MIRROR FOCUS

ಮೊದಲು ಕಸ ಎಸೆಯುವ ಗಬ್ಬು ನಾರುವ ಸ್ಥಳ…….. ಇನ್ನು ಮುಂದೆ ನೆರಳಿನ ಜೊತೆ ಹಣ್ಣು ನೀಡುವ ತಾಣ…….

Share

 ಸಮಾಜಮುಖಿಯಾಗಿ ಯೋಚಿಸಿದರೆ, ಜನಪ್ರತಿನಿಧಿಗಳು ಸಹಕಾರ ನೀಡಿದರೆ  ಹೇಗೆ ಬದಲಾವಣೆ ಮಾಡಬಹುದು ಎಂಬುದಕ್ಕೆ ಇದೊಂದು ಉದಾಹರಣೆ.ಕುರಂಜಿಗುಡ್ಡೆಗೆ ಹೋಗುವ ರಸ್ತೆಯಲ್ಲಿ ಬಿಸಿಎಂ ಹಾಸ್ಟೆಲ್ ಮುಂದುಗಡೆಯಲ್ಲಿ ಕಸದ ರಾಶಿ. ಎಷ್ಟೇ ಪ್ರಯತ್ನ ಮಾಡಿದರೂ ಕಸ ಕಡಿಮೆಯಾಗಲಿಲ್ಲ. ಈ ಸಂದರ್ಭದಲ್ಲಿ ಯೋಚನೆ ಬಂದದ್ದು ಗಿಡ ನೆಡುವ ಐಡಿಯಾ. ಈ ಕುರಿತು ನಮ್ಮ ಬೆಳಕು..


 

ಒಂದು ತಿಂಗಳ ಹಿಂದೆ ಕೋರ್ಟ್ ಬದಿಯಿಂದ ಕುರಂಜಿಗುಡ್ಡೆಗೆ ಹೋಗುವ ರಸ್ತೆಯಲ್ಲಿ ಬಿಸಿಎಂ ಹಾಸ್ಟೆಲ್ ಮುಂದುಗಡೆಯಲ್ಲಿ ನಡೆಯುವುದೆಂದರೆ ಪಾದಚಾರಿಗಳಿಗೆ ಸಂಕಟ. ರಸ್ತೆಯ ಪಕ್ಕದಲ್ಲಿ ಕಸದ ರಾಶಿ. ಈ ಪರಿಸರದವರಲ್ಲದೆ ನಗರದ ಎಲ್ಲೆಡೆಯವರಿಗೆ, ಹೋಟೆಲ್ ನವರಿಗೆ ಇದು ಡಂಪಿಂಗ್ ಯಾರ್ಡ್. ಹಲವು ಸಮಯದಿಂದ ಈ ಸಮಸ್ಯೆ ಜೀವಂತವಾಗಿತ್ತು.
ನೂತನವಾಗಿ ಆಯ್ಕೆಯಾದ ಸ್ಥಳೀಯ ನಗರ ಪಂಚಾಯತ್ ಸದಸ್ಯ ವಿನಯ್ ಕುಮಾರ್ ಕಂದಡ್ಕ ಇದಕ್ಕೊಂದು ಪರಿಹಾರ ಕಾಣಬಯಸಿದರು. ಚರಂಡಿ ರಿಪೇರಿಯ ಗುತ್ತಿಗೆದಾರರಿಂದ ಎಲ್ಲ ಕಸವನ್ನು ತೆಗೆಸಿದರು. ಬೋರ್ಡ್ ಅಳವಡಿಸಿದರು. ಅಕ್ಕಪಕ್ಕದ ವ್ಯಾಪಾರಸ್ಥರಲ್ಲಿ ಕಸ ಹಾಕದಂತೆ ವಿನಂತಿಸಿದರು ಕಸ ಹಾಕುವುದು ಕಮ್ಮಿಯಾದರೂ ಸಂಪೂರ್ಣ ನಿಲ್ಲಲಿಲ್ಲ. ಸ್ವಚ್ಛ ಸುಳ್ಯ ತಂಡ ಮತ್ತು ನಗರ ಪಂಚಾಯತ್ ಸಹಕಾರದಿಂದ ಸಿಸಿ ಟಿವಿ ಅಳವಡಿಸಿದ್ದೂ ಆಯ್ತು. ಆದರೆ ಕೆಲವರಿಗೆ ಅರ್ಥವಾಗಲಿಲ್ಲ. ಮತ್ತೆ ಅಲ್ಲೇ ತ್ಯಾಜ್ಯ ಎಸೆದರು.

