ಸುಳ್ಯ: ಪೆರಾಜೆಯಿಂದ ಅರಂತೋಡು ತನಕ ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿರುವ ಸ್ಥಳವನ್ನು ಯುವ ಬ್ರಿಗೇಡ್ ಸುಳ್ಯ ತಾಲೂಕು ತಂಡದ ವತಿಯಿಂದ ಶ್ರಮದಾನದ ಮೂಲಕ ದುರಸ್ಥಿ ಪಡಿಸಲಾಯಿತು. ಕಸ ಕಡ್ಡಿಗಳನ್ನು ತೆರವುಗೊಳಿಸಿ ರಸ್ತೆಯಿಂದ ನೀರು ಚರಂಡಿಗೆ ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಲಾಯಿತು ಪರಿವಾರಕಾನದ ಮೋಕ್ಷಿತ್, ಪವನ್,ಮುರಳಿ, ಅಶೋಕ, ನವೀನ, ರಾಜೇಶ್, ಶರತ್ ತಮ್ಮಣ್ಣ ಅರಂತೋಡಿನ ಅಶ್ವತ್ಥ್, ಕಿಶೋರ್, ಗೌತಮ್,
ದೇವಿಪ್ರಸಾದ್ ಅರಂಬೂರು, ಮನೀಷ್ ಗೂನಡ್ಕ ಪ್ರಶಾಂತ್ ಅರಂಬೂರು ಭಾಗವಹಿಸಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel