Advertisement
ಕೃಷಿ

ಮುಂಗಾರಿನ ಸಿಂಚನಕ್ಕೆ “ಥಂಡರ್ ಲಿಲ್ಲಿ”

Share
ಪೆರ್ನಾಜೆ : ಮುಂಗಾರಿನ ಅಭಿಷೇಕಕ್ಕೆ ಮೆದುವಾಯಿತು ನೆಲವು ಧಗೆಯಾರಿದ ಹೃದಯದಲ್ಲಿ ಪುಟಿದೆದ್ದಿತು ಚೆಲುವು ಎಂದು ಕವಿಪುಂಗವರು ಹಾಡಿದ್ದೇನೊ ನಿಜ .
ಮೊದಲ ಮಳೆಯ ಹೂವಿದು ರಕ್ತ ಕೆಂಪು ಬಣ್ಣದ ಈ ಹೂವು ಬಲಿತಂತೆ ಗುಲಾಬಿ ಬಣ್ಣಕ್ಕೆ ತಿರುಗಿ ಅನಂತರ ಹಸಿರು ಬಣ್ಣಕ್ಕೆ ತಿರುಗುವ ಪ್ರಕ್ರಿಯೆ ನೋಡಲು ಆಹ್ಲಾದಕರ ಕೊನೆಗೆ ಅದರ ದಂಟಿನಂತೆಯೇ ಹೂಗಳು ಉದುರಿ ಹಸಿರಾಗಿ ಅದರಲ್ಲಿ ಹಳದಿ ಬಣ್ಣದ ಹಣ್ಣುಗಳಾಗುತ್ತವೆ.  ನೆಲದಡಿಯಲ್ಲಿ ಗೌಪ್ಯವಾಗಿ ಹುದುಗಿದ್ದ ಮಳೆ ಬಂದೊಡನೆ ಹೊರಬಂದು ನಗುವ ಈ ಹೂವಿನ ಸಸ್ಯಶಾಸ್ತ್ರ ಹೆಸರು ಹೆಕ್ಮಂಥಸ್ ಕೊಕ್ಸೀನಿಯಸ್  ಇದು ದಕ್ಷಿಣ ಆಫ್ರಿಕಾದಿಂದ ಬಂದ ಹೂವು.
ಈ ಅಪರೂಪದ ಹೂವಿಗೆ ಬ್ಲಡ್ ಲಿಲ್ಲಿ, ಗರುಡ ಲಿಲ್ಲಿ, ವಾಟರ್ ಲಿಲ್ಲಿ, ಸಿಡಿಲಮರಿ, ಥಂಡರ್ ಲಿಲ್ಲಿ, ತಿಂಗಳ ರಾಣಿ, ಮ್ಯಾಗ್ಮಿಲಿಯಾ, ಗದಾಪುಷ್ಪ ಎಂದು ಇದಕ್ಕೆ ಹಲವಾರು ನಾಮದೇಯಗಳು ಹೂಗಳಿಂದ ತುಂಬಿದ ಗೋಲಾಕಾರದ ಬೆಡಗಿ ಲಾವಣ್ಯವತಿಯಾಗಿ ರಸಿಕರ ಕಣ್ಮನಗಳಿಗೆ ಹರ್ಷೋಲ್ಲಾಸ ತುಂಬುತ್ತದೆ.
ವರ್ಷದಲ್ಲಿ ಒಮ್ಮೆ ಮಾತ್ರ ಅರಳುವ ಅಪರೂಪದ ಅತಿಥಿ ಸೌಂದರ್ಯ ಕಂಡರೆ ಅಸ್ತಿತ್ವ ಸಾರ್ಥಕವೆನಿಸುತ್ತದೆ ಇದು ಒಂದು ಸಂಯುಕ್ತ ಹೂವು ಪ್ರತಿ ಹೂವಿನಲ್ಲಿ ಸೂಜಿಯಾಕಾರದ ಏಳು ದಳಗಳಿರುತ್ತವೆ ಅದರ ತಳಭಾಗದಲ್ಲಿ ಆರು ತೆಳ್ಳಗಿನ ದಳಗಳಂತೆ ಇರುವ ಪುಷ್ಪಪಾತ್ರೆ ಇರುತ್ತದೆ ಈ ರೀತಿಯ ಹೂವುಗಳು ಒಂದೇ ಮುಷ್ಟಿಯಲ್ಲಿ ಅದುಮಿ ಹಿಡಿದಂತೆ ಗೋಲಾಕಾರವಾಗಿ ಇರುತ್ತವೆ ಮೊದಲ ಮಳೆಗೆ ಬಟ್ಟಬಯಲಲ್ಲಿ  ಭೂಮಿಯನ್ನು ಸೀಳಿ ಬಂದಂತೆ ಬಾಣದಂತಿರುವ ಮೊಗ್ಗು ಹೊರಚಿಮ್ಮಿ  ನಿಧಾನವಾಗಿ ಹೂವು ಅರಳುತ್ತದೆ ತದನಂತರ ಹೂವು ಬಾಡಿ ದಪ್ಪ ಎಲೆಯ ಹಸಿರು ಬಣ್ಣದಾಗಿದ್ದು ಬೇಸಿಗೆ ಕಾಲದಲ್ಲಿ ಹಳದಿ ಬಣ್ಣಕ್ಕೆ ತಿರುಗಿ ಗಿಡ ನಶಿಸುತ್ತದೆ (ಸಾಯುತ್ತದೆ) ನೆಲದಾಳದಲ್ಲಿ ಗಡ್ಡೆ ಇದ್ದು ಬಿಳಿ ಈರುಳ್ಳಿಯಂತೆ ಅಡಗಿರುತ್ತದೆ ವರ್ಷಗಳು ಕಳೆದಂತೆ ಗಡ್ಡೆಗಳ ಗಾತ್ರ ದೊಡ್ಡದಾಗುತ್ತದೆ. ಅಂತಹ ಗಿಡದ ಹೂವು ದೊಡ್ಡದಾಗಿರುತ್ತವೆ ಗಡ್ಡೆಯ ಸುತ್ತಲೂ ಮರಿ ಗಡ್ಡೆಗಳು ಗಡ್ಡೆಗಳಾಗುತ್ತದೆ.
ಗೊಂಚಲು ಗೊಂಚಲು ಹೂವುಗಳು ಅರಳಿ ನಿಂತಾಗ ಗಂಧರ್ವಲೋಕದ ಅಪ್ಸರೆಯನ್ನು ಕಂಡಂತಾಗುತ್ತದೆ ಇಂತಹ ಹೂವಿನ ಗಡ್ಡೆಗಳಿಗೆ ಬೇಸಿಗೆಯಲ್ಲಿ ನೀರಿನ ಅಗತ್ಯವೇ ಇರುವುದಿಲ್ಲ ದೇವರ ಆರಾಧನೆಗೂ ಬಳಸುವ ಹೆಣ್ಣಿನ ಮುಡಿಯನ್ನು ಅಲಂಕರಿಸುವ ಈ ಹೂವುಗಳಿಗೆ ಬೇಡಿಕೆ ಇಲ್ಲದ ದಿನವಿಲ್ಲ ಅಲಂಕಾರಿಕವಾಗಿಯೂ ಈ ಹೂಗಳನ್ನು ಬಳಸುತ್ತಾರೆ ಅನೇಕ ದಿನಗಳವರೆಗೆ ಬಾಡದಂತೆ ಆಗತಾನೆ ಗಿಡದಿಂದ ಕಿತ್ತಂತೆ ಕೆಲದಿನಗಳ ಕಾಲ ಇದನ್ನು ಕಾಯ್ದಿಡಲು ಸಾಧ್ಯ ಈಗೀಗ ಈ ಹೂವಿನ ಗಿಡಗಳು ಕಣ್ಮರೆಯಾಗುತ್ತಿವೆ ಬರಹಗಾರ ಕುಮಾರ್ ಪೆರ್ನಾಜೆ ಅವರ ಮನೆಯ ಸುತ್ತಲೂ ಅರಳಿ ನಗುವ ವಿಶಿಷ್ಟ ಹೂವನ್ನು ಹೆಚ್ಚಾಗಿ ಬೆಳೆಸಿ ರಕ್ಷಿಸುವತ್ತ ಗಮನ ಕೊಡಬೇಕಾಗಿದೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆಯಷ್ಟೇ ಅಲ್ಲ ಅದೇ ಮರಕ್ಕೆ ವೆನಿಲ್ಲಾ ಬಳ್ಳಿ | ಅಸ್ಸಾಂನಲ್ಲಿ ಅಡಿಕೆಯ ಜೊತೆಗೆ ಇನ್ನೊಂದು ಬೆಳೆ..

