Exclusive - Mirror Hunt

ಮೇಘ ಸ್ಫೋಟ…. ಏನಿದು ? : ಸುಬ್ರಹ್ಮಣ್ಯದಲ್ಲಿ ಮೇಘ ಸ್ಫೋಟವಾಯಿತೇ ?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಆಲಿಕಲ್ಲು ಮತ್ತು ಗುಡುಗು ಸಹಿತ ಅತ್ಯಂತ ಕಡಿಮೆ ಅವಧಿಯಲ್ಲಿ ಸುರಿಯುವ ತೀವ್ರ ಸ್ವರೂಪದ ಮಳೆಯನ್ನು “ಮೇಘಸ್ಫೋಟ” (Cloud Burst) ಅಂತ ಕರೆಯುತ್ತಾರೆ. ಇದರ ಆರ್ಭಟ ಕೆಲವೇ ನಿಮಿಷಗಳಾದರೂ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣ ವಾಗುತ್ತದೆ.

Advertisement
Advertisement

ಇದಕ್ಕೇನು ಕಾರಣ ?
ಆಕಾಶದಲ್ಲಿ ಹೆಚ್ಚಿನ ಮೋಡಗಳು ಸಂಕುಚಿತಗೊಳ್ಳುವುದರಿಂದ ಮೇಘ ಸ್ಫೋಟ ಸಂಭವಿಸುತ್ತದೆ. ಬಕೆಟ್ ನಿಂದ ರಭಸವಾಗಿ ನೀರನ್ನು ಸುರಿದಂತೆ ಮೇಘಸ್ಪೋಟದಿಂದ ಒಂದು ನಿರ್ದಿಷ್ಟ ಭೂಪ್ರದೇಶದಲ್ಲಿ ಅಧಿಕ ಮಳೆಯಾಗುತ್ತದೆ. ಕೆಲವು ಸಲ 15 ಕಿ.ಮೀ.ಎತ್ತರದಿಂದ ಮಳೆ ಸುರಿಯುತ್ತದೆ. ಅದರ ಪ್ರಮಾಣ ಗಂಟೆಗೆ 100 ಮಿ.ಮೀ.ಗೂ (3.94 ಇಂಚು) ಅಧಿಕ. ಮೇಘಸ್ಪೋಟದಿಂದ ಕೆಲವೇ ನಿಮಿಷಗಳಲ್ಲಿ 20 ಮಿ.ಮೀ.ಗೂ ಅಧಿಕ ಮಳೆ ಸುರಿಯುತ್ತದೆ. ಅವಧಿ ಕಡಿಮೆಯಾದರೂ ಹಾನಿ ಅಪಾರ.

 

ಎಲ್ಲೆಲ್ಲಿ… ಯಾವಾಗ ?1906 ಆಗಸ್ಟ್ 24 ರಂದು ಅಮೇರಿಕಾದ ವರ್ಜೀನಿಯಾದಲ್ಲಿ 40 ನಿಮಿಷಗಳ ಮೇಘಸ್ಫೋಟ ಸಂಭವಿಸಿತ್ತು. ಆ ಪರಿಣಾಮ 234.95 ಮಿ.ಮೀ.ಮಳೆ ದಾಖಲಾಗಿತ್ತು. ರುಮೇನಿಯಾ, ಜಮೈಕಾ, ಪನಾಮಾ, ಹಾಗೂ ನಮ್ಮ ದೇಶದಲ್ಲೂ ಮೇಘಸ್ಫೋಟಗಳ ಅಬ್ಬರ ಇದ್ದೇ ಇದೆ. ಹಿಮಾಚಲ ಪ್ರದೇಶದ ಬರೋತ್ ನಲ್ಲಿ 1970 ರ ನವಂಬರ್ 26 ರಂದು ಒಂದು ನಿಮಿಷದಲ್ಲಿ ಅವಧಿಯಲ್ಲಿ 38.10 ಮಿ.ಮೀ.ಮಳೆ ಸುರಿದಿತ್ತು.! ಉತ್ತರಾಂಚಲದಲ್ಲಿ 2002 ರಲ್ಲಿ ಮೇಘಸ್ಫೋಟ 28 ಮಂದಿಯನ್ನು ಬಲಿ ಪಡೆದಿತ್ತು.
ಮೇಘಸ್ಫೋಟದಿಂದಾಗಿಯೇ 2005 ರ ಜುಲೈ 26 ರಂದು ಮುಂಬಯಿ ಅಕ್ಷರಷಹ ದ್ವೀಪವಾಗಿ ಪರಿವರ್ತಿತವಾಗಿತ್ತು. ವಾಣಿಜ್ಯ ನಗರಿ ಯಲ್ಲಿ ಅಂದು 8 ರಿಂದ ಹತ್ತು ಗಂಟೆಗಳಲ್ಲಿ ಸುರಿದ ಮಳೆ 950 ಮಿ.ಮೀ.! 500 ಕ್ಕೂ ಅಧಿಕ ಮಂದಿ ಪ್ರವಾಹಕ್ಕೆ ಬಲಿಯಾಗಿದ್ದರು.

