ಸುಳ್ಯ: ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಕಡೆಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್.ಅಂಗಾರ ಚಾಲನೆ ನೀಡಿದರು. ಕಲ್ಲುಮುಟ್ಲುವಿನಲ್ಲಿ 10 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ, ಕೇರ್ಪಳ 11ನೇ ನೆಲ್ಲಿ ಬಂಗಾರಡ್ಕದಲ್ಲಿ ರೂ 10 ಲಕ್ಷ ವೆಚ್ಚದಲ್ಲಿ ರಸ್ತೆ, 9ನೇ ವಾರ್ಡ್ನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ, 12 ಲಕ್ಷ ವೆಚ್ಚದಲ್ಲಿ ಕುರುಂಜಿ ಗುಡ್ಡೆ ಒಳಾಂಗಣ ಕ್ರೀಡಾಂಗಣದ ಬಳಿ ರಸ್ತೆ ಅಭಿವೃದ್ಧಿ, 10 ಲಕ್ಷ ವೆಚ್ಚದಲ್ಲಿ ಕೇರ್ಪಳ ಕೆ ಇ ಬಿ ಕ್ವಾರ್ಟರ್ಸ್ ಹಿಂಬದಿ ರಸ್ತೆ ಅಭಿವೃದ್ಧಿ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ಸೇರಿ 70 ಲಕ್ಷದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ನಗರ ಪಂಚಾಯಿತಿ ಸದಸ್ಯರಾದ ಸುಶೀಲ, ಕಿಶೋರಿ ಶೇಟ್, ಸುಧಾಕರ್, ವಿನಯ ಕುಮಾರ್ ಕಂದಡ್ಕ, ಪೂಜಿತ ಕೆ.ಯು, ಶೀಲಾ ಕುರುಂಜಿ, ರಿಯಾಜ್ ಕಟ್ಟೆಕ್ಕಾರ್, ಮಾಜಿ ನ ಪಂ ಸದಸ್ಯರಾದ ಕಿರಣ್ ಕುರುಂಜಿ, ಗೋಪಾಲ್ ನಡುಬೈಲ್, ನ.ಪಂ.ಇಂಜಿನಿಯರ್ ಶಿವಕುಮಾರ್, ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಚಂದ್ರಶೇಖರ್, ಸ್ಥಳೀಯ ಪ್ರಮುಖರಾದ ಜಿನ್ನಪ್ಪ ಪೂಜಾರಿ, ಆನಂದ ಗೌಡ, ಬಿನು, ರಂಜಿತ್ ಪೂಜಾರಿ, ಶಿವರಾಮ್ ಕೇರ್ಪಳ, ಸುನಿಲ್ ಕೇರ್ಪಳ, ಬಾಲಕೃಷ್ಣ ನೆಡ್ಚಿಲ್, ಮನೀಶ್ ಬಾಬು ಗೌಡ, ಶೀನಪ್ಪ ಬಯಂಬು, ದಯಾನಂದ ಕೇರ್ಪಳ, ಮನೀಶ್ ಬಾಬು ಗೌಡ, ಶೀನಪ್ಪ ಬಯಂಬು, ಬೂಡು ರಾಧಾಕೃಷ್ಣ ರೈ ಮತ್ತಿತರರು ಉಪಸ್ಥಿತರಿದ್ದರು.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಾವಳದಲ್ಲಿ ಕಡಲಾಮೆ ಮೊಟ್ಟೆಯಿಂದ ಹೊರ ಬಂದ…
ದಕ್ಷಿಣ ಕನ್ನಡದಲ್ಲಿ ಗುಣಮಟ್ಟದ ಮೀನು ಮರಿ ಕೊರತೆ ನೀಗಿಸಲು ಮಂಗಳೂರಿನಲ್ಲಿ Marine Finfish…
ಕರಾವಳಿ ಜಿಲ್ಲೆಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯ ಅನುದಾನವನ್ನು ಮುಂದಿನ ಬಜೆಟ್ನಲ್ಲಿ ನೀಡಬೇಕೆಂದು…
ಅಡಿಕೆ ಜಗಿಯುವುದು ಕೇವಲ ಸಾಂಪ್ರದಾಯಿಕ ಅಭ್ಯಾಸ ಮಾತ್ರವಲ್ಲ, ಅದು ಗಂಭೀರ ಆರೋಗ್ಯ ಅಪಾಯಗಳಿಗೆ…
ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ ಹಾಗೂ ಆನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು…
ದಾವಣಗೆರೆ ಜಿಲ್ಲೆಯಲ್ಲಿ 5 ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರು 87,258 ಕ್ವಿಂಟಲ್…