Advertisement
The Rural Mirror ಫಾಲೋಅಪ್

ಮೊಣ್ಣಂಗೇರಿಯಲ್ಲಿ ಬಾಯ್ದೆರೆದು ನಿಂತಿದೆ ಬಂಡೆ ಕಲ್ಲುಗಳು…!

Share

ಸಂಪಾಜೆ : ಮೊಣ್ಣಂಗೇರಿ ಪ್ರದೇಶದಲ್ಲಿ ಬೃಹತ್ ಗಾತ್ರದ  ಬಂಡೆಕಲ್ಲುಗಳು ಬಾಯ್ದೆರೆದು ನಿಂತಿದೆ. ಒಂದೆರಡು ಮಳೆಗೆ ಕುಸಿಯುವ ಭೀತಿ ಇದೆ. ಆ ಪ್ರದೇಶದಲ್ಲಿ ಈಗ ನಡೆಯುವುದೇ ಭಯ…!.

ಕಳೆದ 3 ದಿನಗಳಲ್ಲಿ ಕಳೆದ ಬಾರಿ ಮೊಣ್ಣಂಗೇರಿ, ಜೋಡುಪಾಲದ  ಜಲಪ್ರಳಯದ ನೆನಪುಗಳು ಹಾಗೂ ಇಂದಿನವರೆಗಿನ ಸ್ಥಿತಿಯ ದರ್ಶನವಾಗಿದೆ. ಮನೆಗಳೇ ಇಲ್ಲ, ಕೃಷಿ ನಾಶ, ಮುಚ್ಚಿದ ಶಾಲೆ ಸೇರಿದಂತೆ ಅಲ್ಲಿನ ಜನರ ಇಂದಿನ ಬದುಕು ದರ್ಶನವಾಗಿದೆ. ಈಗ ಮುಂದಿನ ಸ್ಥಿತಿಯ ಬಗ್ಗೆ ಯೋಚಿಸಿದರೆ ಭಯವಾಗುತ್ತಿದೆ. ಆ ಜನರಿಗೆ ನಿತ್ಯವೂ ಭಯವಾದರೆ ಮೊಣ್ಣಂಗೇರಿಯ ಆ ರಸ್ತೆಯಲ್ಲಿ ಓಡಾಡಿದರೆ ಎದೆ ಢವ ಢವ ಎನ್ನುತ್ತದೆ. ಆ ಬಂಡೆಗಳು ಈಗ ಬೀಳುತ್ತೋ ಮತ್ತೆ ಬೀಳುತ್ತೋ ಎನ್ನುವ ಸ್ಥಿತಿ ಇದೆ. ಈ ನಡುವೆ ಸಾಕಷ್ಟು ನೀರು ಹರಿಯುತ್ತಿದೆ ಅಲ್ಲಿ, ಆದರೆ ಆ ನೀರು ಅಲ್ಲಿನ ಜನರಿಗೆ ಈಗ ಉಪಯೋಗಕ್ಕೆ ಬರುತ್ತಿಲ್ಲ. ತೋಟ, ಮನೆ ಎತ್ತರದಲ್ಲಾದರೆ , ನೀರು ಕೆಳಭಾಗದಲ್ಲಿ ಹರಿಯುತ್ತಿದೆ. ಅದರ ದೃಶ್ಯ ಹೀಗಿದೆ….

 

 

ಕಳೆದ ಬಾರಿಯ ಪ್ರಳಯದ ನಂತರ ರಸ್ತೆ ದುರಸ್ತಿಯಾಗಿದೆ. ಇದು ಇಲ್ಲಿನ ಜನರಿಗೆ ಪ್ರಯೋಜನವಾಗಿದೆ. ಆದರೆ ಅದಕ್ಕಿಂತಲೂ ಭಯಾನಕ ಸ್ಥಿತಿ , ಈ ವರ್ಷ ಹೇಗೆ ಎಂದು ? ಒಂದೆರಡು ಮಳೆ ಬಿದ್ದರೆ ಭಯ ಶುರುವಾಗುತ್ತದೆ.  ಗುಡ್ಡದ ಮಣ್ಣು ಕುಸಿಯುತ್ತದೆ, ಕಲ್ಲುಗಳು ಬೀಳುತ್ತದೆ. ಎರಡು ಕಲ್ಲುಗಳು ಉಜ್ಜಿಕೊಂಡು ಬೀಳುವ ವೇಳೆ ದೊಡ್ಡದಾದ ಸದ್ದು ಕೇಳುತ್ತದೆ. ಮಳೆ ಬಂದಾಗ ನೀರು ಹೆಚ್ಚಾಗಿ ಬಂದು  ಸಡಿಲವಾಗಿರುವ ಮಣ್ಣು ಕೊರೆದು ಹೋದಾಗ ಕಲ್ಲುಗಳೂ ಆಧಾರ ಕಳೆದುಕೊಂಡು ಬೀಳುತ್ತವೆ. ಹೀಗಾಗಿ ಭಯ ಎಂದು ಹೇಳುತ್ತಾರೆ ಮೊಣ್ಣಂಗೇರಿಯ ಸತೀಶ್ ನಾಯ್ಕ್.

 

ಈ ಬಾರಿಯ ಮಳೆಗಾಲದ ಮುನ್ನ ಸೂಕ್ತ ಮುಂಜಾಗ್ರತಾ ಕ್ರಮವಾಗಬೇಕು. ಈಗಿರುವ ಜನರಿಗೆ ಸೂಕ್ತ ರಕ್ಷಣೆ ಬೇಕು ಎನ್ನುವುದು ಅಲ್ಲಿಗೆ ಹೋದ ಯಾರು ಬೇಕಾದರೂ ಹೇಳಬಹುದು. ಇದನ್ನು ಅಧಿಕಾರಿಗಳು ಈಗಲೇ ಗಮನಿಸಬೇಕು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ

ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…

48 minutes ago

ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…

10 hours ago

ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು

ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…

14 hours ago

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…

1 day ago

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ

ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…

2 days ago

ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?

ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…

2 days ago