 

Advertisement

1910 ಜುಲೈ 12 ರಂದು ಚಿರಾಪುಂಜಿಯಲ್ಲಿ ಒಂದು ದಿನದ ಅವಧಿಯಲ್ಲಿ ದಾಖಲಾದ 83.82 ಮಿ.ಮೀ.ಮಳೆ ಆವರೆಗಿನ ದಾಖಲೆಯಾಗಿತ್ತು. ಮುಂಗಾರಿನ ಮಳೆಯ ಸಮಯದಲ್ಲಿ ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟಗಳು ಸಾಮಾನ್ಯ. ಪರ್ವತ ಪ್ರದೇಶಗಳಲ್ಲಿ ಮೇಘಸ್ಫೋಟದ ಪ್ರಮಾಣ ಹೆಚ್ಚು. ಬಹುಶಃ ಕಳೆದ ವರ್ಷದ ಕೊಡಗಿನ ಮಳೆ, ಈ ವರ್ಷ ಚಾರ್ಮಾಡಿ ಘಾಟ್ ಪ್ರದೇಶ, ನಿನ್ನೆ ಸುಬ್ರಹ್ಮಣ್ಯ ಪರಿಸರದಲ್ಲಿ ಸುರಿದ ಅಪಾರ ಪ್ರಮಾಣದ ಮಳೆ ಮೇಘಸ್ಪೋಟದ ಪರಿಣಾಮವೇ ಇರಬಹುದು. ದಟ್ಟ ಕಾನನದ ನಡುವೆ ಸುರಿಯುವ ಮಳೆ ನಮ್ಮ ಲೆಕ್ಕಕ್ಕೆ ಸಿಗದು

ಈ ಸಂದರ್ಭದಲ್ಲಿ ವರಕವಿ ದ.ರಾ.ಬೇಂದ್ರೆಯವರ ಕವನದ ಸಾಲುಗಳು ನೆನಪಿಗೆ ಬಂದವು…

ಗುಡ್ಡ ಗುಡ್ಡ ಸ್ಥಾವರ ಲಿಂಗ
ಅದಕಭ್ಯಂಗ ಎರಿತಾವನ್ನೋ ಹಂಗ
ಕೂಡ್ಯಾವ ಮೋಡ ಸುತ್ತಲೂ ನೋಡ ನೋಡ…

  – ಪಿ ಜಿ ಎಸ್ ಎನ್ ಪ್ರಸಾದ್ , ಬಾಳಿಲ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಬೆಳಗಾವಿಯಲ್ಲಿ ಧಾರಾಕಾರ ಮಳೆ | ವ್ಯಾಪಕವಾಗಿ ಕೃಷಿಗೆ ಹಾನಿ

ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಮಹಾರಾಷ್ಟ್ರದ…

6 hours ago

ಪುತ್ತೂರಿನಲ್ಲಿ ಜೂನ್ 30 ರಿಂದ ಜುಲೈ 6 ರ ತನಕ ಯಕ್ಷಗಾನ ತಾಳಮದ್ದಳೆ ಸಪ್ತಾಹ | ‘ಕುರಿಯ ಪ್ರಶಸ್ತಿ’ ಪ್ರದಾನ

ಪುತ್ತೂರಿನ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನ ಹಾಗೂ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ …

7 hours ago

ಅಡಿಕೆ ಮಾರಾಟದ ದಾರಿಗಳು ಯಾವುದೆಲ್ಲಾ…?

ಬೆಳೆಗಾರರು ಸಹಕಾರಿ ಸಂಸ್ಥೆಗಳು ಮತ್ತು ಬೆಳೆಗಾರದ್ದೇ ಆದ ಇತರ ಸಂಸ್ಥೆಗಳ ಮೂಲಕ ವ್ಯವಹಾರ…

7 hours ago

ಹವಾಮಾನ ಆಧರಿತ ಬೆಳೆ ವಿಮಾ ಯೋಜನೆ | ಕೃಷಿಕರಿಗೆ ಹೇಗೆ ಪ್ರಯೋಜನವಾಗುತ್ತಿದೆ…?

ಹವಾಮಾನ ಆಧರಿತ ಬೆಳೆ ವಿಮಾ ಯೋಜನೆ ಜಾರಿಯಾಗಿ ವರ್ಷಗಳು ಕೆಲವು ಉರುಳಿದವು. ಇಂದಿಗೂ…

7 hours ago

ಸಕಲ ಸಂಕಷ್ಟಗಳನ್ನು ಮಾಯ ಮಾಡ್ತಾಳೆ ಈ ಉಕ್ಕಡ ಮಾರಮ್ಮ | ಆಷಾಡ ಶುಕ್ರವಾರ ಈ ದೇವಿಯನ್ನು ಈ ರೀತಿ ಪೂಜಿಸಿ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

8 hours ago

ಬೆಳೆವಿಮೆ ಯೋಜನೆ | ರೈತರಿಗೆ ತೋಟಗಾರಿಕಾ ಇಲಾಖೆ ಸೂಚನೆ

ತೋಟಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ…

15 hours ago