Advertisement
ಅನುಕ್ರಮ

ಮಿಣಿ ಮಿಣಿ ಮಿನುಗುವ ಮಿಂಚುಹುಳ

Share

ಮಳೆಗಾಲದಲ್ಲಿ ಆಗಸದಲ್ಲಿ ಮಿನುಗುವ ಬೆಳ್ಳಿ ಚುಕ್ಕಿಗಳಿಗೆ ಕಾರ್ಮೋಡದ ಪರದೆ.ಇದೇ ಸಮಯದಲ್ಲಿಗದ್ದೆ, ತೋಟ, ಕಾಡುಒಟ್ಟಾರೆ ಹೇಳುವುದರಾದರೆ ಪ್ರಕೃತಿಯ ಮಡಿಲಿನ ಕಡೆಗೆ ಹೋದರೆ ಕಾರ್ಮೋಡವನ್ನು ಸೀಳಿ ಧರೆಯತ್ತ ನಕ್ಷತ್ರಗಳು ಧಾವಿಸಿ ಬಂದಿವೆಯೋ ಏನೋ ಎಂದು ಭಾಸವಾಗುವುದು ನಿಜ. ಇದಕ್ಕೆಕಾರಣ ಹೊಳೆಯುವ ಬೆಳಕನ್ನು ಚೆಲ್ಲುತ್ತಾ ಹಾರುವ ಬೀಟಲ್‍ಜಾತಿಗೆ ಸೇರಿದ ಮಿಂಚುಹುಳಗಳು.

ಪ್ರಕೃತಿಯ ಚಮತ್ಕಾರಗಳಲ್ಲೊಂದಾದ ಈ ಕೀಟದ ಸುಂದರತೆಯನ್ನುಆಹ್ಲಾದಿಸುವ ಮನಸ್ಸಿದ್ದರೆ ಕತ್ತಲಲ್ಲಿ ಕಾಣುವ ಮಿಂಚುಹುಳದ ಈ ಬೆಳಕಿನಾಟ ಮನಕ್ಕೆ ತಂಪೆರೆಯವುದಂತು ನಿಜ. ಮಾನವಜಗತ್ತು ಎಷ್ಟೇ ವಿನೂತನ ಆವಿಷ್ಕಾರ ಮಾಡಿದರೂ ಪ್ರಕೃತಿಯ ಮಡಿಲಿನಲ್ಲಿರುವಇಂತಹಜೀವ ಸಂಕುಲಗಳಿಂದಾಗಿ ದೇವರ ಸೃಷ್ಟಿಗೆತಲೆಬಾಗಲೇ ಬೇಕು.

ಮಿಂಚುಹುಳಗಳ ದೇಹದ ಹಿಂಭಾಗದಲ್ಲಿರುವ ವಿಶಿಷ್ಟ ಕೋಶಗಳಲ್ಲಿರುವ ಪ್ರೋಟೀನ್ ಹಾಗು ಅಣುಗಳಿಂದಾಗಿ ಅಪರೂಪದ ಬೆಳಕು ಉತ್ಪತ್ತಿಯಾಗುತ್ತವೆ. ತಮ್ಮ ಶರೀರದಲ್ಲಿ ಬಿಡುಗಡೆಯಾಗುವ ಈ ಬೆಳಕಿನ ಮೂಲಕವೇ ತಮ್ಮ ಸಂಗಾತಿಯನ್ನು ಸೆಳೆಯುತ್ತವೆ. ತನ್ನ ವಾಸಸ್ಥಳಗಳನ್ನು ಗುರುತಿಸಲು ಹಾಗು ಬೇಟೆಯನ್ನು ಹಿಡಿಯಲು ಮಿಂಚುಹುಳಗಳು ತಮ್ಮಿಂದ ಹೊರಸೂಸುವ ಈ ಬೆಳಕನ್ನು ಬಳಸುತ್ತವೆ.
ಸೂರ್ಯಕಿರಣದ ಬೆಳಕು, ಉರಿಯುವ ಕಟ್ಟಿಗೆ ಅಥವಾ ಮಾನವಜಗತ್ತು ಆವಿಷ್ಕರಿಸಿದ ವಿಧ್ಯುತ್‍ಆಧಾರಿತ ಬೆಳಕು ಎಂದರೆ ನಮ್ಮ ಮನಸ್ಸಿಗೆ ಮೊದಲು ನೆನಪಾಗುವುದು ಶಾಖ.ಆದರೆ ವಿಚಿತ್ರಎಂದರೆ ಮಿಂಚು ಹುಳಗಳು ಮಾತ್ರತಮ್ಮ ಈ ಬೆಳಕಲ್ಲಿ ಶೂನ್ಯ ಶಾಖವನ್ನುಅಂದರೆ ಬಿಸಿಯಿಲ್ಲದ ಬೆಳಕನ್ನು ಹೊರಸೂಸುತ್ತವೆ. ಇದಕ್ಕೆತಣ್ಣನೆಯ ಬೆಳಕು ಎಂದುಕರೆಯುತ್ತಾರೆ.ಅಂದ ಹಾಗೆ ಮಿಂಚು ಹುಳಗಳು ತಮಗೆಅತೀ ಹೆಚ್ಚು ಆಹಾರ ಸಿಗುವಂತಹ ಗಿಡಮರಗಳಿಂದ ಕೂಡಿದತಂಪಾದ ವಾತಾವರಣದಲ್ಲಿಕಂಡುಬರುತ್ತವೆ.

