Advertisement
Categories: Uncategorized

ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಕುಕ್ಕುಜಡ್ಕದಲ್ಲಿ ಮ್ಯಾರಥಾನ್

Share

ಕುಕ್ಕುಜಡ್ಕ:  ವಿಶ್ವ ಯೋಗ ದಿನಾಚರಣೆಯ ಪ್ರಯಕ್ತ ಗ್ರಾಮ ವಿಕಾಸ ಮತ್ತು  ಅಮರಮುಡ್ನೂರು ಗ್ರಾಮದ ಅಮರಕ್ರೀಡಾ ಸಂಘಟನಾ ಸಮಿತಿ ಆಶ್ರಯದಲ್ಲಿ 2ನೇ ವರ್ಷದ ಅಮರ ಮ್ಯಾರಥಾನ್ ಪೈಲಾರಿನಿಂದ ಕುಕ್ಕುಜಡ್ಕದವರೆಗೆ ನಡೆಯಿತು.

ಯುವಜನ ಸಂಯುಕ್ತ ಮಂಡಳಿ ನಿರ್ದೇಶ  ತೇಜಸ್ವಿ ಕಡಪಳ  ಚಾಲನೆ ನೀಡಿದರು. ಪೈಲಾರಿನಿಂದ ಆರಂಭಿಸಿ ಕುಕ್ಕುಜಡ್ಕದಲ್ಲಿ ಮುಕ್ತಯವಾಯಿತು. ನಂತರ ಯೋಗ ಕಾರ್ಯಕ್ರಮ , ಹಾಗೂ ಬಹಮಾನ ವಿತರಣಾ ಸಮಾರಂಭ ಕುಕ್ಕುಜಡ್ಕ ಅಮರ ಸಹಕಾರ ಸೌಧದಲ್ಲಿ ನಡೆಯಿತು.

ನಿವೃತ್ತ ಉದ್ಯೋಗಿ ತಿರುಮಲೇಶ್ವರ ಗೌಡ ಬೊಳ್ಳೂರು ಸಭಾಧ್ಯ ಕ್ಷತೆ ವಹಿಸಿದರು..ವಿ.ಜಿ. ದಂತ ಮಹಾವಿದ್ಯಾಲಯದ ವೈದ್ಯ ಡಾ. ಜಯಪ್ರಸಾದ್ ಆನೇಕಾರ ಬಹುಮಾನ ವಿತರಿಸಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಶ ಭಾನುಪ್ರಕಾಶ್ ಪೆಲ್ತಡ್ಕ, ಸದಸೄರು ಗ್ರಾಮ ಪಂಚಾಯತ್ ಅಮರಮುಡ್ನೂರು, ಕೃಷ್ಣ ಪ್ರಸಾದ್ ಮಾಡಬಾಕೀಲು, ಅಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ, ಪೈಲಾರು ಶಾಲೆ, ಹರಿಪ್ರಸಾದ್ ಎಲಿಮಲೆ , ಗುತ್ತಿಗೆದಾರರು,  ಜಯಪ್ರಕಾಶ್ ದೊಡ್ಡಿಹಿತ್ಲು, ಶ್ರೀನಿಧಿ ಶಾಮಿಯಾನ, ಕುಕ್ಕುಜಡ್ಕ,  ಶಶಿಧರ್ ಮುಂಡಕಜೆ, ಉದ್ಯೋಗಿಗಳು ಗ್ರಾಮ ಪಂಚಾಯತ್ ಅಮರಮುಡ್ನೂರು,  ಸಂತೋಷ್ ಮುಂಡಕಜೆ, ಯೋಗ ಗುರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಹುಮಾನ ವಿತರಣೆಯ ನಂತರ ಯೋಗ ಕಾರ್ಯಕ್ರಮ ಯೋಗ ಗುರು ಸಂತೋಷ್ ಮುಂಡಕಜೆಯವರು ನಡೆಸಿಕೊಟ್ಟರು.

 

ಮ್ಯಾರಥಾನ್ ಓಟದಲ್ಲಿ ಪುರುಷರ ವಿಭಾಗ:

ಪ್ರಥಮ ಸ್ಥಾನ: ಧನೄರಾಜ್ ಪಿ.ಸಿ. ಪೈಲಾರು, ದ್ವಿತೀಯ ಸ್ಥಾನ: ತೇಜಸ್ ಮರ್ಗಿಲಡ್ಕ, ತೃತೀಯ ಸ್ಥಾನ: ವಿವೇಕ್ ಮಾಡಬಾಕೀಲು, ಚತುರ್ಥ ಸ್ಥಾನ: ಯಾತೀಶ.ಎಂ ,ಪಂಚಮ ಸ್ಥಾನ: ರತ್ನಾಕರ ಪೈಲಾರು ಪಡೆದುಕೊಂಡರು.

ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನಿ : ಗೀತಾ.ಕೆ, ದ್ವಿತೀಯಾ ಸ್ಥಾನಿ: ಹಸ್ತ.ಕೆ. ತೃತೀಯಾ ಸ್ಥಾನಿ : ವಿನುತಾ ,ಚತುರ್ಥ ಸ್ಥಾನಿ: ಉಷಾ, ಪಂಚಮ ಸ್ಥಾನಿ: ಸುಶ್ಮೀತಾ ಕಡಪಳ, ಇವರುಗಳು ಪಡೆದುಕೊಂಡರು.

