ಸವಿರುಚಿ

ಮೋದಕ ಪ್ರಿಯನಿಗೆ .. .. ಸಿಹಿ ಸಿಹಿ..

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಮೋದಕ ಪ್ರಿಯ ಗಣೇಶನಿಗೆ ಸಿಹಿ ಎಂದರೆ ಅಚ್ಚುಮೆಚ್ಚು. ಈ ಸಂದರ್ಭ ಕೆಲವೊಂದು ಸಿಹಿಗಳ ಬಗ್ಗೆ ಇಲ್ಲಿದೆ ಮಾಹಿತಿ…

Advertisement

ಅಮೃತ ಫಲ:

ಬೇಕಾಗುವ ಸಾಮಾನು: 1 ಲೋಟ ತೆಂಗಿನ ಹಾಲು, 1 ಲೋಟ ಹಾಲು, 1 ಲೋಟ ಸಕ್ಕರೆ ಎಲಕ್ಕಿಪುಡಿ ಮತ್ತು ತುಪ್ಪ

ವಿಧಾನ : ತೆಂಗಿನ ಹಾಲು, ಸಕ್ಕರೆ, ಹಾಲು ಒಟ್ಟಿಗೆ ಬಾಣಲೆಯಲ್ಲಿ ಹಾಕಿ ಒಲೆಯ ಮೇಲಿಟ್ಟು ಕಲಕುತ್ತಿರಬೇಕು. ದಪ್ಪ ಆಗುತ್ತಾ ಬರುವಾಗ ತಳ ಬಿಡುತ್ತದೆ ಆಗ ಎಲಕ್ಕಿ ಪುಡಿ ಹಾಕಿ. ಆನಂತರ ತುಪ್ಪ ಸವರಿದ ತಟ್ಟೆಗೆ ಹಾಕಿ ಹರಡಿ. ತಣಿದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ.

Advertisement


—————————–

Advertisement

ಪದರು ಪೇಣಿ:
ಬೇಕಾಗುವ ಸಾಮಾನು: 2 ಲೋಟ ಮೈದಾ ಹಿಟ್ಟು, ಎರಡೂವರೆ ಲೋಟ ಸಕ್ಕರೆ, 1 ಲೋಟ ತುಪ್ಪ, ಕೇಸರಿ ಬಣ್ಣ ಚಿಟಿಕೆ.

ವಿಧಾನ : ಮೈದಾ ಹಿಟ್ಟನ್ನು ಒಂದು ಮುಷ್ಠಿ ತೆಗೆದಿಟ್ಟು, ಉಳಿದ ಹಿಟ್ಟಿಗೆ 2ಚ.ತುಪ್ಪ ಹಾಕಿ ಬೆರೆಸಿ ಆನಂತರ ನೀರು ಸೇರಿಸಿ ಪೂರಿ ಹಿಟ್ಟಿನ ಹಾಗೆ ನಾದಿ ಇಟ್ಟುಕೊಳ್ಳಿ. ತೆಳುವಾಗಿ ಚಪಾತಿಯಂತೆ ಲಟ್ಟಿಸಿಕೊಂಡು ಒಂದರ ಮೇಲೆ ಗಟ್ಟಿ ತುಪ್ಪ ಹಚ್ಚಿ ಅದರ ಮೇಲೆ ಮತ್ತೊಂದು ಲಟ್ಟಿಸಿದ ಚಪಾತಿ ಇಟ್ಟು ತುಪ್ಪ ಹಚ್ಚಿ ಹೀಗೆ 3 ಅಥವಾ 4 ಇಟ್ಟು ಚಾಪೆಯಂತೆ ಸುತ್ತಿ 1 ಇಂಚಿನಂತೆ ಕಟ್ ಮಾಡಿ. ನೇರವಾಗಿಟ್ಟು ಪುನಃ ಲಟ್ಟಿಸಿ ತುಪ್ಪದಲ್ಲಿ ಗರಿ ಗರಿಯಾಗಿ ಕರಿಯಬೇಕು. (ಸಕ್ಕರೆಯನ್ನು ಎಳೆ ಪಾಕ ಮಾಡಿಟ್ಟುಕೊಂಡು ಬಣ್ಣ ಹಾಕಿ ಇಡಿ.) ಸಕ್ಕರೆ ಪಾಕಕ್ಕೆ ಹಾಕಿ 5 ನಿಮಿಷದ ನಂತರ ತೆಗೆದಿಡಿ.