ಜಗತ್ತಿನ ಯಾವುದೇ ಜೀವಿಯ ಜೀವನಕ್ರಮವನ್ನುಆಸಕ್ತಿಯಿಂದ ಗಮನಿಸಿದರೆ ಹಲವಾರು ಅಚ್ಚರಿಗಳು ಅದರಲ್ಲಿಅಡಗಿರುತ್ತವೆ. ಸಂಶೋಧಿಸಿದಷ್ಟೂ ಹೊಸ ವಿಷಯಗಳು ತೆರೆದುಕೊಳ್ಳುತ್ತವೆ. ಮಾನವನೇ ಬುದ್ದಿವಂತಜೀವಿ ಎಂದು ಅಹಂನಿಂದ ಬದುಕದೇ ಮನಸ್ಸಿಗೆ ಮುದ ನೀಡುವ ಇಂತಹಜೀವ ಸಂಕುಲಗಳನ್ನೂ ಸ್ವಚ್ಛಂದವಾಗಿದೇವರ ಸೃಷ್ಟಿಯ ಈ ವಿಶ್ವದಲ್ಲಿ ಅವುಗಳಿಷ್ಟದಂತೆ ಬದುಕಲು ಅವಕಾಶ ಕೊಡುವುದುಎಲ್ಲಾಧೃಷ್ಟಿಕೋನದಿಂದಲೂ ಒಳ್ಳೆಯದು. ಏನಂತೀರಿ..?

# ವಂದನಾರವಿ ಕೆ.ವೈ. ವೇಣೂರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಹವಾಮಾನ ವರದಿ | 28-07-2026 | ಮುಂದಿನ 10 ದಿನ ಸಾಮಾನ್ಯ ಮಳೆ – ಆಗಸ್ಟ್ ಆರಂಭದಲ್ಲಿ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು ಸಾಧ್ಯತೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಸಾಮಾನ್ಯ ಮಳೆ ಮುಂದುವರಿಯುವ ನಿರೀಕ್ಷೆಯಿದ್ದು,…

17 hours ago

200 ಹಸುಗಳಿಂದ ₹2 ಕೋಟಿ ವಾರ್ಷಿಕ ಆದಾಯ…! ಗಮನ ಸೆಳೆದ ಉತ್ತರ ಪ್ರದೇಶದ ಮಾದರಿ

ಉತ್ತರ ಪ್ರದೇಶದಲ್ಲಿ 200 ಹಸುಗಳನ್ನು ಆಧರಿಸಿದ ಸಮಗ್ರ ಗೋ ಆರ್ಥಿಕತೆ ಮಾದರಿಯಲ್ಲಿ ಗೋಮಯದಿಂದ…

18 hours ago

ರಬ್ಬರ್ ತೋಟ ಹಸಿರಾಗಿರಬಹುದು… ಆದರೆ ಕಾಡಿಗೆ ಪರ್ಯಾಯವಲ್ಲ…! ಮಲೇಷ್ಯಾ ಅಧ್ಯಯನ ವರದಿ

ರಬ್ಬರ್ ತೋಟಗಳು ಹಸಿರಾಗಿದ್ದರೂ ಅವು ನೈಸರ್ಗಿಕ ಮಳೆಕಾಡಿನ ಜೀವವೈವಿಧ್ಯವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು…

22 hours ago

ಅಡುಗೆ ಎಣ್ಣೆ ಆಮದು 7% ಏರಿಕೆ – ಭಾರತ ಇನ್ನೂ ಆಮದು ಅವಲಂಬಿತ

ಭಾರತದ ಅಡುಗೆ ಎಣ್ಣೆ ಆಮದು ಎಂಟು ತಿಂಗಳಲ್ಲಿ ಶೇ.7ರಷ್ಟು ಏರಿಕೆಯಾಗಿದೆ. ಜೂನ್‌ನಲ್ಲಿ ಆಮದು…

22 hours ago

ಕೇರಳದಲ್ಲಿ ಪ್ರತಿವರ್ಷ ₹1,200 ಕೋಟಿ ಮೌಲ್ಯದ ಹಲಸು ವ್ಯರ್ಥ..! ಮೌಲ್ಯವರ್ಧನೆಗೆ ಸರ್ಕಾರ ಮುಂದಾಗಲಿ ಎಂಬ ಒತ್ತಾಯ

ಕೇರಳದಲ್ಲಿ ಉತ್ಪಾದನೆಯಾಗುವ ಬಹುತೇಕ ಹಲಸು ಬಳಕೆಯಾಗದೆ ವ್ಯರ್ಥವಾಗುತ್ತಿದ್ದು, ವರ್ಷಕ್ಕೆ ಸುಮಾರು ₹1,200 ಕೋಟಿ…

23 hours ago

ಅವೈಜ್ಞಾನಿಕ ಮಳೆ ವರದಿ ಶೈಕ್ಷಣಿಕ ವಲಯಕ್ಕೆ ತೊಂದರೆ – ಹವಾಮಾನ ಮುನ್ಸೂಚನೆ ಕುರಿತು ಎಸ್.ಎಲ್. ಭೋಜೆಗೌಡ ಕಳವಳ

ಅವೈಜ್ಞಾನಿಕ ಮಳೆ ಮುನ್ಸೂಚನೆಗಳ ಆಧಾರದ ಮೇಲೆ ಪದೇ ಪದೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವುದು…

2 days ago