ಅಸ್ಸಾಂನ ಗುಹಾಟಿ ಸಮೀಪದ 10 ಅರಣ್ಯ ಅಂಚಿನ ಗ್ರಾಮಗಳಲ್ಲಿ ಅಡಿಕೆ, ತೆಂಗು ಮತ್ತು…

3 hours ago

ದೇಶಾದ್ಯಂತ ಮುಂಗಾರು ಬಿತ್ತನೆ 1,086 ಲಕ್ಷ ಹೆಕ್ಟೇರ್ ದಾಟಿದೆ – ಕರ್ನಾಟಕದಲ್ಲಿ ಭತ್ತ, ದ್ವಿದಳ ಧಾನ್ಯ ಕೃಷಿ ಕುಸಿತ

ದೇಶದ ಪ್ರಸಕ್ತ ಮುಂಗಾರು ಬೆಳೆಗಳ ಬಿತ್ತನೆ ಪ್ರದೇಶ 1,086 ಲಕ್ಷ ಹೆಕ್ಟೇರ್ ದಾಟಿದ್ದರೂ…

4 hours ago

ಜಾನುವಾರುಗಳ ಮೇವಿನ ಕೊರತೆಗೆ ಅಜೋಲಾ ಪರಿಹಾರ – ರಾಜ್ಯದಲ್ಲಿ 12 ಸಾವಿರ ಘಟಕಗಳ ಸ್ಥಾಪನೆಗೆ ಚಾಲನೆ

ರಾಜ್ಯದಲ್ಲಿ ಜಾನುವಾರುಗಳಿಗೆ ಪೌಷ್ಟಿಕ ಪೂರಕ ಮೇವು ಒದಗಿಸಲು ₹3.78 ಕೋಟಿ ವೆಚ್ಚದಲ್ಲಿ 12…

4 hours ago

ಹವಾಮಾನ ವರದಿ | 08-09-2026 | ಕರಾವಳಿಯಲ್ಲಿ ಮೋಡ ಹೆಚ್ಚಳ – ಸೆ.12ರ ಬಳಿಕ ಬಂಗಾಳಕೊಲ್ಲಿ ಬದಲಾವಣೆ?

ಕರಾವಳಿಯಲ್ಲಿ ಮೋಡದ ವಾತಾವರಣ ಹೆಚ್ಚಾಗಿದ್ದು, ಮಧ್ಯಾಹ್ನದ ನಂತರ ತೀರ ಮತ್ತು ಘಟ್ಟದ ಕೆಳಭಾಗಗಳಲ್ಲಿ…

11 hours ago

‘ಅರ್ಧ ಎಕರೆ ಸಾಕು… ಹಳ್ಳಿಯಲ್ಲೇ ಜೀವನ ಮಾಡಬಹುದು’ ಈ ಮಾತಿನ ಹಿಂದೆ ಇರುವ ದೊಡ್ಡ ಪ್ರಶ್ನೆ ಏನು..?

“ಅರ್ಧ ಎಕರೆ ಇದ್ದರೂ ಕುಟುಂಬ ಜೀವನ ಮಾಡಬಹುದು” ಎನ್ನುವ ರೈತನ ಮಾತು, ಭೂಮಿ…

16 hours ago

ಭಾರತದ ಆಹಾರ ನಾಳೆ ಬೆಳೆಯೋರು ಯಾರು? ರೈತರ ವಯಸ್ಸು ಹೆಚ್ಚುತ್ತಿದೆ, ಯುವಕರು ಕೃಷಿಯಿಂದ ದೂರವಾಗುತ್ತಿದ್ದಾರೆ..!

ಭಾರತ ಯುವ ದೇಶವಾಗಿದ್ದರೂ ಕೃಷಿಕರ ಸರಾಸರಿ ವಯಸ್ಸು 50–55 ವರ್ಷವಾಗಿದ್ದು, ಗ್ರಾಮೀಣ ಯುವಕರಲ್ಲಿ…

1 day ago