಾಜೇಂದ್ರ, ಎಂ.ಬಿ.ದೇವಯ್ಯ ದೇವಿಪೂಣಚ್ಚ, ಕಾಳನರವಿ, ಉಮಾಪ್ರಭು, ಕುದುಪಜೆ ಪಳಂಗಪ್ಪ, ದಾಸಪ್ಪ, ಕುಡಿಯರ ಮುತ್ತಪ್ಪ, ದೇವಂಗೋಡಿ ಹರೀಶ್, ಹೊಸಗದ್ದೆ ಭಾಸ್ಕರ್ ಹಾಗೂ ಭಕ್ತರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸಾವಯವ ತಾಲೂಕು-ಗೆಡ್ಡೆಗೆಣಸುಗಳ ಊರು ಜೋಯಿಡಾದಲ್ಲಿ ಬೆಳೆಗಳಿಗೆ ಹಂದಿ ಕಾಟ | ಕೃಷಿಗೆ ಅಪಾರ ಹಾನಿ
July 14, 2025
7:00 AM
by: ದ ರೂರಲ್ ಮಿರರ್.ಕಾಂ
ಹಲಸಿನ ಬೀಜದ ಖಾರಾ ಸೇವ್‌ – ನೀವೂ ಮಾಡಿನೋಡಿ
July 13, 2025
10:15 PM
by: The Rural Mirror ಸುದ್ದಿಜಾಲ
ರಾಜ್ಯಾದ್ಯಂತ ಲಕ್ಷ ವೃಕ್ಷ ಗಿಡಗಳ ನಾಟಿ ಕಾರ್ಯಕ್ರಮ | ಹೆಬ್ರಿಯ ಉದ್ಯಾನವನದಲ್ಲಿ ಗಿಡ ನೆಡುವ ಮೂಲಕ ಚಾಲನೆ
July 13, 2025
7:50 AM
by: The Rural Mirror ಸುದ್ದಿಜಾಲ
ಮಾರುಕಟ್ಟೆ ಶುಲ್ಕ ಬದಲಾವಣೆ ಮಾಡಬಾರದೆಂಬ ಕ್ಯಾಂಪ್ಕೋ ಬೇಡಿಕೆ ಪರಿಗಣನೆ
July 12, 2025
7:32 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group