Advertisement
ಯಕ್ಷಗಾನ : ಮಾತು-ಮಸೆತ

ಯಾವತ್ತೂ ವ್ಯಕ್ತಿತ್ವ ನೂರಾರು ಕನ್ನಡಿಗಳಲ್ಲಿ ನೂರಾರು ಪ್ರತಿಬಿಂಬಗಳನ್ನು ಬಾಕಿದ್ದವರಿಗೆ ತೋರಿಸಿಕೊಡುವಂತೆ…!

Share

ಶೇಣಿ ಗೋಪಾಲಕೃಷ್ಣ ಭಟ್ಟರ ‘ಶಿವ’
ಪ್ರಸಂಗ : ಗಣೇಶೋದ್ಭವ

 

ನಿಮಿಷ ನಿಮಿಷಕ್ಕೆ ಬದಲಾವಣೆ ಹೊಂದುತ್ತಿರುವ, ಎಲ್ಲರ ದೃಷ್ಟಿಗೆ ಸಿಕ್ಕುವ ದೃಶ್ಯರೂಪವಾದಂತಹ ಜಗತ್ತು ಕಾರ್ಯವೇ ಹೊರತು ಕಾರಣವಲ್ಲ. ಕಾರಣಕ್ಕೆ ಬದಲಾವಣೆ ಇಲ್ಲ. ಈ ತತ್ವವನ್ನು ತಿಳಿದವರೇ ವಿಜ್ಞಾನಿಗಳು ಅಥವಾ ಜ್ಞಾನಿಗಳು. ಹಾಗಾಗಿ ಕಾರ್ಯರೂಪವಾದಂತಹ ಸಕಲ ಸಚರಾಚರ ಜಗತ್ತಿಗೆ ಕಾರಣರೂಪವಾದಂತಹ ಒಂದು ಸದ್ವಸ್ತು ಇದೆ. ಅದೇ ‘ಕಾರಣಂ ಕಾರಣಾನಾಂ’ ಅಥವಾ ‘ಮಹಾ ಕಾರಣ.’ ಇದನ್ನು ಗುರುತಿಸುವುದು ಹೇಗೆ? ಗುರುತಿಸುವುದಕ್ಕೆ ಅದಕ್ಕೆ ಆಕೃತಿಯಿಲ್ಲ. ಆದರೆ ಅದರ ಗುಣ ವಿಶೇಷಗಳನ್ನು ಗುರುತಿಸುವುದಕ್ಕೆ ಬರುತ್ತದೆ. ಮೊದಲನೆಯದ್ದಾದಂತಹ ಹೆಸರು ‘ಸತ್ಯ’ವೆಂದು. ಎರಡನೆಯದ್ದು ಮಂಗಲಕಲರವಾದ ‘ಶಿವ’ನೆಂದು. ಇನ್ನೊಂದು ಎಲ್ಲರಿಗೂ ಆಪ್ಯಾಯಮಾನವಾದ ಆನಂದವನ್ನು ಒದಗಿಸಿಕೊಡುವ ‘ಆನಂದ’ವೆಂದು. ಹಾಗಾಗಿ ‘ಸತ್ಯಂ, ಶಿವಂ, ಸುಂದರಂ’, ‘ಸತ್ ಚಿತ್ ಆನಂದ’ ಹೀಗೆ ಪ್ರತಿಪಾದಿಸಲ್ಪಡುತ್ತದೆ.

