ಬೆಳ್ಳಾರೆ: ಯಕ್ಷಗಾನ ಕರಾವಳಿಯ ಗಂಡುಗಲೆಯಾಗಿದೆ. ದೇವದೈವರುಗಳ ಮಹಿಮೆಯ ಅರಿವನ್ನು ಜನರಿಗೆ ಯಕ್ಷಗಾನ ಕಲೆಯ ಮೂಲಕ ಮೂಡಿಸಬಹುದಾಗಿದೆ. ಯಕ್ಷಗಾನದ ಮೂಲಕ ಸಂಸ್ಕೃತಿ ಉಳಿವು ಸಾಧ್ಯವಾಗುತ್ತದೆ, ಈ ನಿಟ್ಟಿನಲ್ಲಿ ಯಕ್ಷಗಾನವನ್ನು ಯುವಜನಾಂಗದವರು ಉಳಿಸಿಕೊಳ್ಳಬೇಕು ಎಂದು ಐವರ್ನಾಡು ಪ್ರೌಢಶಾಲಾ ಶಿಕ್ಷಕ ಸೂಫಿ.ಸಿ.ಐ ಹೇಳಿದರು.
ಐವರ್ನಾಡು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಯಕ್ಷಗಾನ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ತರಬೇತಿಯನ್ನು ಸುಳ್ಯ ತಾಲೂಕು ಶಿಕ್ಷಕರ ಯಕ್ಷಗಾನ ಒಕ್ಕೂಟದ ಅಧ್ಯಕ್ಷ, ತಾಲೂಕು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಲಿಂಗಪ್ಪ ಬೆಳ್ಳಾರೆ ನಡೆಸಿಕೊಡಲಿದ್ದಾರೆ. ವೇದಿಕೆಯಲ್ಲಿ ವಿಜ್ಞಾನ ಶಿಕ್ಷಕ ಚಿದಾನಂದ.ಕೆ ಉಪಸ್ಥಿತರಿದ್ದರು. ಶಿಕ್ಷಕ ನಾರಾಯಣ ಬಿ ಕಾರ್ಯಕ್ರಮ ನಿರೂಪಿಸಿದರು.
ಗುತ್ತಿಗಾರಿನಲ್ಲಿ ‘ಮಾನ್ಸೂನ್ ಕಲರ್ಸ್’ ಜಲವರ್ಣ ಚಿತ್ರಕಲಾ ಶಿಬಿರ ನಡೆಯುತ್ತಿದೆ. ಮಲೆನಾಡಿನ ನಿಸರ್ಗ ಸೌಂದರ್ಯವನ್ನು…
ಗೋಮಯವನ್ನು ಶುದ್ಧ ಇಂಧನ ಹಾಗೂ ಸಾವಯವ ಗೊಬ್ಬರವಾಗಿ ಬಳಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಉತ್ತರ…
ಬ್ರೆಜಿಲ್ನಲ್ಲಿ ಮಳೆಯಿಂದ ಕಾಫಿ ಕೊಯ್ಲು ವಿಳಂಬವಾಗಿರುವ ಕಾರಣ ಜಾಗತಿಕ ಮಾರುಕಟ್ಟೆಯಲ್ಲಿ ಕಾಫಿ ಬೆಲೆ…
ಜುಲೈ 10ರಿಂದ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. ಜುಲೈ 11…
ಪವರ್ ಸ್ಪ್ರೇಯರ್ ಸಮಸ್ಯೆಯ ಅನುಭವದ ಮೂಲಕ E20 ಪೆಟ್ರೋಲ್ನ ಪರಿಣಾಮಗಳ ಬಗ್ಗೆ ಪ್ರಶ್ನೆ…
ಮ್ಯಾನ್ಮಾರ್ನಿಂದ ಅಕ್ರಮ ಅಡಿಕೆ ಸಾಗಾಟ ಮಾಡಿ ₹1,500 ಕೋಟಿ ಹಣ ವರ್ಗಾವಣೆ ನಡೆಸಿದ…