————————-

ಕರ್ಜಿಕಾಯಿ

Advertisement

ಬೇಕಾಗುವ ಸಾಮಾನು :ಅರ್ಧ ಕೆ.ಜಿ ಚಿರೋಟಿ ರವೆ, ಮೈದಾ ಕಾಲು ಕೆ.ಜಿ., ಕೊಬ್ಬರಿ 500 ಗ್ರಾಂ., ಸಕ್ಕರೆ 500 ಗ್ರಾಂ. ಕರಿಯಲು ಎಣ್ಣೆ ಅರ್ಧ ಕೆ.ಜಿ, ಎಲಕ್ಕಿ 5

ವಿಧಾನ : ಕೊಬ್ಬರಿಯನ್ನು ತುರಿದು ಅದನ್ನು ಪುಡಿ ಮಾಡಿಕೊಂಡು ಅದಕ್ಕೆ ಎಲಕ್ಕಿ ಪುಡಿ ಮತ್ತು ಸಕ್ಕರೆ ಪುಡಿ ಸೇರಿಸಿ ಬೆರೆಸಿ ಇಡಿ.
ಮೈದಾ ಮತ್ತು ರವೆಗೆ ಸ್ವಲ್ಪ ತುಪ್ಪ ಹಾಕಿ, ನೀರು ಸೇರಿಸಿ ಕಲಿಸಿದ ಹಿಟ್ಟನ್ನು ನಿಂಬೆಗಾತ್ರಕ್ಕೆ ಉಂಡೆ ಮಾಡಿ ಚಪಾತಿಯಂತೆ ಲಟ್ಟಿಸಿ ಅದರೊಳಗೆ ಕೊಬ್ಬರಿ ಮಿಶ್ರಣವನ್ನು ಇಟ್ಟು ಅಂಚನ್ನು ಮುಚ್ಚಿ ಕಾದ ಎಣ್ಣೆಯಲ್ಲಿ ಚಿನ್ನದ ಬಣ್ಣ ಬರುವಂತೆ ಕರಿಯಿರಿ.

 

ಬರಹ:

Advertisement
ಚಿತ್ರಾ ಮಟ್ಟಿ

ಚಿತ್ರಾ ಮಟ್ಟಿ
ಬಿಡಿಒ ಹಿಂಬದಿ ಸುಳ್ಯ
9448461676

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಆನೆ ದಾಳಿಗೆ ಮೂರು ವರ್ಷದಲ್ಲಿ 129 ರೈತರು ಬಲಿ | ವಿಧಾನಪರಿಷತ್‌ನಲ್ಲಿ ಮಾಹಿತಿ ನೀಡಿದ ಅರಣ್ಯ ಇಲಾಖೆ

ಕಳೆದ ಮೂರು ವರ್ಷಗಳಿಂದ ಕಾಡಾನೆ ದಾಳಿಗೆ ಒಟ್ಟು 129 ಮಂದಿ ರೈತರು ಬಲಿಯಾಗಿದ್ದಾರೆ.…

4 hours ago

ಹವಾಮಾನ ವರದಿ | 11-08-2025 | ಇಂದು ಸಾಮಾನ್ಯ ಮಳೆ | ಆ-12 ರಿಂದ ಆ-20 ರವರಗೆ ರಾಜ್ಯದ ವಿವಿದೆಡೆ ಮಳೆ |

ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಆಗಸ್ಟ್ 15ರಂದು ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಈಗಿನಂತೆ…

11 hours ago

ವೈಜ್ಞಾನಿಕ ಶಿಫಾರಸ್ಸಿನಂತೆ ರಸಗೊಬ್ಬರದ ಬಳಕೆ ಸೂಕ್ತ – ರೈತರಿಗೆ ಸಲಹೆ

ವೈಜ್ಞಾನಿಕ ಶಿಫಾರಸ್ಸಿನಂತೆ ರಾಸಾಯನಿಕ ಗೊಬ್ಬರ ಬಳಕೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ…

17 hours ago

ರಾಜ್ಯದ ಹಲವೆಡೆ ಮುಂದಿನ 7 ದಿನಗಳ ಕಾಲ ವ್ಯಾಪಕ ಮಳೆ | ಬೆಂಗಳೂರಿಗೆ ಎಲ್ಲೋ ಅಲರ್ಟ್

ಕರಾವಳಿ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಧಾರಾಕಾರ ಮಳೆಯಾಗಿದೆ. ರಾಜ್ಯದ…

18 hours ago

ಬದುಕು ಪುರಾಣ | ಜ್ಞಾನದ ಪ್ರತಿನಿಧಿ ಗಂಗಾಪುತ್ರ

ತ್ಯಾಗಕ್ಕೊಂದು ಸ್ವ-ಸ್ವರೂಪ ಇದ್ದರೆ ಅದು ‘ಭೀಷ್ಮಾಚಾರ್ಯ’ರಿಗೆ ಹೊಂದುತ್ತದೆ. ತ್ಯಾಗವೆಂದರೆ ದೇಹವನ್ನು ಕಳೆದುಕೊಳ್ಳುವುದಲ್ಲ! ದೇಹವಿದ್ದೂ…

2 days ago

ಬೆಳೆ ಹಾನಿ ಕುರಿತು ಸಮಗ್ರವಾಗಿ ಸಮೀಕ್ಷೆಗೆ ಸೂಚನೆ

ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ, ಕೃಷಿ, ತೋಟಗಾರಿಕೆ ಬೆಳೆಗಳು, ಜನ-ಜಾನುವಾರುಗಳ…

2 days ago