ಆದ ಕಾರಣ ಒಂದೇ ಒಂದಾದಂತಹ ಯಾವತ್ತೂ ವ್ಯಕ್ತಿತ್ವ ನೂರಾರು ಕನ್ನಡಿಗಳಲ್ಲಿ ನೂರಾರು ಪ್ರತಿಬಿಂಬಗಳನ್ನು ಬಾಕಿದ್ದವರಿಗೆ ತೋರಿಸಿಕೊಡುವಂತೆ, ಕುಂಭಸಹಸ್ರ ಉದಕದೊಳಗೆ ಬಿಂಬಿಸುವ ಸೂರ್ಯನೊಬ್ಬನಂತೆ ಶಿವನಿರುತ್ತಾನೆ. ಶಿವನು ತನ್ನ ಮುಂದೆ ಇದ್ದಂತಹ ಮಾಯಾರೂಪವಾದ ಕನ್ನಡಿಯಲ್ಲಿ, ಆ ಕನ್ನಡಿಯ ಬಣ್ಣವನ್ನು ಅನುಸರಿಸಿಕೊಂಡು ಒಂದರಲ್ಲಿ ಬೆಳ್ಳಗೆ, ಒಂದರಲ್ಲಿ ಕೆಂಪು, ಇನ್ನೊಂದರಲ್ಲಿ ಕಪ್ಪು ವರ್ಣದಿಂದ ಕಾಣಿಸುತ್ತಾನೋ ಎಂಬಂತೆ ತನ್ನ ‘ಮಾಯೆ’ಯೆನ್ನುವ ಆ ಪಾರದರ್ಶಕ ಕನ್ನಡಿಯಲ್ಲಿ ‘ಸತ್ಯ ರಜ ತಮ’ ಗುಣದಿಂದ, ‘ಬ್ರಹ್ಮ, ವಿಷ್ಣು, ಮಹೇಶ್ವರ’ ಹೀಗೆ ಮೂರು ಮೂರ್ತಿಗಳಾಗಿ ಗೋಚರಿಸುತ್ತದೆ. ಇದೇ ಕಾರಣದಿಂದ ಮತ್ತೊಮ್ಮೆ ಮೈಯೊಡೆದು ಬರಬೇಕಾಗುತ್ತದೆ ಎಂಬ ತತ್ವೇಣ ವೈಕುಂಠದಲ್ಲಿ ಶ್ರೀಹರಿ, ಸತ್ಯಲೋಕದಲ್ಲಿ ಬ್ರಹ್ಮದೇವ, ರಜತಾದ್ರಿಯಲ್ಲಿ ಕೈಲಾಸವಾಸಿ ಸದಾಶಿವ. ಮಹಾದೇವ ಎಂಬುದು ನಮ್ಮ ಅಸ್ತಿತ್ವಕ್ಕೆ ವಿದ್ವಾಂಸರು ಕೊಟ್ಟಂತಹ ಚಿತ್ರಣ. ಅವರ ಭಾವಕ್ಕೆ ತಕ್ಕಂತೆ ನಾವು ಮೈಯೊಡೆದಿದ್ದೇವೆ.

ಆದರೆ ಒಂದಿದೆ. ನಿಜವಾಗಿಯೂ ನಮಗೆ ಹೆಂಡತಿ ಯಾಕೆ? ಮಕ್ಕಳು ಯಾಕೆ? ಸಂಸಾರ ಯಾಕೆ? ಶುದ್ಧನಾದಂತಹ ಶಿವನು ತಾನು ತಾನಾಗಿ ಏನೂ ಮಾಡಲಾರ. ‘ಕುಂಟ-ಕುರುಡ’ ನ್ಯಾಯದಂತೆ ಕುಂಟನಿಗೆ ಕಣ್ಣಿದೆ, ಆದರೆ ನಡೆಯುವುದಕ್ಕೆ ಕಾಲಿಲ್ಲ. ಒಬ್ಬನ ಹೆಗಲಿನಲ್ಲಿ ಮತ್ತೊಬ್ಬ ಏರಿ ಕುಳಿತಾಗ ಕಣ್ಣಿನ ಕೆಲಸ ಮೇಲಿದ್ದವರು ಮಾಡಿದರೆ, ಕಾಲಿನ ಕೆಲಸ ಕೆಳಗಿದ್ದವರು ಮಾಡುತ್ತಾರೆ ಎಂಬ ರೂಪಕದಂತೆ ನನ್ನ ಮಾಯೆಯನ್ನು ನಾನು ನನ್ನಲ್ಲಿ ಸೇರಿಸಿಕೊಂಡಿದ್ದೇನೆ. ಅಂದರೆ ಪರ್ವತ ರಾಜಕುಮಾರಿಯಾದ ಪಾರ್ವತಿಯನ್ನು ಕಾಲಿನ ಸ್ಥಾನದಲ್ಲಿ ಇಟ್ಟುಕೊಂಡು; ನಿಜವಾಗಿ ನಡೆಯದ, ನುಡಿಯದೇ ಇದ್ದ ಶಿವನಾದ ನಾನು ಲೋಕದ ಕಣ್ಣಾಗಿ ಅವಳ ಹೆಗಲನ್ನೇರಿ ಸಂಚರಿಸುವಂತೆ ಈ ರಜತಾದ್ರಿಯಲ್ಲಿ ವಾಸವಾಗಿದ್ದೇನೆ….