ಮ್ಯಾರಥಾನ್ ನಲ್ಲಿ ಪಾಲ್ಗೊಂಡ ಎಲ್ಲರಿಗೂ ಪದಕ,ಹಾಗೂ ಪ್ರಶಸ್ತಿ ಪತ್ರ, ನೀಡಲಾಯಿತು.

ಹಷೀ೯ತ್ ದಾತಡ್ಕ ಸ್ವಾಗತಿಸಿ, ಪ್ರದೀಪ್ ಬೊಳ್ಳೂರು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾಯ೯ಕ್ರಮದ ಯಶಸ್ವಿಗೆ ,ಪ್ರವೀಣ್ ಕುಲಾಲ್ ಪೈಲಾರು, ಪ್ರಭಾಕರನ್ ಪೈಲಾರು, ದೀಪಕ್ ಮಕ್ಕಟ್ಟಿ, ರಾಜೇಶ್ ಅಂಬೆಕಲ್ಲು, ಮಿಥುನ್ ಕೆರೆಗದ್ದೆ, ಅಭಿಲಾಶ್ ಕುಳ್ಳಾಂಪ್ಪಾಡಿ, ಮುರಳಿ ಪೈಲೂರು, ಜನಾಧ೯ನ ಪೈಲೂರು, ಸಾತ್ವೀಕ್ ಮಡಪ್ಪಾಡಿ ಮೊದಲಾದವರು ಸಹಕರಿಸಿದರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬೇವಿನ ಬೀಜದಿಂದ ಆದಾಯದ ಅವಕಾಶ ! ಚಿಕ್ಕಮಗಳೂರಿನ ಯುವ ರೈತನ ಸಕ್ಸಸ್ ಸ್ಟೋರಿ

ಚಿಕ್ಕಮಗಳೂರಿನ ರೈತ ಶಿವಪ್ರಸಾದ್ ಬೇವಿನ ಬೀಜ ಸಂಸ್ಕರಣೆಯ ಮೂಲಕ ಯಶಸ್ಸು ಕಂಡಿದ್ದಾರೆ. ಅವರ…

13 hours ago

ಕಡಿಮೆ ಮಳೆ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟು : ಭಾರತದ ಕೃಷಿಗೆ ಎದುರಾಗುತ್ತಿರುವ ಸವಾಲು

ಕಡಿಮೆ ಮಳೆ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟು ಭಾರತೀಯ ಕೃಷಿಗೆ ದೊಡ್ಡ ಹೊಡೆತವಾಗುವ…

20 hours ago

ಯಾದಗಿರಿಯಲ್ಲಿ ಬಿಸಿಗಾಳಿ ಎಚ್ಚರಿಕೆ – ‘ಯೆಲ್ಲೋ ಅಲರ್ಟ್’ ಘೋಷಣೆ, ಮುನ್ನೆಚ್ಚರಿಕೆ ಪಾಲಿಸಿ..!

ಯಾದಗಿರಿಯಲ್ಲಿ ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕರು ಹಾಗೂ…

20 hours ago

ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ದಾಖಲೆ: ಕಲಬುರಗಿ ಯುವ ರೈತನಿಗೆ ರಾಜ್ಯದ ಮೆಚ್ಚುಗೆ!

ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ಉತ್ತಮ ಇಳುವರಿ ಪಡೆದ ವಿಜಯಕುಮಾರ್ ಪಾಟೀಲ್ ಇತರ ರೈತರಿಗೆ…

2 days ago

2026 ಮುಂಗಾರು ಮುನ್ಸೂಚನೆ – ಕೇರಳಕ್ಕೆ ನಿರೀಕ್ಷೆಗಿಂತ ಮುನ್ನವೇ ಆಗಮನ? – ಮಳೆ ಕಡಿಮೆಯಾಗುವ ಸಾಧ್ಯತೆ- ಕೃಷಿಗೆ ದೊಡ್ಡ ಸವಾಲು

2026ರ ಮುಂಗಾರು ಬೇಗ ಆರಂಭವಾಗುವ ಸಾಧ್ಯತೆ ಇದ್ದರೂ, ಮಳೆಯ ಪ್ರಮಾಣ ಕಡಿಮೆಯಾಗಬಹುದು. ಇದು…

2 days ago

ಈರುಳ್ಳಿಯಲ್ಲಿ ಇಳುವರಿ ಹೆಚ್ಚಿಸುವ ರಹಸ್ಯ..! ಜೇನುನೊಣಗಳ ಪರಾಗಸ್ಪರ್ಶದಿಂದ ಡಬಲ್ ಲಾಭ

ಈರುಳ್ಳಿ ಬೆಳೆಯಲ್ಲಿ ಜೇನುನೊಣಗಳ ಪರಾಗಸ್ಪರ್ಶದಿಂದ ಇಳುವರಿ ಹೆಚ್ಚಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ರೈತರಿಗೆ…

2 days ago