ಸುದ್ದಿಗಳು

ವೈರಸ್ ಹರಡುವುದು ತಡೆಗೆ ಶಾಂತಿ ಹವನ | ಆಯುರ್ವೇದ ಗಿಡಮೂಲಿಕೆಗಳೇ ಇಲ್ಲಿ ಹವಿಸ್ಸು | ಹೇಗೆ ವರ್ಕ್ಔಟ್ ಆಗುತ್ತದೆ ?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸುಳ್ಯ: ದೇಶದಾದ್ಯಂತ ಕೊರೊನಾ ವೈರಸ್ ಹರಡುವುದು ತಡೆಗೆ ವಿವಿಧ ಪ್ರಯತ್ನ ಮಾಡಲಾಗುತ್ತಿದೆ. ಲಾಕ್ಡೌನ್ ಮೂಲಕ ಜನರು ಮನೆಯಿಂದ ಹೊರಬರದಂತೆ ಎಚ್ಚರಿಕೆ ವಹಿಸುವುದು  ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು  ನಡೆಯುತ್ತಿದೆ. ಇದರ ಜೊತೆಗೆ ಆಯುರ್ವೇದ ಗಿಡಮೂಲಿಕೆಗಳ ಹವಿಸ್ಸಿನಿಂದ ಶಾಂತಿ ಹವನ ಮಾಡುವ ಮೂಲಕ ವೈರಸ್ ಪ್ರಭಾವ ತಗ್ಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಲೋಕಹಿತಕ್ಕಾಗಿ ಈ ಕಾರ್ಯದಲ್ಲಿ ಸಾಮಾಜಿಕ ಕಾಳಜಿಯೂ ಇದೆ.

Advertisement

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ವಳಲಂಬೆಯ ಹಿರಿಯ ವೈದಿಕ ವಿದ್ವಾಂಸರೂ, ಮಾರ್ಗದರ್ಶಕರೂ ಆಗಿರುವ ವೇದಗುರು ಕರುವಜೆ ಕೇಶವ ಜೋಯಿಸರ ನೇತೃತ್ವದಲ್ಲಿ ಈ ಹವನ ನಡೆಯುತ್ತಿದೆ. ಮಾ.20 ರಿಂದ ಆರಂಭವಾಗಿರುವ ಈ ಹವನ ಕಿಲೋ ಮೀಟರ್ ಗೆ ಒಂದು ಮನೆಯಂತೆ ನಿರಂತರವಾಗಿ ನಡೆಯುತ್ತಿದೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಸ್ವಆಸಕ್ತಿಯಿಂದ ಈ ಕಾರ್ಯ ನಡೆಸುತ್ತಿರುವ ಕರುವಜೆ ಕೇಶವ ಜೋಯಿಸರು ಲೋಕವು ಸಂಕಷ್ಟದಲ್ಲಿ ಇರುವ ಸಂದರ್ಭ ಯಜ್ಞದ ಮೂಲಕ ಜನರಿಗೆ ಮಾನಸಿಕ ಧೈರ್ಯ ತುಂಬುವ ಕಾರ್ಯ ನಡೆಸುತ್ತಿದ್ದಾರೆ. ಜೊತೆಗೆ ಆಯುರ್ವೇದದ ಸಾರವನ್ನೂ ತಿಳಿಸುತ್ತಿದ್ದಾರೆ.

 

 

Advertisement

ಆಯುರ್ವೇದಲ್ಲಿ  ವಿವಿಧ ಗಿಡ ಮೂಲಿಕೆಗಳು ಕಷಾಯಗಳು , ಲೇಹಗಳು, ಆಸವಗಳು, ಅರಿಷ್ಟಗಳು  ದೇಹಕ್ಕೆ ರಕ್ಷಣೆ ನೀಡುತ್ತದೆ, ಅದರಿಂದ ದೇಹದ ಆರೋಗ್ಯ ಕಾಪಾಡುತ್ತದೆ.  ವ್ಯಾಧಿಗಳು ನಿವಾರಣೆಯಾಗುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈಗ ಅಂತಹದ್ದೇ ವನಸ್ಪತಿಗಳನ್ನು ಯಜ್ಞಕ್ಕೆ ಹವಿಸ್ಸಿನ ರೂಪದಲ್ಲಿ  ಅರ್ಪಿಸಿ ಆ ಧೂಮವು ಪರಿಸರಕ್ಕೆ ಹರಡಿದರೆ ವೈರಾಣುಗಳ ಪ್ರಭಾವ ತಗ್ಗಿಸಬಹುದು  ಎಂಬುದು ಗ್ರಂಥಗಳಲ್ಲಿ ಹೇಳಲಾಗಿದೆ. ಈಗ ಅದೇ ಮಾದರಿಯಲ್ಲಿ  ಪ್ರಯತ್ನ ಮಾಡಲಾಗುತ್ತಿದೆ. ಹಾಗೆಂದು  ಈ ಯಜ್ಞ ಮಾಡಿದ ತಕ್ಷಣವೇ ವೈರಾಣುಗಳು ಸುಳಿಯುವುದಿಲ್ಲ ಎಂಬುದಲ್ಲ , ಪರಿಸರವು ಯಜ್ಞದ ಧೂಮದ ಮೂಲಕ ಸ್ವಚ್ಛವಾಗಿ ವೈರಾಣುಗಳಿದ್ದರೆ ಅವುಗಳ ಪ್ರಭಾವ ತಗ್ಗಬಹುದು  ಎಂದು ಹೇಳುತ್ತಾರೆ ಕೇಶವ ಜೋಯಿಸರು.