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ಅಡಿಕೆ ರೋಗ ನಿಯಂತ್ರಣಕ್ಕೆ ಕೇಂದ್ರದ ಬೆಂಬಲ – ಕ್ಯಾ. ಚೌಟಗೆ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್ ಭರವಸೆ

ಕರಾವಳಿ ಮತ್ತು ಮಲೆನಾಡಿನ ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕೆ, ಹಳದಿ ಎಲೆ ಹಾಗೂ…

9 hours ago

ಹವಾಮಾನ ವರದಿ | 23-08-2026 | ಆಗಸ್ಟ್ 25 ರವರೆಗೆ ಮಳೆ – ಕರಾವಳಿ-ಮಲೆನಾಡಿನಲ್ಲಿ ಉತ್ತಮ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 25ರವರೆಗೆ ಮಳೆ…

14 hours ago

ಅಳಿವಿನಂಚಿನಲ್ಲಿದ್ದ ಪೆರಿಯಾರ್ ಹಸುವಿಗೆ ರಾಷ್ಟ್ರೀಯ ತಳಿ ಮಾನ್ಯತೆ – ಕೇರಳದ ಎರಡನೇ ದೇಶಿ ಗೋತಳಿ

ಅಳಿವಿನಂಚಿನಲ್ಲಿದ್ದ ಕೇರಳದ ಪೆರಿಯಾರ್ ಕುಳ್ಳನ್ ಹಸುವಿಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ರಾಷ್ಟ್ರೀಯ…

15 hours ago

ಪಿಒಪಿ ಗಣಪತಿಗೆ ಬ್ರೇಕ್..? ಕರಾವಳಿಯ 90–95% ಪರಿಸರ ಸ್ನೇಹಿ ಮಾದರಿ ರಾಜ್ಯಕ್ಕೆ ಪಾಠ

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನೇ ಪ್ರತಿಷ್ಠಾಪಿಸಿ ಗಣೇಶೋತ್ಸವ ಆಚರಿಸುವಂತೆ…

17 hours ago

ಪಶ್ಚಿಮ ಘಟ್ಟ ಸಂರಕ್ಷಣೆ ಹೆಸರಿನಲ್ಲಿ ಕೃಷಿಕರಿಗೆ ನಿರ್ಬಂಧ ಬೇಡ – ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕರಿಸಲು ಆಗ್ರಹ

ಪಶ್ಚಿಮ ಘಟ್ಟ ಸಂರಕ್ಷಣೆಯ ಹೆಸರಿನಲ್ಲಿ ಕೃಷಿಕರ ಜೀವನೋಪಾಯಕ್ಕೆ ನಿರ್ಬಂಧ ಹೇರಬಾರದು, ಕಸ್ತೂರಿ ರಂಗನ್…

18 hours ago

ಮುಂಗಾರು ಬೇಗನೆ ವಿದಾಯ ಹೇಳುತ್ತಿದೆಯೇ..? ಸೆಪ್ಟೆಂಬರ್‌ನಲ್ಲಿ ಮಳೆ ಕಡಿಮೆಯಾಗುವ ಮುನ್ಸೂಚನೆ..?

ಸೆಪ್ಟೆಂಬರ್ 5–10ರ ನಂತರ ದೇಶದ ಹಲವು ಭಾಗಗಳಲ್ಲಿ ಮುಂಗಾರು ಮಳೆ ಗಣನೀಯವಾಗಿ ಕಡಿಮೆಯಾಗುವ…

1 day ago