Advertisement
MIRROR FOCUS

ವಿಪರೀತ ಬಿಸಿಲಿಗೆ ಬೀಳ್ತಾ ಇದೆ ಅಡಿಕೆ ನಳ್ಳಿ

Share

ಸುಳ್ಯ: ವಿಪರೀತ ಬಿಸಿಲು ಹಾಗೂ ಹವಾಮಾನದ ಏರಿಳಿತದ ಕಾರಣದಿಂದ ನಳ್ಳಿ ಮಾತ್ರವಲ್ಲ ಎಳೆ ಅಡಿಕೆ ಬೀಳ್ತಾ ಇದೆ.  ನೋಡ ನೋಡುತ್ತಿದ್ದಂತೆ ಏನೂ ಮಾಡಲಾಗದ ಸ್ಥಿತಿ ಇದೆ. ಮಳೆಗಾಲ ಕೊಳೆರೋಗವಾಯ್ತು, ಬೇಸಗೆ ಕಾಲ ಬಿಸಿಲಾಗಿ  ನಳ್ಳಿ ಬೀಳುವುದಾಯ್ತು. ಏನೇ ಆದರೂ ಅಡಿಕೆ  ಮಾತ್ರಾ ಕೆಳಗೆ…!

Advertisement
Advertisement
Advertisement
Advertisement

 

Advertisement

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಈಗ ಹವಾಮಾನದ ಏರಿಳಿತ ವಿಪರೀತವಾಗಿದೆ. ಒಂದೇ ದಿನದಲ್ಲಿ  ಬಿಸಿಲು, ಮಳೆ ಹಾಗೂ ಶಾಖ ಗಿಡಗಳ ಮೇಲೆ ಪರಿಣಾಮ ಬೀರ್ತಾ ಇದೆ. ಒಮ್ಮೆಲೇ 38 ಡಿಗ್ರಿಯಿಂದ 40 ಡಿಗ್ರಿಯವರೆಗೆ ತಾಪಮಾನ ಏರುತ್ತದೆ, ಅದೇ ರೀತಿ ಸಂಜೆಯಾಗುತ್ತಿದ್ದಂತೆಯೇ 27 ರಿಂದ 30 ಡಿಗ್ರಿಗೆ ಇಳಿಯುತ್ತದೆ. ಇಂತಹದ್ದೊಂದು ಏರಿಳಿತ ಇತ್ತೀಚೆಗಿನ ವರ್ಷದಲ್ಲಿ ಹೆಚ್ಚಾಗುತ್ತಿದೆ. ಈ ಕಾರಣದಿಂದ ಎಳೆಯ ಅಡಿಕೆ ನಳ್ಳಿ ಬೀಳಲು ಶುರುವಾಗಿದೆ. ಇದಕ್ಕೇನು ಪರಿಹಾರ ಎಂಬ ಚಿಂತೆ ಬೆಳೆಗಾರರನ್ನು  ಕಾಡ್ತಾ ಇದೆ.

 

Advertisement

 

Advertisement

ಮಳೆಗಾಲ ಮಳೆಯ ಕಾರಣದಿಂದ ಕೊಳೆರೋಗ ಬಾಧಿಸಿದರೆ, ಬೇಸಗೆಯಲ್ಲಿ  ವಾತಾವರಣದ ಕಾರಣದಿಂದ ಎಳೆ ನಳ್ಳಿ ಬೀಳುತ್ತಿದೆ.  ಹೀಗಾಗಿ ಅಡಿಕೆ ಬೆಳೆಗಾರಿನಿಗೆ ಸಂಕಷ್ಟದ ಮೇಲೆ ಸಂಕಷ್ಟ ಬರಲಾರಂಭಿಸಿದೆ. ಈ ಬಾರಿ ಕೊಳೆರೋಗದ ಕಾರಣದಿಂದ ಸಾಕಷ್ಟು ಫಸಲು ನಾಶ  ಹೊಂದಿದ ಬೆಳೆಗಾರಿನಿಗೆ ಇದೀಗ ಅರಿವಿಲ್ಲದೆ ಅಡಿಕೆ ಫಸಲು ನಾಶವಾಗುತ್ತಿದೆ. ಇದರ ಫಲಿತಾಂಶ ಸಿಗುವುದು ಮಳೆಗಾಲದ ನಂತರವೇ.

ಜೂನ್ 6 ರ ನಂತರ ಮನಳೆಗಾಲ ಆರಂಭವಾಗುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅದುವರೆಗೆ ಈ ಏರಿಳಿತ  ಇರುವ ಕಾರಣದಿಂದ ಸಹಿಸಿಕೊಳ್ಳಬೇಕಷ್ಟೇ.