ಇಲ್ಲಿ ಯಜ್ಞಕ್ಕೆ ಅಮೃತಬಳ್ಳಿ, ಕಿರಾತಕಡ್ಡಿ, ನೆಕ್ಕಿ , ಹಿಪ್ಪಲಿ, ಎಕ್ಕೆ , ಅಶೋಕ, ಉತ್ತರಣೆ, ಅತ್ತಿ, ಅರಸಿನ, ಗೋಳಿ, ಗರಿಕೆ, ಲವಂಗ, ನೆಲ್ಲಿ  ಹೀಗೆ ವಿವಿಧ ಬಗೆಯ ಆಯುರ್ವೇದ ಗುಣವುಳ್ಳ ವಸ್ತುಗಳನ್ನು ಹವಿಸ್ಸಾಗಿ ಅರ್ಪಣೆ ಮಾಡಲಾಗುತ್ತದೆ.

ಪ್ರತೀ ಮನೆಯಲ್ಲಿ  ಕೂಡಾ ಪ್ರತಿಯೊಬ್ಬರು ಆಯುರ್ವೇದ ಗುಣವುಳ್ಳ ವಸ್ತುಗಳನ್ನು ಹವಿಸ್ಸಾಗಿ ಪ್ರತೀ ದಿನವೂ ಮನೆಯವರೇ ಮಾಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದಲ್ಲದೆ ಆ ವಾತಾವರಣ ಶುದ್ಧವಾಗಬಹುದು  ಎಂದು ಕೇಶವ ಜೋಯಿಸರು ಹೇಳುತ್ತಾರೆ.

 

 

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ಬದಲಾವಣೆಯಿಂದ ನಿದ್ರೆಯ ಮೇಲೆ ಪರಿಣಾಮ – ಅಧ್ಯಯನ ವರದಿ

ಹವಾಮಾನ ಬದಲಾವಣೆಯಿಂದ  ಹಾಗೂ ತಾಪಮಾನದ ದಿಢೀರ್‌ ಬದಲಾವಣೆಗಳು ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಪ್ರಕರಣ ಹೆಚ್ಚಾಗುತ್ತಿದೆ…

3 hours ago

ಮಾರುಕಟ್ಟೆ ಶುಲ್ಕ ಬದಲಾವಣೆ ಮಾಡಬಾರದೆಂಬ ಕ್ಯಾಂಪ್ಕೋ ಬೇಡಿಕೆ ಪರಿಗಣನೆ

ಕ್ಯಾಂಪ್ಕೋದಿಂದ ಸಂಗ್ರಹಿಸುತ್ತಿರುವ ಶೇಕಡ 0.48ರಷ್ಟು ಮಾರುಕಟ್ಟೆ ಶುಲ್ಕದಲ್ಲಿ ಯಾವುದೇ ಬದಲಾವಣೆ ಮಾಡಬಾರದೆಂಬ ಸಂಸ್ಥೆಯ…

3 hours ago

ಹೊಸರುಚಿ | ಹಲಸಿನ ಬೀಜದ ಪರೋಟ

ಹಲಸಿನ ಬೀಜದ ಪರೋಟ : ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ :  ಹಲಸಿನ…

4 hours ago

ಮಂಗಳದ ದೃಷ್ಟಿ | ಈ ರಾಶಿಗಳಿಗೆ ಆಕ್ರಮಣಕಾರಿ ತೀರ್ಮಾನಗಳಿಂದ ಲಾಭ..!

ವೈದಿಕ ಜ್ಯೋತಿಷ್ಯದಲ್ಲಿ ಮಂಗಳ ಗ್ರಹವು ಶಕ್ತಿ, ಧೈರ್ಯ, ಮತ್ತು ಆಕ್ರಮಣಕಾರಿ ನಿರ್ಧಾರಗಳ ಸಂಕೇತವಾಗಿದೆ.…

4 hours ago

ಕೇತುವಿನ ಕಾಟ: ಈ ರಾಶಿಗಳಿಗೆ ಆರೋಗ್ಯದಲ್ಲಿ ಎಚ್ಚರಿಕೆ ಬೇಕು..!

ಜ್ಯೋತಿಷ್ಯ ಶಾಸ್ತ್ರದಲ್ಲಿ ಕೇತು ಒಂದು ನಿಗೂಢ ಗ್ರಹವಾಗಿದ್ದು, ಆಧ್ಯಾತ್ಮಿಕತೆ, ಕರ್ಮ, ಮತ್ತು ಜೀವನದಲ್ಲಿ…

1 day ago