ಪುತ್ತೂರು: ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸಿದ ಸೀನಿಯರ್ ಗ್ರೇಡ್ ಕರ್ನಾಟಕ ಶಾಸ್ತ್ರೀಯ ಸಂಗೀತ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ಭಾಮಿನಿ ಕೆ ಭಟ್ ರಾಜ್ಯ ಮಟ್ಟದಲ್ಲಿ ಹತ್ತನೇ ರಾಂಕ್ ಗಳಿಸಿದ್ದಾರೆ.
ಇವರು ಪುತ್ತೂರಿನ ದರ್ಬೆಯ ಡಾ| ರವಿಪ್ರಕಾಶ್ ಕೆ ಮತ್ತು ವಿಜಯಸರಸ್ವತಿ ದಂಪತಿಗಳ ಪುತ್ರಿ. ಇವರು ಪುತ್ತೂರಿನ ಉಮಾಮಹೇಶ್ವರ ಸಂಗೀತ ಕಲಾ ಶಾಲೆಯ ಗುರುಗಳಾದ ಶ್ರೀಮತಿ ವಿದ್ಯಾ ಈಶ್ವರಚಂದ್ರರವರ ಶಿಷ್ಯೆ. ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ,ಪ್ರಾಂಶುಪಾಲರು ಮತ್ತು ಅಧ್ಯಾಪಕ ವೃಂದ ಅಭಿನಂದಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel