ಸವಿರುಚಿ

ರುಚಿ ರುಚಿ….. ಹುರುಳಿ ವೈವಿಧ್ಯ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಹುರುಳಿ ಚಟ್ನಿ:

Advertisement
Advertisement

ಬೇಕಾಗುವ ಸಾಮಾನು: 1/2 ಕಪ್ ಹುರುಳಿ, ಅರ್ಧ ಹೋಳು ತೆಂಗಿನಕಾಯಿ, ಒಣಮೆಣಸು 6, ಹುಣಿಸೆಹಣ್ಣು ಸಣ್ಣ ನೆಲ್ಲಿ ಗಾತ್ರ, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ ಸಾಸಿವೆ, ಮೆಣಸಿನಕಾಯಿ, ಕರಿಬೇವು. ಎಣ್ಣೆ.

ಮಾಡುವ ವಿಧಾನ: ಹುರುಳಿಯನ್ನು ಎಣ್ಣೆ ಹಾಕದೆ ಹುರಿಯಿರಿ. ಮೆಣಸಿನಕಾಯಿಯನ್ನು ಎಣ್ಣೆ ಹಾಕಿ ಹುರಿಯಿರಿ. ತೆಂಗಿನತುರಿ, ಹುಣಿಸೆಹಣ್ಣು, ಉಪ್ಪು, ಹುರಿದ ಮೆಣಸಿನಕಾಯಿ ಮತ್ತು ಹುರುಳಿಯನ್ನು ಗಟ್ಟಿಯಾಗಿ ರುಬ್ಬಿಕೊಂಡು ಅದಕ್ಕೆ ಸಾಸಿವೆ ಒಗ್ಗರಣೆ ಹಾಕಿದರೆ ರುಚಿಯಾದ ಹುರುಳಿ ಚಟ್ನಿ ತಯಾರು.

ಹುರುಳಿ ಸಾರು:

ಬೇಕಾಗುವ ಸಾಮಾನು: 1 ಕಪ್ ಹುರುಳಿ , ತೆಂಗಿನ ತುರಿ 1 ಟೇಬಲ್ ಚಮಚ, ಕೊತ್ತಂಬರಿ, 5 ಒಣ ಮೆಣಸಿನಕಾಯಿ, 1ಗೆಡ್ಡೆ ಬೆಳ್ಳುಳ್ಳಿ , ನೆಲ್ಲಿಕಾಯಿ ಗಾತ್ರ ಹುಣಿಸೆಹಣ್ಣು, ಬೆಲ್ಲ , ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಹುರುಳಿಯನ್ನು ಬೇಯಿಸಿ ಬಸಿದ ನೀರಿಗೆ ಹುಣಿಸೆಹಣ್ಣು, ಉಪ್ಪು,ಬೆಲ್ಲ ಹಾಕಿ ಕುದಿಸಿ. ತೆಂಗಿನ ತುರಿ, ಕೊತ್ತಂಬರಿ ಮತ್ತು ಮೆಣಸಿನ ಕಾಯಿಯನ್ನು 1ಚಮಚ ಹುರುಳಿಯನ್ನು ಸೇರಿಸಿ ರುಬ್ಬಿಕೊಂಡು ಅದನ್ನು ಕುದಿಸಿದ ನೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ. ಆ ನಂತರ ಬೆಳ್ಳುಳ್ಳಿ ಮತ್ತು ಕರಿಬೇವು ಒಗ್ಗರಣೆ ಹಾಕಬೇಕು.

Advertisement

 

 

ಹುರುಳಿ ಉಸುಲಿ:

ಬೇಕಾಗುವ ಸಾಮಾನು : ಬೇಯಿಸಿದ ಹುರುಳಿ 1 ಕಪ್, ತೆಂಗಿನ ತುರಿ ಅರ್ಧ ಕಪ್, ಬೆಲ್ಲ ಅಥವಾ ಸಕ್ಕರೆ, ಒಗ್ಗರಣೆಗೆ ಉದ್ದಿನಬೇಳೆ, ಸಾಸಿವೆ ಮೆಣಸು, ಕರಿಬೇವು.
ಮಾಡುವ ವಿಧಾನ: ಬೇಯಿಸಿದ ಹುರುಳಿಯನ್ನು ಮಿಕ್ಸಿಯಲ್ಲಿ ಒಮ್ಮೆ ತಿರುಗಿಸಿ . ಬಾಣಲೆಯಲ್ಲಿ ಎಣ್ಣೆ ಹಾಕಿ ಉದ್ದಿನಬೇಳೆ, ಸಾಸಿವೆ, ಮೆಣಸು, ಕರಿಬೇವು ಹಾಕಿ. ಸಾಸಿವೆ ಸಿಡಿದ ಮೇಲೆ ಹುರುಳಿ, ಸಕ್ಕರೆ, ತೆಂಗಿನತುರಿ ಹಾಕಿ ಮಗುಚಿ. ಬಿಸಿ ಬಿಸಿಯಾಗಿ ತಿನ್ನಲು ರುಚಿಯಾಗಿರುತ್ತದೆ.

Advertisement

 

ಹುರುಳಿ ದೊಡ್ನ

ಬೇಕಾಗುವ ಸಾಮಾನು: 2 ಕಪ್ ಬೆಳ್ತಿಗೆ ಅಕ್ಕಿ, 1 ಕಪ್ ಹುರುಳಿ, 2 ಚಮಚ ಉದ್ದಿನಬೇಳೆ ಉಪ್ಪು, ಕರಿಬೇವು 1 ಕಟ್ಟು, ಸಾಸಿವೆ ಮತ್ತು ಎಣ್ಣೆ.
ಮಾಡುವ ವಿಧಾನ: ಬೆಳ್ತಿಗೆ ಅಕ್ಕಿ ಯನ್ನು, ಹುರುಳಿ, ಉದ್ದಿನಬೇಳೆಯನ್ನು ಬೇರೆ ಬೇರೆಯಾಗಿ 3 ಗಂಟೆ ನೆನೆಸಿಡಿ. ಆನಂತರ ಬೇರೆ ಬೇರೆಯಾಗಿ ರುಬ್ಬಿಕೊಳ್ಳಿ. ಎರಡನ್ನು ಬೆರೆಸಿ 8 ಗಂಟೆ ಹಾಗೆ ಇಡಿ. ಮರುದಿನ ಬಾಣಲೆಗೆ ಎಣ್ಣೆ ಹಾಕಿ ಕಾದಾಗ ಕಾಲು ಚಮಚ ಸಾಸಿವೆ ಮತ್ತು 1 ಎಸಳು ಕರಿಬೇವು ಹಾಕಿ ಸಾಸಿವೆ ಸಿಡಿದ ನಂತರ ಹಿಟ್ಟನ್ನು ಚೆನ್ನಾಗಿ ಕಲಸಿ 1 ಸೌಟು ಹಿಟ್ಟು ಬಾಣಲೆಗೆ ಹಾಕಿ ಮುಚ್ಚಿಡಿ. ಬೆಂದ ನಂತರ ಎಣ್ಣೆ ಹಾಕಿ ಮಗುಚಿ ಹಾಕಿ ಎರಡು ಬದಿ ಬೇಯಿಸಿ. ಪ್ರತಿ ಸಲವು ಮೊದಲು ಒಗ್ಗರಣೆ ಹಾಕಿಕೊಂಡು ಸಾಸಿವೆ ಸಿಡಿದ ನಂತರ ಹಿಟ್ಟು ಹಾಕಿ ದೊಡ್ನ (ಬಾಣಲೆ ದೋಸೆ)ಮಾಡಿ ಚಟ್ನಿಯೊಂದಿಗೆ ಬಿಸಿ ಬಿಸಿಯಾಗಿ ತಿನ್ನಬೇಕು.

 

Advertisement

 

ಬರಹ : ಚಿತ್ರಾ ಮಟ್ಟಿ

ಚಿತ್ರಾ ಮಟ್ಟಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 14-06-2025 | ಜೂನ್.‌18 ರಿಂದ ಮಳೆಯ ಪ್ರಮಾಣ ಕಡಿಮೆ ನಿರೀಕ್ಷೆ

ಜೂನ್ 18 ರಿಂದ ಮುಂಗಾರು ಮತ್ತೆ ದುರ್ಬಲಗೊಂಡು ಮಳೆ ಕಡಿಮೆಯಾಗುವ ಸೂಚನೆಗಳಿವೆ.

34 minutes ago

ಅಡಿಕೆ ಜಗಿಯುವ ಪ್ರವೃತ್ತಿ ಎಲ್ಲೆಲ್ಲಿ ಇದೆ ?

ತಾಂಬೂಲ ಸೇವನೆಗೆ ಅದರದ್ದೇ ಆದ ಇತಿಹಾಸ ಇದೆ. ಜಗತ್ತಿನ ಅಭಿವೃದ್ಧಿ ಹೊಂದಿದ ಮತ್ತು…

2 hours ago

ಮಕ್ಕಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಪರಿಚಯ ಮೂಡಿಸಬೇಕಿದೆ

ಮಕ್ಕಳಲ್ಲಿ ಬೌದ್ಧಿಕ ಸಾಮರ್ಥ್ಯ ಗಣಿತ ಹಾಗೂ ಭಾಷಾ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಕಲಿಕಾ ಮಾದರಿ…

5 hours ago

ಎಳೆ ಅಡಿಕೆ ಬೀಳಲು ಹವಾಮಾನ ವೈಪರೀತ್ಯ ಕಾರಣವೇ…!?

ಅಡಿಕೆ ಬೆಳೆಗಾರರಿಗೆ ಜೂನ್‌ ಆರಂಭವಾಗುತ್ತಿದ್ದಂತೆಯೇ ಎಳೆ ಅಡಿಕೆ ಬೀಳುವ ಸಮಸ್ಯೆ ಆರಂಭವಾಗಿದೆ. ವಿವಿಧ…

9 hours ago

ಅಹಮದಾಬಾದ್ ವಿಮಾನ ಪತನ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ

ಅಹಮದಾಬಾದ್ ನಲ್ಲಿ  ಸಂಭವಿಸಿದ ವಿಮಾನ ಪತನ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆಯಾಗಿದ್ದು, ತನಿಖೆಯಲ್ಲಿ…

9 hours ago