Advertisement

 

Advertisement

 

ಆದರೆ ವೈಜ್ಞಾನಿಕವಾಗಿ ಇನ್ನೊಂದು ಮಾಹಿತಿ ಸಿಗುತ್ತದೆ, ಅಡಿಕೆ ಮರ 25 ಲೀಟರ್ ನಷ್ಟು ನೀರನ್ನು ಭೂಮಿಯಿಂದ ಹೀರಿಕೊಳ್ಳುತ್ತದೆ. ನೀರಿನ ಕೊರತೆ ಉಂಟಾದಾಗ ಸಹಜವಾಗಿಯೇ ಮರವೂ ಅದಕ್ಕೆ ಹೊಂದಿಕೊಳ್ಳುತ್ತದೆ. ವಿಪರೀತ ಬಿಸಿಲಾಗಾದ ಎಳೆ ಅಡಿಕೆಗೆ ಶಕ್ತಿ ಕುಂದಿ ಬೀಳುವುದು ಒಂದು ಭಾಗವಾದರೆ,  ವಿಪರೀತ ಬಿಸಿಲು ಇದ್ದು ಒಂದು ಮಳೆ ಬಂದರೆ ಇದ್ದಕ್ಕಿದ್ದಂತೆ ಮರ  ಒಮ್ಮೆಲೇ  ಹೆಚ್ಚು ನೀರು ಹೀರಿಕೊಂಡು ಅಡಿಕೆ ನಳ್ಳಿ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿಯೂ ಕೆಲವೊಮ್ಮೆ ನಳ್ಳಿ ಉದುರುತ್ತದೆ ಎಂಬ ಮಾಹಿತಿ ಲಭ್ಯವಾಗುತ್ತದೆ.  ಅದಕ್ಕಾಗಿ ಅಡಿಕೆ ಮರಕ್ಕೆ ಒಮ್ಮೆಲೇ ಹೆಚ್ಚು ನೀರುಣಿಸುವುದು ಹಾಗೂ ಒಮ್ಮೆಲೇ ನೀರು ಕಡಿಮೆ ಮಾಡುವುದು  ಅಷ್ಟೊಂದು ಒಳ್ಳೆಯದಲ್ಲ, ಈ ಕಾರಣದಿಂದಲೂ ಅಡಿಕೆ ನಳ್ಳಿ ಉದುರುತ್ತದೆ. ವಾತಾವರಣದ ಕಾರಣದಿಂದಾದರೆ ಏನೂ ಮಾಡಲಾಗದು, ಆದರೆ ನೀರುಣಿಸುವುದರಲ್ಲೂ ಎಚ್ಚರಿಕೆ ವಹಿಸಬೇಕಾಗುತ್ತದೆ.

Advertisement

 

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಗ್ರಾಮೀಣ, ನಗರ ಪ್ರದೇಶದ ಕಟ್ಟೆಗಳ ಅಭಿವೃದ್ಧಿ – ಧಾರ್ಮಿಕ ಪರಂಪರೆ ಸಂರಕ್ಷಣೆ

ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ  ಸುಮಾರು 250…

8 hours ago

ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಸಕಲ ಕ್ರಮ | ಮುಖ್ಯಮಂತ್ರಿ  ಸಿದ್ದರಾಮಯ್ಯ

ರಾಜ್ಯದ ಕಾಡಂಚಿನ ಪ್ರದೇಶದಲ್ಲಿ  ಮಾನವ ಮತ್ತು  ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…

8 hours ago

ಎಲ್ಲಾ ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ಕಾನೂನು ಜಾರಿಗೆ ರಾಜ್ಯ ರೈತ ಸಂಘಟನೆಗಳ ಮನವಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…

8 hours ago

ಗ್ರೇಟರ್ ಹೆಸರಗಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ ಶುದ್ಧ ಪರಿಸರಕ್ಕೆ ಸಹಕಾರಿ | ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿಕೆ

ಬೆಂಗಳೂರಿನ ಯಲಹಂಕ ತಾಲ್ಲೂಕಿನ ಒಟ್ಟು 5678 ಎಕರೆ ಗುಂಟೆ ಪ್ರದೇಶವನ್ನು ಪರಿಸರ ಸಂರಕ್ಷಣೆ…

8 hours ago

ಬೆಳೆಗಾರರಿಗೆ ತರಬೇತಿ ನೀಡಲು ತರಬೇತಿ ಕೇಂದ್ರ ಸ್ಥಾಪನೆ

ಬೆಳೆಗಾರರಿಗೆ ತರಬೇತಿ ನೀಡಲು ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಕರ್ನಾಟಕ ಕೊಳಚೆ…

9 hours ago

ಅಡಿಕೆ ಒಂದು ಸಮೂಹದ ಅನಿವಾರ್ಯತೆ ಮತ್ತು ಬದುಕು

ಅಡಿಕೆಯ ಮೇಲೆ ಯಾವುದೇ ಋಣಾತ್ಮಕ ನಿರ್ಧಾರ ತೆಗೆದುಕೊಳ್ಳುವ ಮೊದಲು ಯೋಚಿಸಬೇಕಾದ ಹಲವು ಅಂಶಗಳು…

22 hours ago