ವೆಸ್ಟ್​ಇಂಡೀಸ್​ ವಿರುದ್ಧ ಭಾರತಕ್ಕೆ 125 ರನ್​ಗಳ ಭರ್ಜರಿ ಗೆಲುವು

June 28, 2019
9:15 AM

ಮ್ಯಾಂಚೆಸ್ಟರ್​: ವಿಶ್ವಕಪ್​ನಲ್ಲಿ ಸ್ಥಿರ ನಿರ್ವಹಣೆಯೊಂದಿಗೆ ಅಜೇಯವಾಗಿ ಉಳಿದಿರುವ ಟೀಂ ಇಂಡಿಯಾ ತನ್ನ ಜಯದ ಓಟವನ್ನು ಮುಂದುವರಿಸಿದ್ದು, ವೆಸ್ಟ್​ ಇಂಡೀಸ್​ ವಿರುದ್ಧ 125 ರನ್​ಗಳ ಭರ್ಜರಿ ಜಯ ದಾಖಲಿಸಿದೆ.

Advertisement
Advertisement

ಭಾರತ ನೀಡಿದ 269 ರನ್​ ಗುರಿ ಬೆನ್ನತ್ತಿದ ವೆಸ್ಟ್​ ಇಂಡೀಸ್​ ತಂಡ 34.2 ಓವರ್​ಗಳಲ್ಲಿ 143 ರನ್​ಗಳಿಗೆ ಆಲೌಟಾಯಿತು. ಈ ಮೂಲಕ ಸತತ 3 ನೇ ಸೋಲು ಕಂಡಿತು.

ಭಾರತ ನೀಡಿದ್ದ ಗುರಿಯನ್ನು ಬೆನ್ನತ್ತಿದ ವೆಸ್ಟ್​ ಇಂಡೀಸ್​ ತಂಡ 16 ರನ್​ ಗಳಿಸುವಷ್ಟರಲ್ಲಿ ಕ್ರಿಸ್​ ಗೇಲ್​ (6) ಮತ್ತು ಶಾಯ್​ ಹೋಪ್​ (5) ವಿಕೆಟ್​ ಕಳೆದುಕೊಂಡಿತು. ನಂತರ ಜತೆಯಾದ ಆಂಬ್ರಿಸ್​ (31) ಮತ್ತು ಪೋರನ್​ (28) ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಲು ಯತ್ನಿಸಿದರು. ಆದರೆ ಇವರಿಬ್ಬರು ಔಟಾದ ನಂತರ ವೆಸ್ಟ್​ ಇಂಡೀಸ್​ನ ಮಧ್ಯಮ ಕ್ರಮಾಂಕ ಮತ್ತು ಕೆಳ ಕ್ರಮಾಂಕದ ಆಟಗಾರರು ಬೇಗ ಔಟಾಗುವ ಮೂಲಕ ವೆಸ್ಟ್​ ಇಂಡೀಸ್​ ತಂಡ ಹೀನಾಯ ಸೋಲನುಭವಿಸಿತು.

ಭಾರತದ ಪರ ಮೊಹಮದ್​ ಶಮಿ 4, ಬುಮ್ರಾ, ಚಾಹಲ್​ ತಲಾ 2 ವಿಕೆಟ್​ ಮತ್ತು ಪಾಂಡ್ಯ, ಕುಲದೀಪ್​ ಯಾದವ್​ ತಲಾ 1 ವಿಕೆಟ್​ ಪಡೆದರು.

ಇದಕ್ಕೂ ಮುನ್ನ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡ ವಿರಾಟ್​ ಕೊಹ್ಲಿ (72) ಮತ್ತು ಎಂ.ಎಸ್​. ಧೋನಿ (56*) ಗಳಿಸಿದ ಅರ್ಧಶತಕಗಳ ನೆರವಿನಿಂದ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 268 ರನ್​ ಗಳಿಸಿತು.

Advertisement

ಟೀಂ ಇಂಡಿಯಾ ಪರ ಆರಂಭಿಕ ಆಟಗಾರ ರೋಹಿತ್​ ಶರ್ಮ (18) ರನ್​ ಗಳಿಸಿ ಔಟಾದರು. ನಂತರ ಕೆ.ಎಲ್​. ರಾಹುಲ್​ ಜತೆಯಾದ ಕೊಹ್ಲಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಲು ಯತ್ನಿಸಿದರು. ಆದರೆ ಅರ್ಧಶತಕ ವಂಚಿತರಾದ ರಾಹುಲ್​ 48 ರನ್​ ಗಳಿಸಿ ಔಟಾದರು. ರಾಹುಲ್​ ಔಟಾದ ಬಳಿಕ ಬಂದ ವಿಜಯ್​ ಶಂಕರ್​ (14) ಮತ್ತು ಕೇದಾರ್​ ಜಾಧವ್​ (7) ರನ್​ ಗಳಿಸಿ ಔಟಾದರು. ಈ ಹಂತದಲ್ಲಿ ಜತೆಯಾದ ಧೋನಿ ಮತ್ತು ಹಾರ್ದಿಕ್​ ಪಾಂಡ್ಯ (46) ಉತ್ತಮ ಜತೆಯಾಟವಾಡಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು.

ವೆಸ್ಟ್​ ಇಂಡೀಸ್​ ಪರ ಕೇಮರ್​ ರೋಚ್​ 3, ಕಾಟ್ರೆಲ್ ಮತ್ತು ಹೋಲ್ಡರ್​ ತಲಾ​ 2 ವಿಕೆಟ್​ ಪಡೆದರು.  ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

41 ವರ್ಷಗಳ ಬಳಿಕ ಭಾರತದ ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾತ್ರಿಗಳ ಅಂತರಿಕ್ಷ ಯಾನ
June 25, 2025
6:27 PM
by: ದ ರೂರಲ್ ಮಿರರ್.ಕಾಂ
 ದೇಶದ ಬಡತನ ಪ್ರಮಾಣ ಗಣನೀಯ ಇಳಿಕೆ
June 25, 2025
4:12 PM
by: ದ ರೂರಲ್ ಮಿರರ್.ಕಾಂ
ಒಂದೇ ದಿನ 3,400 ಗುಂಡಿಗಳನ್ನು ಮುಚ್ಚುವ “ವಿಶ್ವ ದಾಖಲೆ”
June 25, 2025
2:34 PM
by: The Rural Mirror ಸುದ್ದಿಜಾಲ
ಗ್ರಾಮೀಣ ಉದ್ಯಮಿಗಳ  ಸಬಲೀಕರಣ
June 25, 2025
11:26 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group