 

 

 

ಈ ಸಂದರ್ಭದಲ್ಲಿ ಯೋಚನೆ ಬಂದಿದ್ದು ಗಿಡ ನೆಡುವ ಕುರಿತು. ನಂತರ ಕೆಲಸ ಸುಲಭವಾಯಿತು. ಸ್ವಚ್ಛ ಸುಳ್ಯ ತಂಡದ ವಿನೋದ್ ಲಸ್ರಾದೊ, ಹಾಗೂ ವಿನಯ್ ಕುಮಾರ್ ಕಂದಡ್ಕ ಅವರ ಯೋಚನೆಗೆ ಸಾತ್ ನೀಡಿದ್ದು ಕೇರ್ಪಳದ ಪಯಸ್ವಿನಿ ಯುವಕ ಮಂಡಲ. ಹೀಗಾಗಿ ಪಯಸ್ವಿನಿ ಯುವಕ ಮಂಡಲದ ನೇತೃತ್ವದಲ್ಲಿ ಯುವಜನ ಸಂಯುಕ್ತ ಮಂಡಳಿ., ನಗರ ಪಂಚಾಯತ್, ತೇಜಸ್ವಿನಿ ಮಹಿಳಾ ಮಂಡಲ ಗಳ ಸಹಯೋಗದಲ್ಲಿ ಗಿಡ ನೆಡುವ ಹಾಗೂ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ತಹಶೀಲ್ದಾರ್ ಕುಂಣ್ಚ್ ಆಹಮದ್ ಬಂದು ಕಾರ್ಯಕ್ರಮ ಉದ್ಘಾಟಿಸಿ ಪ್ರೋತ್ಸಾಹಿಸಿದರು. ಯುವಕ ಮಂಡಲದ ಸದಸ್ಯರು, ಯುವಜನ ಸಂಯುಕ್ತ ಮಂಡಳಿ ಪದಾಧಿಕಾರಿಗಳು, ಸ್ವಚ್ಛ ಸುಳ್ಯ ತಂಡದ ಸದಸ್ಯರು ಉಪಸ್ಥಿತರಿದ್ದು ಗಿಡ ನೆಟ್ಟು ಬೇಲಿ ಹಾಕಿ ಪರಿಸರ ಸ್ವಚ್ಛಗೊಳಿಸಿದರು. ಸ್ಥಳೀಯ ಹಾಸ್ಟೆಲ್ ವಿದ್ಯಾರ್ಥಿನಿಯರೂ ಸ್ವಚ್ಛತೆಯಲ್ಲಿ ಕೈ ಜೋಡಿಸಿದರು.

ಕಸ್ತೂರಿ ರಬ್ಬರ್ ನರ್ಸರಿಯ ಮಧುಸೂದನ್ ಅವರು ಹಣ್ಣಿನ ಗಿಡಗಳನ್ನು ಉಚಿತವಾಗಿ ನೀಡಿ ಸಹಕರಿಸಿದರೆ ಕೆಲಸ ನೋಡಿದ ದಾನಿಗಳು ಬೇಲಿಗೆ ಬಲೆ ಅಳವಡಿಸಲು ದೇಣಿಗೆ ನೀಡಿದರು. ಇದೆ ಸಂದರ್ಭದಲ್ಲಿ ಕೋರ್ಟ್ ಆವರಣದಲ್ಲಿರುವ ಮತ್ತು ಮುಂಭಾಗದಲ್ಲಿರುವ ಶೌಚಾಲಯಗಳನ್ನು ಕೂಡ ಸ್ವಚ್ಛಗೊಳಿಸಲಾಯ್ತು. ಇನ್ನಾದರೂ ಪರಿಸರದ ಕಸದಿಂದ ಮುಕ್ತಿ ದೊರೆತು ಗಿಡದ ತಂಪು ನೆರಳಿನ ಜೊತೆ ಹಣ್ಣುಗಳನ್ನು ಸವಿಯುವ ಭಾಗ್ಯ ಲಭಿಸಲಿ ಎಂಬುವುದೇ ಎಲ್ಲರ ಭಾವವಾಗಿತ್ತು.

ಕಾರ್ಯಕ್ರಮ ದಲ್ಲಿ ನಗರ ಪಂಚಾಯತ್ ಸದಸ್ಯರಾದ ವಿನಯ್ ಕಂದಡ್ಕ, ಸುಧಾಕರ್ , ಪೂಜಿತಾ, ಮಾಜಿ ಸದಸ್ಯರಾದ ಗೋಪಾಲ್ ನಡುಬೈಲ್, ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ, ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ಶಂಕರ್ ಪೆರಾಜೆ, ನಿರ್ದೇಶಕರು, ಯುವಕ ಮಂಡಲ ಅಧ್ಯಕ್ಷ ಚಂದ್ರಶೇಖರ, ಕಾರ್ಯದರ್ಶಿ ವಿನ್ಯಾಸ ಕುರುಂಜಿ , ಸ್ವಚ್ಛ ಸುಳ್ಯ ತಂಡದ ವಿನೋದ್ ಲಸ್ರಾದೊ, ಸುಧಾಕರ್ ರೈ, ಜಯಂತ್ ಶೆಟ್ಟಿ, ಸ್ಥಳೀಯರಾದ ಗುರುಮೂರ್ತಿ, ಶೀನಪ್ಪ ಬಯಂಬು, ಚಂದ್ರಶೇಖರ್ (ಕೆವಿಜಿ ) ಮನೋಜ್ ಕೇರ್ಪಳ, ಶಿವರಾಮ್ ಕೇರ್ಪಳ, ಕಮಲಾಕ್ಷ., ಸುಧಾಕರ್ ಕೇರ್ಪಳ, ದಯಾನಂದ ಕುರುಂಜಿ, ಆರತಿ, ಯತೀಶ್ ಪೂಜಾರಿ, ಯತೀಶ್ ಕೇರ್ಪಳ, ನಾಗರಾಜ್, ಅಜಿತ್ ಕೇರ್ಪಳ, ಕುಮಾರ, ಮಂಜುನಾಥ್, ಅವಿನಾಶ್ ಕುರುಂಜಿ, ಅಜಿತ್ ಕುರುಂಜಿ, ರಘು, ಮೋಹನ್ ಕೇರ್ಪಳ, ಜನಾರ್ಧನ ಮತ್ತಿತರರು ಸಕ್ರಿಯವಾಗಿ ಭಾಗವಹಿಸಿದರು.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೇರಳದಲ್ಲಿ ಹೀಟ್‌ ವೇವ್‌ ಎಲರ್ಟ್‌ | 10 ಜಿಲ್ಲೆಗಳಿಗೆ ಎಲ್ಲೋ ಎಲರ್ಟ್‌ |

ಕೇರಳದಲ್ಲಿ ಇನ್ನೂ ಎರಡು ದಿನಗಳ ಕಾಲ ತಾಪಮಾನ ಏರಿಕೆಯ ಬಗ್ಗೆ ಹವಾಮಾನ ಇಲಾಖೆ…

5 hours ago

ಮೆಣಸಿನಕಾಯಿ ಬೆಲೆ ಕುಸಿತ | ಒಣ ಮೆಣಸಿನಕಾಯಿ ಖರೀದಿಸುವಂತೆ ಬಸವರಾಜ ಬೊಮ್ಮಾಯಿ ಪತ್ರ

ಕೇಂದ್ರ ಸರ್ಕಾರದ ಯೋಜನೆಯಡಿ ಕರ್ನಾಟಕದ ರೈತರೂ ಬೆಳೆದ ಮೆಣಸಿನಕಾಯಿಯನ್ನೂ ಖರೀದಿಸಬೇಕು ಎಂದು ಸಂಸದ…

6 hours ago

ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್‌ಗೆ ಒಂದು ಪೈಸೆ ಏರಿಕೆ ಮಾಡಲು ಸರ್ಕಾರ ಚಿಂತನೆ

ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್‌ಗೆ ಒಂದು ಪೈಸೆಯಷ್ಟು ಏರಿಕೆ ಮಾಡಲು ಚಿಂತನೆ…

6 hours ago

ಒಂದು ವರ್ಷದಲ್ಲಿ 10 ಲಕ್ಷ ಮನೆಗಳಿಗೆ ಸೌರ ಫಲಕ

ಮನೆ ಛಾವಣಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದಿಸಿ ಮನೆಗಳಿಗೆ…

22 hours ago

ನಂದಿನಿ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ

ನಂದಿನ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ ವ್ಯಕ್ತಪಡಿಸಿದೆ. …

22 hours ago

ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳು | ಒಂದು ವರ್ಷದಲ್ಲಿ 22 ಸಾವಿರ ಸೈಬರ್ ಪ್ರಕರಣ ದಾಖಲು |

ದಿನದಿಂದ ದಿನಕ್ಕೆ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ…

22 hours ago